ಕುಷ್ಟಗಿ: ನಾಗಸಾಧುಗಳ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಶತ ಚಂಡಿ ಮಹಾಯಜ್ಞ

ಭಕ್ತರಿಗೆ ಒಂದೂವರೆ ಲಕ್ಷ ಪಂಚಮುಖ ರುದ್ರಾಕ್ಷಿ ವಿತರಣೆ

Team Udayavani, Sep 21, 2022, 9:53 PM IST

1-ewrewr

ಕುಷ್ಟಗಿ:ನಾಗಸಾಧುಗಳ ನೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ವಿಶ್ವ ಕಲ್ಯಾಣರ್ಥವಾಗಿ ಸೆ.26ರಿಂದ ಅ.4ರವರೆಗೆ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರ ದೇವಸ್ಥಾನದಲ್ಲಿ ಶತ ಚಂಡಿ ಮಹಾಯಜ್ಞ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಅ.26ರಂದು ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದಿಂದ ಶ್ರಿ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಸನ್ನಿಧಿಯವರೆಗೂ 11 ನಾಗ ಸಾಧುಗಳ ಸನ್ನಿಧಾನದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಕುಂಭ ಮೆರವಣಿಗೆ ಹಾಗೂ ಘಟಸ್ಥಾಪನೆ ಗಣಪತಿ ಪೂಜೆ ಆಯೋಜಿಸಲಾಗಿದೆ.

ಸೆ.27ರಂದು ದಶವಿಧಿಸ್ನಾನ ಹಾಗೂ ಪ್ರಾಯಾಶ್ಚಿತ ಕರ್ಮ ಮಹಾಸಂಕಲ್ಪ ಶ್ರೀದೇವಿಗೆ ಅಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಸೆ.28ರಂದು ಯತ್ನಶಾಲಾ ಪ್ರವೇಶ, ಮಂಡಲ ಸ್ಥಾಪನೆ, ದೇವಾನು ದೇವತೆಗಳಿಗೆ ಹೋಮದಿಂದ ಅಹ್ವಾನ ನೆರವೇರಲಿದೆ. ಸೆ.29ರಂದು ಎಲ್ಲಾ ದೇವಾನು ದೇವತೆಗಳನ್ನು ಅಹ್ವಾನಿಸಿ ಪೂಜಿಸಿ, ಮಂಡಲ ಪೂಜೆ ನೆರವೇರಲಿದ್ದು ನಂತರ ಅಗ್ನಿ ಸ್ಥಾಪನೆಯಾಗಲಿದೆ.

ಸೆ.30 ರಂದು ಅಹ್ವಾನಿಸಿದ ದೇವತೆಗಳ ಪೂಜೆ ಮಂಡಲ ಪೂಜೆ ಶತ್ ಚಂಡಿ ಯಜ್ಞ ಆರತಿ ಮೂಲಕ ಆರಂಭಿಸಲಾಗುವುದು. ಅ.1ರಂದು ಮಂಡಲ ಪೂಜೆ, ಮಹಾಯಜ್ಞ , ಮಹಾ ಪ್ರಸಾದ್ ನೆರವೇರಲಿದೆ. ಅ.2ರಂದು ದೇವರ ಪೂಜೆ, ಮಂಡಲ ಪೂಜೆ, ಮಹಾಯಜ್ಞ ಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮವಿದೆ ಅ.3ರಂದು ದೇವರ ಪೂಜೆ, ಮಂಡಲ ಪೂಜೆ, ಮಹಾಯಜ್ಞ ಪೂಜೆ ಹಾಗೂ ಮಹಾಪ್ರಸಾದ ಇದೆ.

ಅ.4ರಂದು ಎಲ್ಲಾ ದೇವಾನು ದೇವತೆಗಳನ್ನು ಅಹ್ವಾನಿಸಿ 9 ದಿನಗಳ ಕಾಲ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಬಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಯಜ್ಞಪೂಜೆಯ ಬಳಿಕ ನಾಗಸಾಧುಗಳ ನೇತೃತ್ವದಲ್ಲಿ ಕುಷ್ಟಗಿ ಪಟ್ಟಣದಲ್ಲಿ ಶೋಭಾ ಯಾತ್ರೆ ಜರುಗಲಿದೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾಧಿಗಳಿಗೆ ಒಂದೂವರೆ ಲಕ್ಷ ಪಂಚಮುಖದ ರುದ್ರಾಕ್ಷಿ ವಿತರಿಸಲಾಗುವುದು ಎಂದು ನಿಡಶೇಸಿಯ ಶ್ರೀ ಮಠದ ಮರಿಸ್ವಾಮೀಜಿ ಶ್ರೀ ವಿಶ್ವೇಶ್ವರಯ್ಯ ಹೇಳೀದರು.

ಈ ವೇಳೆ ಅಮರನಾಥೇಶ್ವರ ಮಹಾದೇವಮಠದ ನಾಗಸಾಧು ಆಶ್ರಮದ ಪೀಠಾಧೀಶರಾದ ಶ್ರೀ ಮಹಾಂತ ಸಹದೇವಾನಂದ ಗಿರೀಜಿ, ಶ್ರೀ ಬಾಲ ಯೋಗಿ ಮಹಾಂತ ಕನ್ಯಾ ಗಿರೀಜಿ ಮಹಾರಾಜ್, ಮಹಾಂತ ಮಹೇಶಾನಂದ ಬಾಬಾಜಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಲ್ಲಣ್ಣ ತಾಳದ್, ಮಹೇಶ ಹಿರೇಮಠ ಮತ್ತಿತರರಿದ್ದರು.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.