ಚಳಿಯನ್ನೂ ಲೆಕ್ಕಿಸದೇ ಪತ್ರಿಕೆ ವಿತರಿಸುವ ಹುಡುಗರಿಗೆ ಸ್ವೆಟರ್ ನೀಡಿದ ಶುಕರಾಜ್ ತಾಳಕೇರಿ
Team Udayavani, Jan 4, 2022, 9:21 PM IST
ಕುಷ್ಟಗಿ: ಪ್ರತಿ ದಿನ ಬೆಳಗಿನ ಜಾವ ಮೈ ನಡುಕದ ಚಳಿ ಲೆಕ್ಕಿಸದೇ ಮನೆ ಮನೆಗೂ ಪತ್ರಿಕೆ ಹಂಚುವ ಹುಡುಗರ ಪರಿಸ್ಥಿತಿಗೆ ಸ್ಥಳೀಯರಾದ ಶುಕರಾಜ್ ತಾಳಕೇರಿ ಅವರು ಸ್ವೆಟರ್ ಕೊಡಿಸಿ ಮಾನವೀಯ ಸ್ಪಂಧನೆ ಮೆರೆದಿದ್ದಾರೆ.
ಪ್ರಥಮ ದರ್ಜೆ ಗುತ್ತಿಗೆದಾರರಾದ ಶುಕರಾಜ್ ತಾಳಕೇರಿ ಅವರ ಮನೆಗೆ ಪತ್ರಿಕೆ ಹಾಕಲು ಬಂದ ಹುಡುಗನಿಗೆ ಯಾವೂದೇ ಸ್ವೆಟರ್ ಇರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದ ಹುಡುಗನ ಸ್ಥಿತಿಗೆ ಮನಃ ಕರಗಿ, ದಿನಪತ್ರಿಕೆ ಹಂಚುವ ಹುಡುಗರಿಗೆ ಸ್ವೆಟರ್ ಕೊಡಿಸಲು ನಿರ್ಧರಿಸಿದರಲ್ಲದೇ ಇದರ ಪ್ರಚಾರ ಬೇಡವೆ ಬೇಡವೆಂದಿದ್ದರು. ಆದರೆ ಉದಯವಾಣಿ ದಿನಪತ್ರಿಕೆಯ ಏಜೆಂಟ್ ಜಮದಗ್ನಿ ಗುರಿಕಾರ ಅವರು, ಮಾನವೀಯ ಕಾಳಜಿಗೆ ಯಾರೂ ಸ್ಪಂಧಿಸಿರಲಿಲ್ಲ.
ಶುಕರಾಜ್ ಅವರೇ ನಮ್ಮಕಷ್ಟಕ್ಕೆ ಕರಗಿ ಸ್ವೇಟರ್ ಕೊಡಿಸಿದ್ದು ನಮ್ಮಸೇವೆಯನ್ನು ಸಮಾಜ ಪ್ರೋತ್ಸಾಹಿಸಿದ್ದಾರೆ. ಅಂತೆಯೇ ಪತ್ರಿಕೆ ಹಂಚುವ ಹುಡುಗರ ಪಾಲಕರಿಗೆ ಸಮಾಜದಿಂದ ಈ ರೀತಿಯ ಮಾನವೀಯ ಸ್ಪಂಧನೆ ಸಿಕ್ಕಿರಿವುದು ಅವರೂ ಖುಷಿ ಹಂಚಿಕೊಂಡಿದ್ದಾರೆ. ಶುಕರಾಜ್ ತಾಳಕೇರಿ ಅವರ ಈ ಸ್ವೇಟರ್ ಕೊಡುಗೆ ಪ್ರಚಾರಕ್ಕೆ ಅಲ್ಲಾ ಪ್ರೇರಣೆಗಾಗಿ ಆಗಿದೆ ಎಂದರು.
ಇದನ್ನೂ ಓದಿ : ಸೌರವ್ಯವಸ್ಥೆಯಾಚೆಗಿನ ನಿಗೂಢ ಜಗತ್ತಿನತ್ತ ಪಯಣ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ