ಹುಣಸೂರು: ಮುಂದುವರೆದ ಮಳೆ ಅಬ್ಬರಕ್ಕೆ ಅಪಾರ ಬೆಳೆ ಹಾನಿ
Team Udayavani, May 6, 2022, 8:00 PM IST
ಹುಣಸೂರು: ತಾಲೂಕಿನಾದ್ಯಂತ ಕಳೆದ ಒಂದುವಾದಿಂದ ನಿತ್ಯ ಸಂಜೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಗೆ ಕಷ್ಟ ಪಟ್ಟು ಬೆಳೆದಿದ್ದ ಬೆಳೆಗಳು ಫಲಕ್ಕೆ ಬರುವ ವೇಳೆ ಬಿರುಗಾಳಿಗೆ ಸಿಲುಕಿ ನೆಲಕಚ್ಚುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಬ್ಬನಹಳ್ಳಿಯಲ್ಲಿ ಒಂದು ಎಕರೆಯಲ್ಲಿ ಬೆಳೆದಿದ್ದ ಫಲಕ್ಕೆ ಬಂದಿದ್ದ ಬಾಳೆ ನೆಲಕಚ್ಚಿದ್ದರೆ, ಇವರದೇ ತೆಂಗಿನ ಮರಗಳು ತುಂಡಾಗಿ ನೆಲಕ್ಕುರುಳಿವೆ, ಅಲ್ಲದೆ ನಗರಕ್ಕೆ ಸಮಿಪದ ಒಂದನೇ ಪಕ್ಷಿರಾಜಪುರದ ಮೋಹನ್ರವರ 3 ಎಕರೆಯಷ್ಟು ಬಾಳೆ ತೋಟ, ಸಬೀಮಾರವರ ಒಂದೂವರೆ ಎಕರೆ ಬಾಳೆ ಬೆಳೆ, ಸ್ವಾಮಿಸಿಂಗ್ರ ಪುತ್ರ ನಂಜುಂಡ ಸ್ವಾಮಿಯವರ ಒಂದೂವರೆ ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ಅಂದಾಜು 10 ಲಕ್ಷರೂ ನಷ್ಟು ನಷ್ಟ ಸಂಭವಿಸಿದೆ.