ಪಡಿತರ ಪಡೆಯಲು ಪರದಾಟ
Team Udayavani, May 19, 2021, 5:03 PM IST
ಮಂಡ್ಯ: ಕೋವಿಡ್ ಸೋಂಕಿನ ಎರಡನೇಅಲೆ ಜಿಲ್ಲೆಯಲ್ಲಿ ಮಿತಿ ಮೀರಿದ್ದು, ಜನರುಸಂಕಷ್ಟ ಅನುಭವಿಸುವಂತಾಗಿದೆ. ಲಾಕ್ಡೌನ್ನಿಂದ ಕಾರ್ಮಿಕರು, ಬಡವರು,ನಿರ್ಗತಿಕರ ಕುಟುಂಬಗಳು ಸಂಕಷ್ಟಕ್ಕೆಸಿಲುಕಿದ್ದು, ಪಡಿತರ ಪಡೆಯಲು ಇನ್ನಿಲ್ಲದಪರದಾಟ ಆರಂಭವಾಗಿದೆ.ಮಂಡ್ಯ ನಗರದಲ್ಲಿಯೇ ಬಹುತೇಕನ್ಯಾಯಬೆಲೆ ಅಂಗಡಿಗಳ ಮುಂದೆಮಂಗಳವಾರ ಉದ್ದುದ್ದ ಸರತಿ ಸಾಲು ಕಂಡುಬಂದಿತು. ಕೆಲವು ಅಂಗಡಿ ಮಾಲೀಕರು ಬೇಗತೆರೆಯದ ಪರಿಣಾಮ ಕಾಯುತ್ತಿದ್ದ ದೃಶ್ಯಕಂಡು ಬಂದಿತು.
ಸರದಿ ಸಾಲು: ನಗರದ ಹೊಸಹಳ್ಳಿ, ಗಾಂಧಿನಗರ, ಸ್ವರ್ಣಸಂದ್ರ, ಸುಭಾಷ್ನಗರ,ಕ್ರಿಶ್ಚಿಯನ್ ಕಾಲೋನಿ ಸೇರಿದಂತೆ ಬಹುತೇಕನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿಸಾಲು ಕಂಡು ಬಂದಿತು. ಬೆಳಗ್ಗೆ 7ರಿಂದಲೇಅಂಗಡಿಗಳ ಮುಂದೆ ಸರದಿ ಸಾಲುಆರಂಭಗೊಂಡು ಮಧ್ಯಾಹ್ನ ಕಳೆದರೂತಗ್ಗಿರಲಿಲ್ಲ. ಅಂಗಡಿ ಮಾಲೀಕರು ಒಂದೊಂದು ಕಡೆ ಒಂದೊಂದು ಸಮಯನಿಗದಿ ಮಾಡಿಕೊಂಡು ಪಡಿತರವಿತರಿಸುತ್ತಾರೆ.
ಬೆಳಗ್ಗೆ ಹಾಗೂ ಸಂಜೆ ವೇಳೆವಿತರಣೆಗೆ ಸಮಯ ನಿಗದಿ ಮಾಡಲಾಗಿದೆ.ಅಂಗಡಿಗಳು ತೆರೆಯುವವರೆಗೂಸಾರ್ವಜನಿಕರು ಸರತಿ ಸಾಲಿನಲ್ಲಿ ತಮ್ಮಬ್ಯಾಗು ಹಾಗೂ ಪಡಿತರ ಚೀಟಿಗಳನ್ನಿಟ್ಟುಕಾಯುತ್ತಿದ್ದ ದೃಶ್ಯಕಂಡು ಬಂದಿತು.
ಸಾಮಾಜಿಕ ಅಂತರ ಮಾಯ: ಕೆಲವುಪಡಿತರ ಅಂಗಡಿಗಳ ಮುಂದೆ ಗ್ರಾಹಕರುಯಾವುದೇ ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ವಹಿಸಿದ್ದ ದೃಶ್ಯಕಂಡು ಬಂದಿತು.ಅಂಗಡಿ ಮಾಲೀಕರು ಯಾವಸಮಯದಲ್ಲಿ ತೆಗೆಯುತ್ತಾರೋ ಗೊತ್ತಿಲ್ಲ.ಆದ್ದರಿಂದ ತೆರೆಯುವ ಮುನ್ನವೇ ಸರತಿಸಾಲಿನಲ್ಲಿ ಬ್ಯಾಗುಗಳನ್ನಿಟ್ಟು ಕಾಯುತ್ತಿದ್ದೇವೆ.ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರತಿಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಪಡಿತರಪದಾರ್ಥಗಳನ್ನು ನಂಬಿಕೊಂಡು ಸಾಕಷ್ಟುಕುಟುಂಬಗಳು ಜೀವನ ನಡೆಸುತ್ತಿವೆ. ಇದುಅವರಿಗೆ ಅನಿವಾರ್ಯವೂ ಆಗಿದೆ ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ