ಪುತ್ರ ಶೋಕದಿಂದ ಖಿನ್ನತೆಗೊಳಗಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆ
Team Udayavani, Mar 28, 2018, 4:14 PM IST
ಮೈಸೂರು: ಪುತ್ರನ ಅಕಾಲಿಕ ಮರಣದಿಂದ ಖಿನ್ನತೆಗೊಳಗಾಗಿದ್ದ ವೈದ್ಯ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬುಧವಾರ ಸರಸ್ವತಿಪುರಂನಲ್ಲಿ ನಡೆದಿದೆ.
ವೈದ್ಯರಾದ ಡಾ.ಸತೀಶ್ ಮತ್ತು ಡಾ. ವೀಣಾ ಅವರು ಡೆತ್ ನೋಟ್ ಬರೆದಿಟ್ಟು ಒಂದೇ ಸೀರೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಾಲಗಿದ್ದು ಅದರಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಮಗನ ಸಾವಿನಿಂದ ನೊಂದಿರುವುದಾಗಿ ಬರೆದಿದ್ದಾರೆ ಎಂದು ಹೇಳಲಾಗಿದೆ.
4 ವರ್ಷಗಳ ಹಿಂದೆ ದಂಪತಿಗಳ ಏಕೈಕ ಪುತ್ರ ಭೀಕರ ಅಪಘಾತದಲ್ಲಿ ಮೃತ ಪಟ್ಟಿದ್ದ ಆ ಬಳಿಕ ತೀವ್ರ ನೊಂದಿದ್ದ ವೈದ್ಯ ದಂಪತಿ ನೋವಿನಿಂದ ಹೊರ ಬರಲು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಸರಸ್ವತಿಪುರಂ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.