ಮೊಬೈಲ್ನಲ್ಲೇ ವ್ಯವಹರಿಸಿ 1.5 ಲಕ್ಷ ರೂ.ಗೆ ಮಗು ಖರೀದಿ!
Team Udayavani, Jun 11, 2021, 5:51 PM IST
ಎಚ್.ಡಿ.ಕೋಟೆ: ಮಗುವನ್ನು ದತ್ತು ಪಡೆಯಲು ಕಾನೂನು ಪ್ರಕಾರ ಹಲವು ನಿಯಮಗಳು ಇವೆ.ಇವುಗಳನ್ನು ಪಾಲಿಸಿಯೇ ಮಗು ದತ್ತು ಸ್ವೀಕರಿಸಬೇಕಾಗುತ್ತದೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಆನ್ಲೈನ್ನಲ್ಲಿ ವಸ್ತುಗಳನ್ನು ಕೊಳ್ಳುವಂತೆ ಮಗುವನ್ನುದುಡ್ಡು ಕೊಟ್ಟು ಖರೀದಿಸಲಾಗಿದೆ.
ಕೋಟೆ ತಾಲೂಕಿನ ಟೈಗರ್ಬ್ಲಾಕ್ನಲ್ಲಿ ನೆಲೆಸಿರುವ ದಂಪತಿ ಕಳೆದ 7 ತಿಂಗಳ ಹಿಂದೆ ಹಾಲುಗಲ್ಲದ ಹಸುಳೆಯನ್ನು 1.50 ಲಕ್ಷ ರೂ.ಗೆ ಖರೀದಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಸಾಲಿಗ್ರಾಮದ ಹಕ್ಕಿಪಿಕ್ಕಿ ಸಮುದಾಯ ರೋಜಾ ಎಂಬಾಕೆಯೇ ದುಡ್ಡಿನಾಸೆಗೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ.
ಏನಿದು ಘಟನೆ:? ಕೇಶ ತೈಲ, ಗಿಡಮೂಲಕೆಗಳ ಔಷಧವನ್ನು ಆನ್ಲೈನ್ ಮೂಲಕ ಮಾರಾಟಮಾಡುವ ವೃತ್ತಿಯಲ್ಲಿ ತೊಡಗಿರುವ ರೋಜಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎಚ್.ಡಿ.ಕೋಟೆಪಟ್ಟಣದಿಂದ 5-6 ಕಿ.ಮೀ. ದೂರವಿರುವ ಟೈಗರ್ಬ್ಲಾಕ್ನ ನಿವಾಸಿಗಳಾದ ಅಂಬರೀಶ್ ಹಾಗೂ ಮಧುಮಾಲತಿ ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ,ಈ ದಂಪತಿಗೆ ಗಿಡಮೂಲಿಕೆಗಳ ಔಷಧವನ್ನುಖರೀದಿಸುವಾಗ ರೋಜಾ ಪರಿಚಯವಾಗಿದ್ದಾರೆ.
ಕಳೆದ 7 ತಿಂಗಳ ಹಿಂದೆ ರೋಜಾಗೆ ಗಂಡು ಮಗು ಜನಿಸಿತ್ತು. ಅಂಬರೀಶ್ ಹಾಗೂ ಮಧುಮಾಲತಿ ದಂಪತಿಗೆ ಕಳೆದ 15 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ಮಗುವನ್ನು ದತ್ತು ಪಡೆಯುವ ಯೋಚನೆಯಲ್ಲಿದ್ದರು. ರೋಜಾಗೆ ಜನಿಸಿದ ಮಗುವನ್ನು ತಮಗೆ ನೀಡುವಂತೆ ಈ ದಂಪತಿ ಕೇಳಿಕೊಂಡಿದ್ದಾರೆ.
ಆಗ ರಾಜಾ 1.5 ಲಕ್ಷ ರೂ. ಹಣಕ್ಕೆ ಬೇಡಿಕೆಯೊಡ್ಡಿದ್ದಾರೆ. ಇದಕ್ಕೆ ಸಮ್ಮತಿಸಿದ ದಂಪತಿ ಹಣವನ್ನು ಪಾವತಿಸಿ ಮಗುವನ್ನು ಖರೀದಿಸಿದ್ದಾರೆ. ಈ ಕುರಿತು ಮಧುಮಾಲತಿ ಅವರೇ ಖುದ್ದು ಹೇಳಿಕೊಂಡಿದ್ದಾರೆ.”ನನಗೆ ಹೆಣ್ಣು ಮಗು ಬೇಕಿತ್ತು. ಆದರೆ, ಗಂಡು ಮಗುವಾಗಿದ್ದರಿಂದ ಇದನ್ನು ಮಾರಾಟಮಾಡುತ್ತಿದ್ದೇನೆ’ ಎಂದು ಅಂಬರೀಶ್-ಮಧುಮಾಲತಿ ಬಳಿ ರೋಜಾ ಹೇಳಿಕೊಂಡಿದ್ದಾರೆ.
ಈ ಮಧ್ಯೆ, ಟೈಗರ್ಬ್ಲಾಕ್ಗೆ ಆಗಮಿಸಿದ ರೋಜಾ, ನನಗೆ ಮಗು ಬೇಕೇಬೇಕೆಂದು ಅಂಬರೀಶ್-ಮಧು ದಂಪತಿ ಜೊತೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದಾಗ ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.ಮೊಬೈಲ್ನಲ್ಲಿ ಮಗು ಮಾರಾಟ ಮಾಡುವಾಗ ಹಣಕ್ಕೆ ಬೇಡಿಕೆಯೊಡ್ಡಿರುವ ಸಂಭಾಷಣೆಗಳು ದೊರೆತಿವೆ. ಮಗು ಮಾರಾಟ ಪ್ರಕ್ರಿಯೆಯಲ್ಲಿ ಹಣಕ್ಕಾಗಿ ಚೌಕಾಸಿ ನಡೆಸಿರುವುದು ಆಡಿಯೋದಲ್ಲಿ ಕಂಡುಬಂದಿದೆ.
ಈ ಮಗುವು ರೋಜಾಗೆ ಜನಿಸಿತ್ತೋ ಅಥವಾ ಯಾರದೋ ಮಗುವನ್ನು ತನ್ನ ಮಗುವೆಂದು ಹೇಳಿ ಮಾರಾಟ ಮಾಡಿದ್ದಾರೋ ಇಲ್ಲವೇ ಶಿಶು ಮಾರಾಟ ಜಾಲ ಇದೆಯೋ ಎಂಬ ಅನುಮಾನಗಳುವ್ಯಕ್ತವಾಗಿವೆ. ಪ್ರಸ್ತುತ ಮಗು ಅಂಬರೀಶ್-ಮಧುಮಾಲತಿ ದಂಪತಿ ಬಳಿ ಇದೆ. ಮಗು ಮಾರಾಟಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ
ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ