ಪ್ರವಾಸಕ್ಕೆ ಬಂದು ಶವವಾಗಿ ಮರಳಿದ ಶಿಕ್ಷಕ


Team Udayavani, Dec 24, 2019, 3:00 AM IST

pravasakke

ಪಿರಿಯಾಪಟ್ಟಣ: ಪ್ರವಾಸಕ್ಕೆಂದು ಬಂದು ಪಿರಿಯಾಪಟ್ಟಣದ ಬಿ.ಎಂ. ರಸ್ತೆಯ ಮಲ್ಲಿನಾಥಪುರ ಗೇಟ್‌ ಬಳಿ ಅಫ‌ಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಜರುಗಿದೆ. ತಾಲೂಕಿನ ಬಿ.ಎಂ.ರಸ್ತೆಯ ಮಲ್ಲಿನಾಥಪುರ ಗೇಟ್‌ ಬಳಿಕ ಭಾನುವಾರ ತಡರಾತ್ರಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವೀರಾಪುರ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಈರಣ್ಣ ನರಸಪ್ಪ ಅಗನೂರು (55) ಮೃತಪಟ್ಟ ಶಿಕ್ಷಕ.

ಮೂಲತಃ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದವರಾಗಿದ್ದು, ವೀರಾಪುರ ಶಾಲೆಗೆ ಹತ್ತಿರದಲ್ಲಿರುವ ತಾವರೆಕೆರೆ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಈರಣ್ಣ ಮತ್ತು ಶಾಲೆ ಮುಖ್ಯ ಶಿಕ್ಷಕ ಆಂಜನೇಯ, ಶಿಕ್ಷಕರಾದ ರಜಾಕ್‌ ಚೌಧರಿ, ಮಲ್ಲಯ್ಯ, ಮಲ್ಲಪ್ಪ ಬಳಿಗಾರ್‌, ಶ್ರೀಕಾಂತ್‌, ಶಂಕರಯ್ಯ ಅಮರೇಶ್‌ ಎಂಬುವರೊಡನೆ ಕರ್ನಾಟಕ ಸಾರಿಗೆ ಇಲಾಖೆ ಬಸ್‌ನಲ್ಲಿ ಕಳೆದ ಡಿ.19 ರಂದು ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 50 ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಹೊರಟು ಶಿರಸಿ, ಕುಮುಟ, ಇಡಗುಂಜಿ, ಜೋಗ್‌ ಫಾಲ್ಸ್, ಮು‌ರುಡೆಶ್ವರ, ಉಡುಪಿ, ತಲಕಾವೇರಿ, ಭಾಗಮಂಡಲ, ಪ್ರವಾಸ ಮುಗಿಸಿ ಸೋಮವಾರ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕಾರಂಜಿ ಕೆರೆ ಪ್ರವಾಸ ಮುಗಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಊರಿಗೆ ತೆರಳುತ್ತಿದ್ದರು.

ಆಗಿದ್ದೇನು?: ಊರಿಗೆ ತೆರಳುವುದಕ್ಕಾಗಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬೈಲುಕಪ್ಪೆ ಬಳಿ ಟೀ-ಕಾಫೀ ಕುಡಿಯಲೆಂದು ಮಲ್ಲಿನಾಥಪುರ ಗೇಟ್‌ ಬಳಿ ಬಸ್‌ ನಿಲ್ಲಿಸಲಾಗಿತ್ತು. ಚಹಾ-ಕಾಫಿ ಸೇವಿಸುವುದು ಮುಗಿದ ಮೇಲೆ ಮಕ್ಕಳನ್ನೆಲ್ಲ ಬಸ್‌ ಹತ್ತಿಸಿದ ಶಿಕ್ಷಕ ಈರಣ್ಣ, ತಾವು ಮೂತ್ರ ವಿಸರ್ಜನೆಗೆ ರಸ್ತೆ ದಾಟುವಾಗ ಕುಶಾನಗರಿದಂದ ಬಂದ ಸ್ಯಾಂಟೊ›à ಕಾರ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಶಿಕ್ಷಕ ಈರಣ್ಣ ನರಸಪ್ಪ ಅಗನೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಸಹ ಶಿಕ್ಷಕರು, ಸಾರ್ವಜನಿಕರ ನೆರವಿನಿಂದ ಶಿಕ್ಷಕ ಈರಣ್ಣ ಅವರ ದೇಹವನ್ನು ಸಾರ್ವಜನಿಕ ಆಸ್ಪತ್ರೆ ತಂದು, ಶವ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದರು.

ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ: ರಸ್ತೆ ಅಫ‌ಘಾತದಲ್ಲಿ ಮೃತಪಟ್ಟ ಈರಣ್ಣ ನರಸಪ್ಪ ಅಗನೂರರನ್ನು ಕಳೆದುಕೊಂಡ ಮಕ್ಕಳು ಗೋಳಾಡಿ ಅತ್ತು ಬಿಟ್ಟರು. ತಮ್ಮ ನೆಚ್ಚಿನ ಶಿಕ್ಷಕರೊಬ್ಬರನ್ನು ತಮ್ಮ ಎದುರಲ್ಲೇ ಕಳೆದುಕೊಂಡ ಮಕ್ಕಳಿಗೆ ಅಘಾತ ಉಂಟಾಗಿ, ಆಕ್ರಂದನ ಹೆಚ್ಚಿತು. ಬಳಿಕ ಸ್ಥಳೀಯರು ಹಾಗೂ ಶಿಕ್ಷಕರು ತಡರಾತ್ರಿಯಲ್ಲೂ ಮಕ್ಕಳ ನೆರವಿಗೆ ಧಾವಿಸಿ, ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಉಳಿದುಕೊಳ್ಳಲು ಸ್ಥಳಾವಕಾಶ ಕಲ್ಪಿಸಿದರು. ಬಳಿಕ ಮಕ್ಕಳಿಂದ ಮೃತ ಶಿಕ್ಷಕರ ಕುಟುಂಬದವರ ಫೋನ್‌ ನಂಬರ್‌ ಪಡೆದು ಮಾಹಿತಿ ತಿಳಿಸಲಾಯಿತು. ಈ ವಿಷಯ ತಾಲೂಕಿನಲ್ಲೆಲ್ಲ ಹಬ್ಬಿದ್ದರಿಂದ ಸ್ಥಳೀಯ ಶಿಕ್ಷಕರು, ಅಧಿಕಾರಿಗಳು ಕಂಬನಿ ಮಿಡಿದರು.

ನೋವಿನಿಂದಾಗಿ ಊಟ ಮಾಡದ ಮಕ್ಕಳು: ಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದ ಮಾಲೀಕ ಸತೀಶ್‌, ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳಿಗೆ ತಮ್ಮ ಛತ್ರದಲ್ಲೇ ವಸತಿ ಹಾಗೂ ಊಟದ ವ್ಯಸವೆ§ ಕಲ್ಪಿಸಲು ಮುಂದಾದರು. ಆದರೆ ಮೊದಲೇ ತಮ್ಮ ನೆಚ್ಚಿನ ಶಿಕ್ಷಕರ ಶವವನ್ನು ಕಂಡು ಆಂತಕ್ಕಕ್ಕೋಳಗಾಗಗಿದ್ದ ಮಕ್ಕಳು ಊಟ ಮಾಡಲು ನಿರುತ್ಸಹ ತೋರಿದರು. ಆಗ ಸ್ಥಳೀಯರು ಮಕ್ಕಳಿಗೆ ಬ್ರೆಡ್‌, ಬಿಸ್ಕತ್‌ ಹಾಗೂ ಬಾಳೆಹಣ್ಣು ಕೊಟ್ಟು ಕೂಡಲೇ ಅವರನ್ನು ಬಸ್‌ನಲ್ಲಿಯೇ ತಮ್ಮ ಊರಿಗೆ ಕಳುಹಿಸಿ ಎಂದು ಅವರ ಮುಖ್ಯ ಶಿಕ್ಷಕರಿಗೆ ವಿನಂತಿಸಿ, ಊರಿಗೆ ತೆರಳಲು ಮುಂದಾದರು.

ಮೃತ ಶಿಕ್ಷಕನ ಪುತ್ರನಿಗೆ ಇಂದು ಎಂಬಿಬಿಎಸ್‌ ಪರೀಕ್ಷೆ: ಅಫ‌ಘಾತದಲ್ಲಿ ಮೃತಪಟ್ಟ ಈರಣ್ಣ ನರಸಪ್ಪ ಅಗನೂರು ರವರಿಗೆ ಮೂವರು ಮಕ್ಕಳು. ಪುತ್ರ ನವೀನ್‌, ಕೊಪ್ಪಳದ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ. ನವೀನ್‌ಗೆ ಮಂಗಳವಾರ ಪರೀಕ್ಷೆಯಿದ್ದಿದ್ದರಿಂದ, ತಂದೆ ಹುಷಾರಿಲ್ಲ ಎಂದು ಹೇಳಿ ಕುಟುಂಬದವರು ಪಿರಿಯಾಪಟ್ಟಣಕ್ಕೆ ಬಂದಿದ್ದರು. ಉಳಿದಂತೆ, ಪುತ್ರಿ ಪೂಜಾ ಬಿಎಸ್‌ಸಿ, ಮತ್ತೂಬ್ಬ ಪುತ್ರ ಸಚೀನ್‌ ದ್ವಿತೀಯ ಪಿಯುಸಿ ಇದ್ದಾರೆ.

ಬಿಇಒ, ತಾಲೂಕು ಶಿಕ್ಷಕರು, ಸಾರ್ವಜನಿಕರಿಂದ ನೆರವು: ಶಿಕ್ಷಕ ಈರಣ್ಣ ನರಸಪ್ಪ ಅಗನೂರು ಮೃತಪಟ್ಟ ವಿಷಯ ತಿಳಿದ ಕೂಡಲೇ ತಾಲೂಕಿನ ಶಿಕ್ಷಕರು ಮತ್ತು ಸಾರ್ವಜನಿಕರು ತಡರಾತ್ರಿಯಲ್ಲೂ ನೆರವಿಗೆ ಧಾವಿಸಿ ಮಾನವೀಯತೆ ಮೆರೆದರು. ಮಕ್ಕಳು ಮತ್ತು ಜೊತೆಯಲ್ಲಿ ಬಂದಿದ್ದ ಶಿಕ್ಷಕರಿಗೆ ಸಾಂತ್ವನ ಹೇಳಿ, ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದರು. ಮೃತರ ಶವ ಪರೀಕ್ಷೆ ನಡೆಸಲು ಡಿವೈಎಸ್‌ಪಿ ಸುಂದರ್‌ ರಾಜ್‌ ಮತ್ತು ಸಿಪಿಐ ಬಿ.ಆರ್‌. ಪ್ರದೀಪ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್‌ ಕುಮಾರ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಶವ ಪರೀಕ್ಷೆ ಮಾಡಿದರೆ, ದೂರದ ರಾಯಚೂರಿಗೆ ಕಳುಹಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ಮೃತರ ಶವ ಪರೀಕ್ಷೆ ನಡೆಸಿ ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು.

ಮೃತರಿಗೆ ಶ್ರದ್ಧಾಂಜಲಿ: ಮೃತರ ಕುಟುಂಬದವರಿಗೆ ಶವವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕಿನ ಬಿಇಒ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮೃತರಿಗೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರ್‌.ರಾಮಾರಾಧ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್‌ ಕುಮಾರ್‌, ಕಾರ್ಯದರ್ಶಿ ಗಾಯತ್ರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಕಾರ್ಯದರ್ಶಿ ಶಿವಕುಮಾರಯ್ಯ, ಖಜಾಂಚಿ ಅಣ್ಣೇಗೌಡ, ನಿರ್ದೇಶಕ ಪ್ರಕಾಶ, ಶಿಕ್ಷಕರಾದ ಎಸ್.ಬಿ.ಪುಟ್ಟರಾಜು, ಪಿ.ವಿ.ದೇವರಾಜು, ಹೆಚ್.ಟಿ.ಗಣೇಶ, ನಟರಾಜ ನಾಯ್ಕ, ನೌಕರರಾದ ಸೋಮಶೇರ್ಖ, ಪ್ರಕಾಶ್‌ ಉದ್ಯಮಿ ಸತೀಶ, ಸ್ಥಳೀಯ ಮುಖಂಡರಾದ ಮಲ್ಲಿಕಾರ್ಜುನ, ತೆಲುಗಿನಕುಪ್ಪೆ ಕಾಂತರಾಜು ಆಟೋ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

1-asasa

Hunsur:ಆಡಳಿತ ಸೌಧದ ಸೀಲಿಂಗ್ ಕಳಚಿಬಿದ್ದು ಮಹಿಳೆ ಕಾಲ್ಬೆರಳು ತುಂಡು!

1-adasdsa

Hunsur: ಸಾಲಬಾಧೆಯಿಂದ ರೈತ ಅತ್ಮಹತ್ಯೆಗೆ ಶರಣು

1-sasd

BJP; ಟಿಕೆಟ್ ಕೊಡುವಾಗ ಕಾರಣ ಹೇಳಬೇಕಾದ ಅಗತ್ಯ ಪಕ್ಷಕ್ಕಿಲ್ಲ: ಪ್ರತಾಪ್ ಸಿಂಹ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ಗೌಡ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ ಗೌಡ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.