ಕೊಲೆ ಆರೋಪಿಗಳ ಬಂಧನ
Team Udayavani, Jun 14, 2021, 4:59 PM IST
ಕೆರೂರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸೇರಿ ವ್ಯಕ್ತಿಯೊಬ್ಬನನ್ನು ದೊಣ್ಣೆಗಳಿಂದ ಹೊಡೆದು ಕೊಲೆಗೈಯ್ದ ಪ್ರಕರಣ ಸಮೀಪದ ನರೇನೂರ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಲಕ್ಷ್ಮಣ ಹನಮಂತ ವಡ್ಡರ (45) ಕೊಲೆಯಾದ ವ್ಯಕ್ತಿ. ಈತನಿಗೆ ಅದೇ ನರೇನೂರ ಗ್ರಾಮದ ರೇಣುಕಾ ಮಾನಪ್ಪ ಬೆಳಗಂಟಿ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಚೆಗೆ ರಾಜಿ ಪಂಚಾಯ್ತಿಯಲ್ಲಿ ಅನೈತಿಕ ಸಂಬಂಧ ಇತ್ಯರ್ಥಪಡಿಸಿದ್ದರೂ ಲಕ್ಷ್ಮಣ ಪೀಡಿಸುವುದನ್ನು ಬಿಟ್ಟಿದ್ದಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಕುಪಿತರಾದ ಆಕೆಯ ಸಂಬಂಧಿ ಕರಾದ ಸಂಜೂ ಯಮನಪ್ಪ ಚಿಕ್ಕೂರ, ಯಮನಪ್ಪ ರುದ್ರಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಹಾಗೂ ಮಂಜಪ್ಪ ಯಮನಪ್ಪ ಚಿಕ್ಕೂರ, ವಿಠ್ಠಲ ಯಮನಪ್ಪ ಚಿಕ್ಕೂರ ಇವರೆಲ್ಲ ಸೇರಿ ತಮ್ಮ ಜಮೀನಿನ ಬಳಿ ಕುರಿ ಮೇಯಿಸಲು ಬಂದ ಲಕ್ಷ್ಮಣ ವಡ್ಡರನಿಗೆ ದೊಣ್ಣೆ (ಬಡಿಗೆ)ಯಿಂದ ಹೊಡೆದಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ರೇಣುಕಾ ಲಕ್ಷ್ಮಣ ವಡ್ಡರ ಕೆರೂರ ಠಾಣೆಗೆ ನೀಡಿದ್ದಾರೆ.
ಈ ಕುರಿತು ತನಿಖೆ ಕೈಗೊಂಡ ಪೊಲೀಸ್ ಅ ಧಿಕಾರಿಗಳು ಆರೋಪಿಗಳಾದ ಸಂಜೂ ಚಿಕ್ಕೂರ, ಯಮನಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಅವರನ್ನು ಬಂಧಿ ಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ರಮೇಶ ಹಾನಾಪೂರ, ಪಿಎಸ್ಐ ಆರ್.ವೈ. ಜಲಗೇರಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ