Hunsur; ಹನುಮ ಗಧೆಗೆ ಪೂಜೆ ; 2025 ಕ್ಕೆ Hindu ರಾಷ್ಟ್ರವಾಗಿಸಲು ಕರೆ
Team Udayavani, Apr 6, 2023, 10:20 PM IST
ಹುಣಸೂರು: ಹಿಂದೂ ಜನಜಾಗೃತಿ ಸಮಿತಿ ಮತ್ತು ಹನುಮಂತೋತ್ಸವ ಸಮಿತಿವತಿಯಿಂದ ಹನುಮ ಜಯಂತಿಯ ಅಂಗವಾಗಿ ಹನುಮ ಭಕ್ತರು ಸೇರಿ 6 ಅಡಿಯ ಬೃಹತ್ ಹನುಮ ಗಧೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಿಂದೂ ಜನ ಜಾಗೃತಿ ಸಂಚಾಲಕ ಕುಶಾಲನಗರದ ಶ್ರೀನಾಥ್ ಎಲ್ಲರೂ ಹನುಮ್ ಚಾಲಿಸಾ ಪಠಿಸುವಂತೆ ಮನವಿ ಮಾಡಿದರು. 2025 ರ ಹೊತ್ತಿಗೆ ಭಾರತವು ಹಿಂದೂ ರಾಷ್ಟ್ರವಾಗಿ ಘೋಷಣೆ ಆಗಬೇಕು. ಅದಕ್ಕೆ ಯುವಕರು ಕಟಿಬದ್ಧರಾಗಿರಬೇಕು. ಅದಕ್ಕಾಗಿ ಈ ದಿನ ಹನುಮ ಗಧೆಗೆ ಪೂಜೆ ಮಾಡುತ್ತಿದ್ದೇವೆ. ಹಿಂದೂರಾಷ್ಟ್ರವನ್ನಾಗಿಸಲು ಯುವಪಡೆ ಸಂಕಲ್ಪ ಮಾಡಬೇಕೆಂದರು.
ಹುಣಸೂರು ಹನುಮಂತೋತ್ಸವದ ಅಧ್ಯಕ್ಷ ವಿ.ಎನ್.ದಾಸ್ ಮಾತನಾಡಿ ಸನಾತನ ಹಿಂದೂ ಧರ್ಮ ಮತ್ತೊಮ್ಮೆ ವಿಶ್ವಗುರು ಆಗಬೇಕು. 2025 ರವೇಳೆಗೆ ಹಿಂದೂ ರಾಷ್ಟ್ರ ಘೋಷಣೆ ಆಗಿಯೇ ತೀರಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಯುವಕರು ಈ ನಿಟ್ಟಿನಲ್ಲಿ ಇಂದಿನಿಂದಲೇ ಸಿದ್ಧರಾಗಬೇಕೆಂದು ಮನವಿ ಮಾಡಿದರು. ಚಂದ್ರಮೌಳಿ, ಶ್ರೀಧರಮೂರ್ತಿ ಮತ್ತಿತರರಿದ್ದರು.