ಲಾಕಪ್ಡೆತ್: ನಾಲ್ವರು ಪೊಲೀಸರ ಅಮಾನತು
Team Udayavani, Jul 14, 2018, 7:20 AM IST
ಮಂಡ್ಯ: ನಗರದ ಪಶ್ಚಿಮ ಠಾಣೆಯಲ್ಲಿ ಲಾಕಪ್ಡೆತ್ ಪ್ರಕರಣ ಸಂಬಂಧ ನಾಲ್ವರು ಪೊಲೀಸರನ್ನು ಅಮಾನತು
ಮಾಡಲಾಗಿದೆ. ಬೈಕ್ ಕಳ್ಳತನ ಆರೋಪದ ಮೇರೆಗೆ ಠಾಣೆಗೆ ಕರೆತಂದಿದ್ದ ಮದ್ದೂರು ತಾಲೂಕು ಬೆಳೂ¤ರು
ಗ್ರಾಮದ ಮೂರ್ತಿ (45) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ.
ಪೊಲೀಸರೇ ವಿಚಾರಣೆ ವೇಳೆ ಹೊಡೆದು ಸಾಯಿಸಿದ್ದಾರೆ. ಇದೊಂದು ಲಾಕಪ್ಡೆತ್ ಎಂದು ಆಪಾದಿಸಲಾಗಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು ಬಾತ್ ರೂಂನಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ. ರಾಧಿಕಾ, ಇನ್ನೆರಡು ದಿನಗಳಲ್ಲಿ ಸಿಐಡಿಗೆ ಪ್ರಕರಣ
ಹಸ್ತಾಂತರಗೊಳ್ಳಲಿದ್ದು, ಎಲ್ಲಾ ಹಂತಗಳಲ್ಲೂ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಘಟನೆ ಸಂಬಂಧ
ಪಿಎಸ್ಸೆ„ ಅನಂತಕುಮಾರ್, ಮುಖ್ಯಪೇದೆ ಮಾದೇಶ, ಪೇದೆಗಳಾದ ವರದರಾಜು, ಮಲ್ಲಿಕಾರ್ಜುನ ಅವರನ್ನು
ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್