ಟಕ್ಕಳಕಿ ಗೌಡರ ಸಿರಿಧಾನ್ಯ ಕೃಷಿ-ಖುಷಿ


Team Udayavani, Nov 13, 2019, 2:52 PM IST

KOPALA-TDY-2

ಕುಷ್ಟಗಿ: ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಶಿವನಗೌಡ ಪಾಟೀಲ ಅವರು, ಏಳು ಏಕರೆ ಜಮೀನಿನಲ್ಲಿ ನವಣೆ, ಬರಗ, ಕೊರಲೆ, ಸಜ್ಜೆ, ಸಾಮೆ ಸೇರಿ ಐದು ವಿಧದ ಸಿರಿಧಾನ್ಯ ಬೆಳೆದಿದ್ದು, ಸಿರಿಧಾನ್ಯದಲ್ಲಿ ಮಾದರಿ ರೈತರೆನಿಸಿದ್ದಾರೆ.

ಟಕ್ಕಳಕಿಯ ರೈತ ಶಿವನಗೌಡ ಪಾಟೀಲ ತಮ್ಮ 17 ಎಕರೆ ಜಮೀನಿಲ್ಲಿ ಒಂದಿಲ್ಲೊಂದು ಕೃಷಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೋಳ, ಕಡಲೆ, ಸೂರ್ಯಕಾಂತಿ ಇತ್ಯಾದಿ ಸಾಂಪ್ರದಾಯಕ ಬೆಳೆ ಬೆಳೆಯುತ್ತಿದ್ದ ಶಿವನಗೌಡ ಪಾಟೀಲ ಕಳೆದ 9 ವರ್ಷಗಳಿಂದ ಸಿರಿಧಾನ್ಯ ಬೆಳೆಯಲು ಮುಂದಾಗಿ ಅಪ್ಪಟ ಸಾವಯವ ಕೃಷಿಕ ಎನಿಸಿಕೊಂಡಿದ್ದಾರೆ. ಈಗಲೂ ತಮ್ಮ ಮನೆಯಲ್ಲಿ ಸಿರಿಧಾನ್ಯಗಳ ಆಹಾರವನ್ನೇ ಬಳಸುತ್ತಿದ್ದು, ಇತರೇ ರೈತರು ಈ ಧಾನ್ಯಗಳನ್ನು ಬೆಳೆಯಲು ಬೀಜಗಳನ್ನು ನೀಡುತ್ತಿದ್ದು, ಸದ್ದಿಲ್ಲದೇ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೇರಣೆಯಾಗುತ್ತಿದ್ದಾರೆ.  ಸಿರಿಧಾನ್ಯ ಆರೋಗ್ಯಕರ ಆಹಾರವಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಬೆಳೆದ ಇತರೇ ರೈತರು ಬೆಳೆದ ಸಿರಿಧಾನ್ಯಗಳನ್ನು ಮೌಲ್ಯವರ್ಧಿತಗೊಳಿಸಿ ಮಾರಾಟ ಮಾಡಿ, ಎಲ್ಲರಿಗೂ ಲಭಿಸುವಂತಾಗುವುದು ಮುಂದಿನ ಯೋಜನೆಯಾಗಿದೆ.

ಸಿರಿಧಾನ್ಯಕ್ಕೆ ಮೀಸಲು: ತಮ್ಮ 17 ಎಕರೆ ಜಮೀನಿಲ್ಲಿ 7 ಎಕರೆ ಸಿರಿಧಾನ್ಯಕ್ಕೆ ಮೀಸಲಿಟ್ಟಿದ್ದು, ಉಳಿದ ಜಮೀನಿಲ್ಲಿ ಬಿಳಿ ಜೋಳ, ಕಡಲೆ, ಕುಸುಬೆ ಇತ್ಯಾ ದಿ ಬೆಳೆದಿದ್ದಾರೆ. ಈ 7 ಎಕರೆಯ ಸಿರಿಧಾನ್ಯದಲ್ಲಿ ಮೂರು ತಿಂಗಳಿಗೆ ಕಟಾವಿಗೆ ಬರುವ ಕೊರಲೆ, ಸಾಮೆ, ನವಣೆ, ಜವಾರಿ ಸಜ್ಜೆ ಬೆಳೆಯಲ್ಲಿ ತೊಗರೆ ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಕೊರಲೆ ನವಣೆ 2 ಎಕರೆ, ಸಾಮೆ, ಜವಾರಿ ಸಜ್ಜೆ, ಬರಗ (ಆರ್ಕ) ತಲಾ 1 ಎಕರೆಯಲ್ಲಿ ಬೆಳೆದಿದ್ದಾರೆ. ಮೂರು ತಿಂಗಳ ಬೆಳೆಯಾಗಿರುವ ಕೊರಲೆ, ಸಾಮೆ, ನವಣೆ ಕಟಾವಿಗೆ ಬಂದಿದ್ದು, ಕೊರಲೆ 5 ಕ್ವಿಂಟಲ್‌, ಸಾಮೆ, ನವಣೆ ತಲಾ 2 ಕ್ವಿಂಟಲ್‌, ಸಜ್ಜೆ ಹಾಗೂ ಬರಗ ತಲಾ ಒಂದೂವರೆ ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಮೂಲ ಬೀಜ ಸಂಗ್ರಹ: ರೈತ ಶಿವನಗೌಡ ಪಾಟೀಲ ಅವರು, ಸಿರಿಧಾನ್ಯ ಬೆಳೆಯುವುದಷ್ಟೇ ಅಲ್ಲ ಅವರು, ಮೂಲ ತಳಿಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ತಾವು ಬೆಳೆದು ಸಂಗ್ರಹಿಸಿರುವ ದೋಸೆ ಜೋಳ, ಕೆಂಪು ಜೋಳ, ಸಕ್ಕರೆಮುಕರಿ ಜೋಳ, ಗಟ್ಟಿ ತೆನೆ ಜೋಳ, ಬಿಳಿಗುಂಡಿ ಜೋಳ, ಕರಿ ಕಡಲೆ, ಜವಾರಿ ಹೆಸರು, ಜವಾರಿ ಉದ್ದು,ಜವಾರಿ ಅಲಸಂದಿ, ಎಳ್ಳು. ಜವಾರಿ ಹತ್ತಿಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ಈ ಬೆಳೆಯನ್ನು ಬಿತ್ತಲಿಚ್ಚಿಸುವ ರೈತರು ಶಿವನಗೌಡ ಪಾಟೀಲ ಅವರನ್ನು ಸಂಪರ್ಕಿಸಿ ಬೀಜ ಒಯ್ಯುತ್ತಿದ್ದಾರೆ.

ಸಿರಿಧಾನ್ಯಗಳನ್ನು ಮೌಲ್ಯವ ರ್ಧಿತಗೊಳಿಸುವ ಹಾಗೂ ಸೂಕ್ಷ ವ್ಯವಸ್ಥೆ ಇದ್ದರೆ, ರೈತರು ಈ ಧಾನ್ಯಗಳನ್ನು ಬೆಳೆಯಲು ಇಚ್ಚಿಸುತ್ತಾರೆಯೇ ಹೊರತು, ಸರ್ಕಾರ ಪ್ರಚಾರ, ಪ್ರೋತ್ಸಾಹ ಧನದಿಂದ ಸಿರಿಧಾನ್ಯಗಳನ್ನು ಬೆಳೆಯಲು ಸಾಧ್ಯವಿಲ್ಲ. –ಶಿವನಗೌಡ ಪಾಟೀಲ, ರೈತ ಟಕ್ಕಳಕಿ ಗ್ರಾಮ

 

-ಮಂಜುನಾಥ ಮಹಾಲಿಂಗಪು

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.