ಮಂಡ್ಯ ನಗರದಲ್ಲಿ ಅವಾಂತರ ಸೃಷ್ಟಿಸಿದ ವರುಣ
Team Udayavani, May 20, 2021, 6:03 PM IST
ಮಂಡ್ಯ: ಬುಧವಾರ ಸಂಜೆ ಸುರಿದಮಳೆಯಿಂದ ಮಂಡ್ಯ ನಗರ ಸೇರಿದಂತೆವಿವಿಧೆಡೆ ಮಳೆರಾಯ ಅವಾಂತರಸೃಷ್ಟಿಸಿದ್ದಾನೆ. ಆದರೆ, ಅದೃಷ್ಟ ವಶಾತ್ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಧ್ಯಾಹ್ನ 3.35ರಲ್ಲಿ ಪ್ರಾರಂಭವಾದಮಳೆ, ಭಾರೀ ಬಿರುಗಾಳಿ ಸಹಿತಜೋರಾಗಿ ಸಂಜೆ 4.45ರವರೆಗೆಸುರಿಯಿತು. ಇದರಿಂದ ನಗರದನೂರಡಿ ರಸ್ತೆಯಲ್ಲಿ ಎರಡು ಮರಗಳು ಬುಡ ಸಮೇತ ಧರೆಗುರುಳಿವೆ.ಅದರಂತೆ ಆರ್.ಪಿ.ರಸ್ತೆ, ಹೌಸಿಂಗ್ಬೋರ್ಡ್, ಚಂದಗಾಲು ಲೇಔಟ್,ಹೊಸಹಳ್ಳಿ, ಗಾಂಧಿನಗರ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿದ್ದು,ಅಂಗಡಿ, ಮನೆಗಳಿಗೆ ಹಾನಿಯಾಗಿದೆ. ಮರಗಳು ರಸ್ತೆಗೆ ಉರುಳಿದ್ದರಿಂದ ರಸ್ತೆಸಂಚಾರ ಬಂದ್ ಆಗಿದೆ. ಅಲ್ಲದೆ, ವಿವಿರಸ್ತೆ, ಸರ್ಎಂವಿ ಕ್ರೀಡಾಂಗಣ, ವಿವೇಕಾನಂದರಸ್ತೆ, ಪೊಲೀಸ್ ಗ್ರೌಂಡ್ಗಳಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿತ್ತು.
ವಿದ್ಯುತ್ ಕಡಿತ: ಮರಗಳು ವಿದ್ಯುತ್ಕಂಬಗಳು, ತಂತಿಗಳ ಮೇಲೆಬಿದ್ದಿದ್ದರಿಂದ ಕಂಬಗಳು ನೆಲಕ್ಕುರುಳಿವೆ.ಇದರಿಂದ ಬಹುತೇಕ ಮಂಡ್ಯನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.ನೂರಡಿ ರಸ್ತೆ, ಹೌಸಿಂಗ್ ಬೋರ್ಡ್,ಸುಭಾಷ್ನಗರ, ಆರ್.ಪಿ.ರಸ್ತೆಗಳಲ್ಲಿಮರಗಳು ವಿದ್ಯುತ್ ಕಂಬ ಹಾಗೂಮನೆಗಳ ಮೇಲೆ ಬಿದ್ದಿದ್ದು, ಹಾನಿಉಂಟಾಗಿದೆ.ನೆಲಕ್ಕುರುಳಿದ ಬ್ಯಾರಿಕೇಡ್ಗಳು:ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದವಿವಿಧ ಪ್ರಮುಖ ರಸ್ತೆಗಳನ್ನುಬ್ಯಾರಿಕೇಡ್ಗಳನ್ನು ಹಾಕಿ ಬಂದ್ಮಾಡಲಾಗಿತ್ತು. ಆದರೆ ಜೋರಾಗಿಬೀಸಿದ ಬಿರುಗಾಳಿಗೆ ಬ್ಯಾರಿಕೇಡ್ಗಳು ನೆಲಕ್ಕುರುಳಿದ್ದವು.
ಪೊಲೀಸರು ಕುಳಿತುಕೊಳ್ಳಲು ಹಾಕಿಕೊಂಡಿದ್ದ ಚೇರ್ಗಳು ಗಾಳಿಯಲ್ಲಿ ತೇಲಿ ಹೋದವು.ನೂರಡಿ ರಸ್ತೆಯಲ್ಲಿದ್ದ ಕುರ್ಚಿಯೊಂದುವಿದ್ಯುತ್ ಲೈನ್ಗೆ ಸಿಲುಕಿಕೊಂಡಿತು.ಅಲ್ಲದೆ, ಅಂಗಡಿಗಳ ಮುಂದೆಹಾಕಲಾಗಿದ್ದ ಜಂಕ್ಶೀಟ್ಗಳುಗಾಳಿಯಲ್ಲಿ ಹಾರಿ ಹೋಗಿವೆ.ನಾಮಫಲಕಗಳುಕೆಳಗೆ ಬಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ