ಅಂಗಾರಗೆ 6ನೇ ಬಾರಿ ಒಲಿದ ಸುಳ್ಯ


Team Udayavani, May 16, 2018, 7:40 AM IST

angara-list-15-5.jpg

ಸುಳ್ಯ: ಏಳನೇ ಬಾರಿ ಕಣಕ್ಕಿಳಿದಿರುವ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ ಅವರು ಆರನೆಯ ಬಾರಿ ಅತ್ಯಧಿಕ ಅಂತರದ ಗೆಲುವು ಪಡೆದಿದ್ದಾರೆ. ಇದರೊಂದಿಗೆ ಸತತ ಆರು ಬಾರಿ ನಿರಂತರ ಗೆಲುವಿನ ದಾಖಲೆಗೆ ಭಾಜನರಾಗಿದ್ದಾರೆ.

26,068 ಅಂತರದ ಗೆಲುವು
ಈ ಹಿಂದಿನ ಐದು ಚುನಾವಣೆಗಳಿಗೆ ಹೋಲಿಸಿದರೆ, ಅಂಗಾರ ಈ ಬಾರಿ ದಾಖಲೆ ಅಂತರದ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಅವರ ವಿರುದ್ಧ 26,068 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಒಟ್ಟು 1,98,692 ಮತದಾರರಿದ್ದು, 1,68,768 ಮತಗಳು ಚಲಾವಣೆಯಾಗಿವೆ. ಅಂಗಾರ 95,205 ಮತಗಳನ್ನು ಗಳಿಸಿದರೆ, ಡಾ| ರಘು 69,137 ಮತ ಪಡೆದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ 1,372 ಮತಗಳ ಅಂತರದಿಂದ ಪ್ರಯಾಸದ ಗೆಲುವು ದಾಖಲಿಸಿದ್ದ ಅಂಗಾರ, ಐದು ವರ್ಷಗಳ ಅನಂತರ ಗೆಲುವಿನ ಅಂತರವನ್ನು 25 ಸಾವಿರಕ್ಕೂ ಮಿಕ್ಕಿ ಏರಿಸಿಕೊಂಡಿರುವುದು ಗಮನಾರ್ಹ ಸಂಗತಿ. 2018ರ ಚುನಾವಣೆಯಲ್ಲಿ 22 ಸಾವಿರ ಹೊಸ ಮತದಾರರ ಸೇರ್ಪಡೆ, 2013ರ ಚುನಾವಣೆಗಿಂತ 20,952 ಮತಗಳು ಹೆಚ್ಚು ಚಲಾವಣೆಗೊಂಡಿ ರುವುದು, ಚಲಾಯಿತ ಮತ ಪ್ರಮಾಣ ಶೇ. 4 ಹೆಚ್ಚಾಗಿರುವುದು ಕೂಡ ಬಿಜೆಪಿ ಗೆಲುವಿಗೆ ಪೂರಕವಾಗಿದೆ.


16 ಸುತ್ತಿನಲ್ಲಿ ಮುನ್ನಡೆ

ಮತ ಎಣಿಕೆಯ ಹದಿನೇಳು ಸುತ್ತುಗಳ ಪೈಕಿ ಬಿಜೆಪಿ ಹದಿನಾರು ಸುತ್ತಿನಲ್ಲಿ ಮುನ್ನಡೆ ಗಳಿಸಿತ್ತು. ಎರಡನೆ ಸುತ್ತಿನಲ್ಲಿ ಮಾತ್ರ ಕಾಂಗ್ರೆಸ್‌ 209 ಮತಗಳ ಮುನ್ನಡೆ ಹೊಂದಿತ್ತು. ಅಂಚೆ ಮತಗಳ ಪೈಕಿ ಅಂಗಾರ ಅವರಿಗೆ 1,041, ಡಾ| ರಘು ಅವರಿಗೆ 338 ಮತಗಳು ದೊರೆತಿವೆ. ಒಂದು ನೋಟಾ ಹಾಗೂ 16 ಮತಗಳು ತಿರಸ್ಕೃತಗೊಂಡಿವೆ. ಉಳಿದಂತೆ ಬಿಎಸ್‌ಪಿ ಅಭ್ಯರ್ಥಿ ರಘು ಧರ್ಮಸೇನಾ-1,472, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಪೆಲತ್ತಡ್ಕ-333, ಸಂಜೀವ ಬಾಬುರಾವ್‌ ಕುರಂದವಾಡ-391, ಸುಂದರ ಕೆ.- 564 ಮತ ಪಡೆದಿದ್ದಾರೆ. 1,310 ನೋಟಾ ಮತಗಳು ದಾಖಲಾಗಿವೆ.

ಗೆಲುವಿನ ಓಟ
ದೊಡ್ಡತೋಟ ದಾಸನಕಜೆ ಕುಂಟಿಕಾನ ನಿವಾಸಿ ಸುಳ್ಳಿ ಅಂಗಾರ ಅವರು 1987ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಕುಶಲ ಅವರ ವಿರುದ್ಧ ಪರಾಜಿತಗೊಂಡಿದ್ದರು. 1994ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 52,133 ಮತ ಪಡೆದು 15,051 ಅಂತರದಿಂದ ಗೆಲುವು ಪಡೆದಿದ್ದರು. 1999ರಲ್ಲಿ ಅಂಗಾರ ಅವರು ಕುಶಲ ಅವರ ವಿರುದ್ಧ 54,814 ಮತ ಪಡೆದು 6,997 ಅಂತರದಿಂದ ಗೆಲುವು ಪಡೆದಿದ್ದರು. 2004ರಲ್ಲಿ ಕಾಂಗ್ರೆಸ್‌ನ ಡಾ| ರಘು ಅವರ ವಿರುದ್ಧ ಅಂಗಾರ ಅವರು 61,480 ಮತ ಗಳಿಸಿ 17,085 ಅಂತರದ ಗೆಲುವು ದಾಖಲಿಸಿದ್ದರು. 2008ರಲ್ಲಿ ಕಾಂಗ್ರೆಸ್‌ನ ಡಾ| ರಘು ವಿರುದ್ಧ 61,144 ಮತ ಪಡೆದು, 4,322 ಅಂತರದಿಂದ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ರಘು ವಿರುದ್ಧ ಅಂಗಾರ ಅವರು 65,013 ಮತ ಪಡೆದು, 1,372 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಕಾಂಗ್ರೆಸ್‌ಗೆ ಸೋಲು
1994ರಿಂದ ನಿರಂತರವಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್‌ ಈ ಬಾರಿ ಗೆಲ್ಲುವ ನಿರೀಕ್ಷೆ ಪ್ರದರ್ಶಿಸಿತ್ತು. ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ತಯಾರಿ ನಡೆಸಿತ್ತು. ಕ್ಷೇತ್ರದಲ್ಲಿಯೂ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿಯ ಸ್ಪರ್ಧೆಯ ಲಕ್ಷಣ ಕಾಣಿಸಿತ್ತು. ಆದರೆ ಮತದಾನ ಸಂದರ್ಭದಲ್ಲಿ ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಮುಂದೆ ಕಾಂಗ್ರೆಸ್‌ ಮಂಕಾದಂತೆ ಕಂಡಿತ್ತು. ಶೇ. 80ಕ್ಕಿಂತ ಹೆಚ್ಚು ಮತದಾನ ದಾಖಲಾದ ಸಂದರ್ಭದಲ್ಲೇ ಬಿಜೆಪಿ 15 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲುವ ಲೆಕ್ಕಾಚಾರ ಮೂಡಿಸಿತ್ತು. ಅಂಗಾರ ಅವರು 25 ಸಾವಿರ ಮತಗಳ ಅಂತರದ ಗೆಲುವಿನ ವಿಶ್ವಾಸ ಹೊಂದಿದ್ದರು. ಫಲಿತಾಂಶದಲ್ಲಿ ಅದು ನಿಜವಾಗಿದೆ.

4 ಬಾರಿ ಮುಖಾಮುಖೀ
ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಮತ್ತು ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ ಪರಸ್ಪರ ಮುಖಾಮುಖೀ ಆಗಿದ್ದು ಇದು ನಾಲ್ಕನೇ ಬಾರಿ. ಸತತ ನಾಲ್ಕು ಬಾರಿಯೂ ಅಂಗಾರ ಅವರ ಎದುರು ರಘು ಸೋಲನುಭವಿಸಿದ್ದಾರೆ. ಮೂರು ಚುನಾವಣೆಗಳಲ್ಲಿ ಡಾ| ರಘು ಅವರ ಸೋಲಿನ ಅಂತರ ಇಳಿಮುಖಗೊಂಡಿರುವುದರಿಂದ ನಾಲ್ಕನೇ ಬಾರಿಗೆ ಸ್ಪರ್ಧೆಗೆ ಅವಕಾಶ ದೊರೆತಿತ್ತು. ಆದರೆ ಮೊದಲ ಮೂರು ಚುನಾವಣೆಗಳಿಗಿಂತಲೂ ಭಾರಿ ಅಂತರದಿಂದ ಡಾ| ರಘು ಪರಾಜಿತಗೊಂಡಿದ್ದಾರೆ.

— ಕಿರಣ್‌ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.