ನಾಗಮಂಗಲದಲ್ಲಿ ಸೋಂಕಿತರು ಹೆಚ್ಚಳ
Team Udayavani, Apr 28, 2021, 6:10 PM IST
ನಾಗಮಂಗಲ: ಕೋವಿಡ್ ಎರಡನೇಅಲೆ ತಾಲೂಕಿನಲ್ಲಿ ಹೆಚ್ಚುತ್ತಿದ್ದು ಪ್ರತೀದಿನ ಸೋಂಕಿತರ ಸಂಖ್ಯೆ 100ರ ಗಡಿತಲುಪುತ್ತಿದೆ.ಎಲ್ಲಾ ವಯೋಮಾನದವರನ್ನೂಬಿಟ್ಟು ಬಿಡದೆ ಕಾಡುತ್ತಿರುವ ಸೋಂಕುಸೋಮವಾರ 99 ಮಂದಿಗೆ ತಗುಲಿದೆ.ಮಂಗಳವಾರ 107 ಮಂದಿಯಲ್ಲಿಸೋಂಕು ಪತ್ತೆಯಾಗಿದೆ.
ತೀವ್ರವಾಗಿ ಅಸ್ವಸ್ಥರಾದವರನ್ನುವರನ್ನು ತಾಲೂಕಿನಆದಿಚುಂಚನಗಿರಿ ಆಸ್ಪತ್ರೆ, ಮಂಡ್ಯಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದು, ಉಳಿದಸೋಂಕಿತರನ್ನು ನಾಗಮಂಗಲದವಿವಿಧೆಡೆ ಸ್ಥಾಪಿಸಿರುವ ಕೋವಿಡ್ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ಗೆ 6 ಮಂದಿ ಬಲಿ:ಸೋಮವಾರ ರಾತ್ರಿಯಿಂದೀಚೆಗೆಮೂರು ಮಂದಿ ಸಾವನ್ನಪ್ಪಿದ್ದಾರೆ.ಇದುವರೆಗೆ 6 ಮಂದಿ ಮರಣಹೊಂದಿದ್ದು, ಮರಣ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
ಅಂತ್ಯ ಸಂಸ್ಕಾರ: ತಾಲೂಕಿನಲ್ಲಿ ಸಾವಿನಸಂಖ್ಯೆ ಹೆಚ್ಚಾಗುತ್ತಿದ್ದು ಅಂತ್ಯಸಂಸ್ಕಾರವನ್ನು ತಮ್ಮ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡುತ್ತಿರುವುದು ಕಂಡುಬರುತ್ತಿದೆ. ಬೆಂಗಳೂರು ಸೇರಿದಂತೆಇತರೆಡೆ ಸಾವನ್ನಪ್ಪಿದವರನ್ನು ತಾಲೂಕಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ತಾಲೂಕಿನ ಪಡುವಲಪಟ್ಟಣಗ್ರಾಮದ ಬೆಂಗಳೂರು ನಿವಾಸಿಕೆಂಪೇಗೌಡರು ಕೋವಿಡ್ಗೆಬಲಿಯಾಗಿದ್ದು, ಅವರ ಶವಸಂಸ್ಕಾರವನ್ನು ತಮ್ಮ ಸ್ವಗ್ರಾಮ ಪಡುವಲಪಟ್ಟಣದಲ್ಲಿ ನೆರವೇರಿಸಲಾಯಿತು.ಗ್ರಾಮದ ಯುವಕರೇ ಕೊರೊನಾ ಕಿಟ್ಧರಿಸಿ ಅಂತ್ಯಕ್ರಿಯೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ