ಎಂಡಿಸಿಸಿ ಬ್ಯಾಂಕ್ ಗದ್ದುಗೆಗಾಗಿ ಗುದ್ದಾಟ
ಅಧಿಕಾರಕ್ಕಾಗಿ ದಳ-ಕಮಲ ತಂತ್ರ, ಅಧಿಕಾರ ಉಳಿಸಿಕೊಳ್ಳಲು "ಕೈ'ಕುತಂತ್ರ
Team Udayavani, Nov 16, 2020, 4:38 PM IST
ಮಂಡ್ಯ: ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಗದ್ದುಗೆ ಹಿಡಿಯಲು ಪೈಪೋಟಿ ಎದುರಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅಧಿಕಾರ ಹಿಡಿಯಲು ತಂತ್ರ ಹೆಣೆದಿದೆ. ಇದರಿಂದ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ಗೆ ಅಧಿಕಾರ ಉಳಿಸಿಕೊಳ್ಳುವ ಆತಂಕ ಎದುರಾಗಿದೆ. ನ.17ರಂದು ಚುನಾವಣೆ ನಡೆಯಲಿದೆ.
ಈಗಾಗಲೇ 12 ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್8 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಆದರೆ, ಪ್ರಸ್ತುತ ಬದಲಾದ ರಾಜಕೀಯದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ರಣತಂತ್ರ ಹೆಣೆಯುತ್ತಿವೆ.
ಒಗ್ಗಟ್ಟು ಪ್ರದರ್ಶನ: ಡಿಸಿಸಿ ಬ್ಯಾಂಕ್ನ 15 ನಿರ್ದೇಶಕ ಸ್ಥಾನಗಳ ಬಲಾಬಲವಿದ್ದು, ಕಾಂಗ್ರೆಸ್8, ಜೆಡಿಎಸ್ 4 ಹಾಗೂ 3 ಸರ್ಕಾರದ ನಾಮ ನಿರ್ದೇಶಕರಿದ್ದಾರೆ. ಆಡಳಿತ ಮಂಡಳಿ ರಚಿಸಲು 8 ಬಹುಮತ ಅಗತ್ಯವಿದೆ. ಈಗಾಗಲೇ ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದ್ದು, ಅಧಿಕಾರ ಹಿಡಿಯಲು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.
ಈಹಿ ನ್ನೆಲೆಯಲ್ಲಿ ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದರು. ದಳ-ಕಮಲ ಮೈತ್ರಿ:ಕಾಂಗ್ರೆಸ್ಗೆ ಅಧಿಕಾರ ತಪ್ಪಿಸಲು ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಜೆಡಿಎಸ್ನ 4, ಸರ್ಕಾರದ ನಾಮನಿರ್ದೇಶಕ 3 ಸೇರಿದಂತೆ ಒಟ್ಟು 7 ಸದಸ್ಯರ ಬಲ ಸಿಗಲಿದೆ. ಕಾಂಗ್ರೆಸ್ನಿಂದ ಅತೃಪ್ತರನ್ನು ಸೆಳೆದು ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿವೆ.
ದಳಪತಿ ಭೇಟಿ ಮಾಡಿದ ಅಶ್ವಥ್: ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಅಶ್ವಥ್ ಈಗಾಗಲೇ ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ. ಇದರಿಂದ ಅಶ್ವಥ್ ರನ್ನು ಸೆಳೆದುಕೊಂಡು ಅಧ್ಯಕ್ಷನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್ ಮುಂದಾಗಿದೆ. ಇತ್ತ ಅಶ್ವಥ್ ಕಾಂಗ್ರೆಸ್ನಿಂದಾಗಲಿ ಅಥವಾ ಜೆಡಿಎಸ್ ಬೆಂಬಲದಿಂದಾಗಲಿ ಅಧ್ಯಕ್ಷನಾಗಲೇಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಪಿಎಂಎನ್ ನಿರ್ದೇಶಕ ಸ್ಥಾನ ತಪ್ಪಿಸಲು ಒಂದಾದ ದಳಪತಿಗಳು: ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿರುವ ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರನ್ನು ಅಪೆಕ್ಸ್ ಬ್ಯಾಂಕ್ನಿರ್ದೇಶಕರಾಗಿ ಆಯ್ಕೆಯಾಗುವುದನ್ನು ತಪ್ಪಿಸಲು ದಳಪತಿಗಳು ಒಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಶಾಸಕರಾದ ಸಿ.ಎಸ್.ಪುಟ್ಟರಾಜು ಹಾಗೂ ಕೆ. ಅನ್ನದಾನಿ ಅಖಾಡಕ್ಕೆ ಇಳಿದಿದ್ದು, ಜೆಡಿಎಸ್ ನಿರ್ದೇಶಕರು ಸೇರಿದಂತೆಕಾಂಗ್ರೆಸ್ನ ಅಶ್ವಥ್ ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ನಿಂದ ಎಚ್.ಸಿ.ಕಾಳೇಗೌಡ ರೇಸ್ನಲ್ಲಿದ್ದಾರೆ.
ಜಿಲ್ಲಾ ಉಪ ನಿಬಂಧಕರ ವರ್ಗಾವಣೆ : ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಸಿಎಂ ಸೂಚನೆಯಂತೆ ಜಿಲ್ಲಾ ಉಪನಿಬಂಧಕ ವಿಕ್ರಮರಾಜ್ಅರಸ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದೆ. ನಾಮನಿರ್ದೇಶಕರಾಗಿರುವ ಜಿಲ್ಲಾ ಉಪನಿಬಂಧಕರನ್ನು ವರ್ಗಾವಣೆ ಮಾಡಿರುವುದುಕಾಂಗ್ರೆಸ್ ವಲಯದಲ್ಲಿ ತಳಮಳ ಶುರುವಾಗಿದೆ. ಆ ಜಾಗಕ್ಕೆ ಸಹಾಯಕ ಉಪನಿಬಂಧಕ ಶಂಕರ್ ಅವರಿಗೆ ಪ್ರಭಾರ ವಹಿಸಲಾಗಿದೆ. ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ್ಬ್ಯಾಂಕ್ ಅಧಿಕಾರಿ, ಬಿಜೆಪಿ ಸರ್ಕಾರದ ನಾಮನಿ ರ್ದೇಶಕರೊಬ್ಬರು ಮತ ಹಕ್ಕು ಹೊಂದಿದ್ದಾರೆ.
ಅಶೋಕ್-ಅಶ್ವಥ್ ಪ್ರಬಲ ಆಕಾಂಕ್ಷಿಗಳು : ಕಾಂಗ್ರೆಸ್ನಿಂದ ಮಂಡ್ಯ ತಾಲೂಕುಪ್ರಾ ಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆದ್ದಿರುವ ಅಶ್ವಥ್ ಹಾಗೂ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳುಮತ್ತು ನಗರ ಸಹಕಾರಬ್ಯಾಂಕ್ಹಾಗೂವ್ಯವಸಾಯೇತರಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಹಾಲಹಳ್ಳಿ ಎಚ್.ಅಶೋಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.ಆದರೆ,ಅಶ್ವಥ್ ಅವರು ಚುನಾವಣೆಯಲ್ಲಿ ಕಾಂಗ್ರೆಸ್ಪಕ್ಷದ ನಾಯಕರು ನನಗೆಬೆಂಬಲನೀಡಿಲ್ಲಎಂದು ಅಸಮಾಧಾನ ಹೊರ ಹಾಕಿದ್ದರು.ಇದು ಕಾಂಗ್ರೆಸ್ಗೆ ಮುಳುವಾಗುವ ಸಾಧ್ಯತೆಇದೆ.
–ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ