ಶ್ರೀರಂಗಪಟ್ಟಣ: “ಮೂಲ ಮಂದಿರ ಚಲೋ’ಗೆ ಜಿಲ್ಲಾಡಳಿತ ತಡೆ; ಸೆಕ್ಷನ್ 144 ಜಾರಿ
ಸಹಸ್ರಾರು ಕಾರ್ಯಕರ್ತರ ಜಮಾವಣೆ ; ಭಾರೀ ಬಂದೋಬಸ್ತ್
Team Udayavani, Jun 5, 2022, 12:01 AM IST
ಶ್ರೀರಂಗಪಟ್ಟಣ: ಪಟ್ಟಣದ ಜಾಮಿಯಾ ಮಸೀದಿಯಿಂದ ಮದ್ರಸವನ್ನು ಖಾಲಿ ಮಾಡಿಸಿ, ಮಸೀದಿ ಒಳಗಿನ ಮೂಲ ಮಂದಿರ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಹಿಂದು ಪರ ಸಂಘಟನೆಗಳು ಕರೆ ನೀಡಿದ್ದ “ಮೂಲ ಮಂದಿರ ಚಲೋ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿ ತಡೆಯೊಡ್ಡಿತು.
ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ತಂಡೋಪತಂಡವಾಗಿ ಜಮಾವಣೆಗೊಂಡ ಸಹ ಸ್ರಾರು ಕಾರ್ಯ ಕರ್ತರನ್ನು ತಡೆದ ಜಿಲ್ಲಾಡಳಿತ, ಅವರು ಪಟ್ಟಣದ ಒಳಗೆ ಪ್ರವೇಶಿಸದಂತೆ ತಡೆಯಿತು.
ಪೊಲೀಸರ ನಡುವೆ ಚಕಮಕಿ
ಶ್ರೀರಂಗಪಟ್ಟಣ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರದಲ್ಲಿ ಮದ್ರಸ ಇದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಇಸ್ಲಾಂ ಧಾರ್ಮಿಕ ಪಾಠ ಬೋಧಿಸಲಾಗುತ್ತಿದೆ. ಹಿಂದೂ ದೇವರ ಹಲವು ಕುರುಹು ನಾಶಪಡಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು. ಈ ಸಂದರ್ಭ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಸಿದರು.
ಹನುಮಾನ್ ಚಾಲೀಸಾ
ಜಿಲ್ಲಾಡಳಿತ ತಡೆಯೊಡ್ಡಿದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಿರಂಗೂರು ವೃತ್ತದ ಬಳಿ ಇರುವ ಬನ್ನಿ ಮಂಟಪದಲ್ಲಿ ಹಿಂದೂ ಕಾರ್ಯಕರ್ತರು ಜಮಾವಣೆಗೊಂಡರು. ಬಳಿಕ ಬನ್ನಿ ಮಂಟಪದ ಆವರಣದಲ್ಲಿ ಹನುಮನನ್ನು ಪ್ರತಿಷ್ಠಾಪಿಸಿ ಹನುಮಾನ್ ಚಾಲೀಸಾ ಹಾಗೂ ರಾಮನಾಮ ಭಜನೆ ಮಾಡಿದರು.
25 ದಿನಗಳ ಗಡುವು
ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆಗೆ 4-5 ಬಾರಿ ಜಾಮಿಯಾ ಮಸೀದಿಯಿಂದ ಮದ್ರಸ ಖಾಲಿ ಮಾಡಿಸಲು, ವೀಡಿಯೋ ಸರ್ವೇ ನಡೆಸಲು ಹಾಗೂ ಮಸೀದಿ ಒಳಗಿನ ಮೂಲ ಮಂದಿರ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಮುಂದಿನ 25 ದಿನದೊಳಾಗಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಮುಖಂಡ ಜಿ. ಬಾಲು ಎಚ್ಚರಿಸಿದರು.
ಜಾಮಿಯಾ ಮಸೀದಿ ಪ್ರವೇಶಿಸಿದರೇ?
ಕಿರಂಗೂರು ಬನ್ನಿಮಂಟಪದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ವೇಳೆ, ನಿಷೇಧಾಜ್ಞೆ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಮಸೀದಿ ಪ್ರವೇಶಿಸಿದ ಇಬ್ಬರು ಹನುಮಾನ್ ಚಾಲೀಸಾ ಪಠಿಸಿ ದ್ದಾರೆ. ಹಿಂದೂ ಮುಖಂಡರಿಬ್ಬರು ಮಸೀದಿಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಚ್ಚರಿ ಮೂಡಿಸಿತು. ಎಲ್ಲರೂ ಒಟ್ಟಾಗಿ ಮಾಡಿದರೆ ಮಾತ್ರ ಹೋರಾಟವಲ್ಲ, ಒಬ್ಬನೇ ಒಬ್ಬ ಮಾಡಿದರೂ ಅದು ಹೋರಾಟವೇ ಎಂದು ಅವರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…