ನಾಲ್ವರಿಗೆ ಪ್ರತ್ಯೇಕವಾಸಕ್ಕೆ ಸೂಚನೆ
Team Udayavani, Mar 22, 2020, 5:08 PM IST
ಹುಣಸೂರು: ದುಬೈನಿಂದ ವಾಪಸ್ ಆಗಿರುವ ನಗರದ ಇಬ್ಬರು ಹಾಗೂ ಅಜ್ಮೀರ್ನಿಂದ ಹಿಂದಿರುಗಿದ ಗುರುಪುರದ ತಾಯಿ- ಮಗ ಸೇರಿದಂತೆ ನಾಲ್ವರಿಗೆ ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವ ಸೂಚಿಸಲಾಗಿದೆ.
ನಗರದ ನರಸಿಂಹಸ್ವಾಮಿತಿಟ್ಟು ಬಡಾವಣೆಯ ಮುಸ್ತಫಾ ಹಾಗೂ ಸದಾಶಿವನಕೊಪ್ಪಲಿನ ಕುಮಾರ್ 3 ದಿನಗಳ ಹಿಂದಷ್ಟೆ ದುಬೈನಿಂದ ಬಂದಿದ್ದರು. ತಹಶೀಲ್ದಾರ್ ಬಸವರಾಜ್ ಸೂಚನೆಯಂತೆ ಮುಂಜಾನೆಯೇ ನರಸಿಂಹಸ್ವಾಮಿ ತಿಟ್ಟಿನ ಮುಸ್ತಫಾ ಹಾಗೂ ಸದಾಶಿವನಕೊಪ್ಪಲಿನ ಕುಮಾರ್ ಅವರ ಮನೆಗೆ ಪೊಲೀಸ್ ಸಿಬ್ಬಂದಿ ಸಮೇತ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್ ನೇತೃತ್ವದ ಆರೋಗ್ಯ ಇಲಾಖೆನಸಿಬ್ಬಂದಿ ತಂಡ ಪರಿಶೀಲಿಸಿ, ಮನೆಯಲ್ಲೇ ಇರುವಂತೆ ತಿಳಿಸಿದೆ.
ಗುರುಪುರ ಬಳಿಯ ಹುಣಸೇಕಟ್ಟೆಯ ತಾಯಿ ಮತ್ತು ಆಕೆಯ ಪುತ್ರ ಅಜ್ಮೀರ್ಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅವರಿಗೂ ಕೂಡ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಈ ನಾಲ್ವರ ತಪಾಸಣೆ ನಡೆಸಿದ್ದು, ಆರೋಗ್ಯದಿಂದಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿ ಕುಮಾರ್ ಮನವಿ ಮಾಡಿದ್ದಾರೆ.
ಮುಂಬೈಗೆ ತೆರಳಿದ ದಂಪತಿ:ಮುಂಬೈನಿಂದ ಹನಗೋಡು ಬಳಿಯ ಹೆಗ್ಗಂದೂರಿನ ಸಂಬಂಧಿಕರ ಮನೆಗೆ ಬಂದಿದ್ದ ದಂಪತಿಗೆ 15 ದಿನ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದರೆ, ಶನಿವಾರ ಬೆಳಗ್ಗೆ ಮುಂಬೈಗೆ ವಾಪಸ್ ಆಗಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಟಿಎಚ್ಒ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ