ಶಿಂಷಾನದಿ ಸಮೀಪ ಬೀಡು ಬಿಟ್ಟ ಕಾಡಾನೆಗಳು
Team Udayavani, Jun 30, 2021, 9:01 PM IST
ಮದ್ದೂರು: ಕಾಡಿನಿಂದ ನಾಡಿನತ್ತ ಆಗಮಿಸಿರುವಮೂರು ಕಾಡಾನೆಗಳು ರೈತರು ಬೆಳೆದ ಬೆಳೆಯನ್ನುಹಾನಿಗೊಳಿಸಿರುವ ಘಟನೆ ತಾಲೂಕಿನ ವಿವಿಧಗ್ರಾಮಗಳಲ್ಲಿ ವರದಿಯಾಗಿದೆ.
ತಾಲೂಕಿನಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ,ಹುಣಸೇಮರದದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿಕಾಣಿಸಿಕೊಂಡಿರುವ ಕಾಡಾನೆಗಳು ಸ್ಥಳೀಯಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುವ ಜತೆಗೆ ಫಸಲನ್ನುತುಳಿದು ಹಾನಿಗೊಳಿಸಿರುವುದರಿಂದ ಮಾಲೀಕರುಪರಿಹಾರ ಒದಗಿಸುವಂತೆ ಅರಣ್ಯ ಇಲಾಖೆಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಸೋಮವಾರ ರಾತ್ರಿ ಕೂಳಗೆರೆ, ಬನ್ನಹಳ್ಳಿ, ಕೆ.ಬೆಳ್ಳೂರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಮೂರು ಗಂಡಾನೆಗಳು ಸುಮಾರು 18 ವರ್ಷದ ವಯೋಮಾನದವಾಗಿದ್ದು, ಮಂಗಳವಾರ ಬೆಳಗ್ಗೆ ಶಿಂಷಾ ನದಿಮೂಲಕ ತಾಲೂಕಿನ ವಿವಿಧ ಗ್ರಾಮಗಳೂ ಸೇರಿದಂತೆಪಟ್ಟಣದ ಶಿಂಷಾನದಿ ಸಮೀಪ ಬೀಡುಬಿಟ್ಟಿವೆ.ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾಡಿನಿಂದಹಲಗೂರು ಮಾರ್ಗವಾಗಿ ಆಗಮಿಸಿರುವ ಆನೆಗಳನ್ನು ಮಂಗಳವಾರ ಸಂಜೆ ತಮಟೆ ಹಾಗೂಪಟಾಕಿ ಶಬ್ಧ ಕಾರ್ಯಾಚರಣೆ ಕೈಗೊಂಡು ಮರಳಿಕಾಡಿಗೆಕಳುಹಿಸ ಲುಅರಣ್ಯಇಲಾಖೆ ಅಧಿಕಾರಿಗಳುಹಾಗೂ ಸಿಬ್ಬಂದಿಗಳುಕ್ರಮ ವಹಿಸಿದ್ದರು.
ಸ್ಥಳೀಯ ಸಾರ್ವಜನಿಕರು ಜಾಗೃತಿಯಿಂದಿರುವಂತೆ ಮತ್ತು ತಮ್ಮ ಜಮೀನು ಕಡೆಗಳಿಗೆ ಹೋಗದಂತೆ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಬಿ.ಎಸ್.ಶಶಿಧರ್ಎಚ್ಚರಿಕೆ ನೀಡಿದ್ದು, ಗ್ರಾಮಗಳಿಗೆಆನೆ ಬಂದಿರುವ ವಿಷಯ ಕಾಡ್ಗಿಚ್ಚಿನಂತೆ ಹರಡಿಆನೆಗಳ ವೀಕ್ಷಣೆಗೆ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಮೊಬೈಲ್ನಲ್ಲಿ ಫೋಟೊ ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂದವು. ಕಾರ್ಯಾಚರಣೆ ವೇಳೆ ವಲಯ ಅರಣ್ಯಾಧಿಕಾರಿ ನಾಗೇಂದ್ರಪ್ರಸಾದ್, ಉಪ ವಲಯ ಅರಣ್ಯಾಧಿಕಾರಿ ರವಿ,ರತ್ನಾಕರ್, ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು