ನಾಡ ಕಚೇರಿಯಲ್ಲೇ ಸೌಲಭ್ಯ ಪಡೆಯಿರಿ


Team Udayavani, Jan 15, 2022, 12:58 PM IST

ನಾಡ ಕಚೇರಿಯಲ್ಲೇ ಸೌಲಭ್ಯ ಪಡೆಯಿರಿ

ಪಿರಿಯಾಪಟ್ಟಣ: ಜನರು ತಮ್ಮ ಸಮಸ್ಯೆಗಳ ದೈನಂದಿನ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರಗಳಿಗೆ ಹೋಗಿ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಅಧಿಕಾರವಿಕೇಂದ್ರಿಕರಣ ಮಾಡಿ ನಾಡ ಕಚೇರಿಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಕೆ.ಮಹದೇವ್‌ ತಿಳಿಸಿದರು.

ತಾಲೂಕಿನ ರಾವಂದೂರು ಹೋಬಳಿಕೇಂದ್ರದಲ್ಲಿ ಶುಕ್ರವಾರ ನೂತನ ನಾಡ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ದೈನಂದಿನಕೆಲಸವನ್ನು ಬಿಟ್ಟು ತಾಲೂಕು ಕೇಂದ್ರಗಳಿಗೆಹೋಗುವುದನ್ನು ತಪ್ಪಿಸಲು ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ಸ್ಥಾಪಿಸುವಮೂಲಕ ಕಂದಾಯ ಇಲಾಖೆಗೆ ಸೇರುವಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನರಿಗೆ ತುಂಬಾ ಅನುಕೂಲವಾಗಿದೆ. ಈ ಕೇಂದ್ರಗಳಲ್ಲಿಸಾರ್ವಜನಿಕರಿಗೆ ಬೇಕಾಗುವ ತಮ್ಮ ಆರ್‌ಟಿಸಿ ಪಹಣಿ, ಜಾತಿ ಮತ್ತು ಆದಾಯ ದೃಢೀಕರಣಪತ್ರ, ಎಂಆರ್‌, ವಿಧವಾ ವೇತನ, ಹೀಗೆ ಹಲವಾರು ರೀತಿಯ ಸರ್ಕಾರಿ ಸೇವೆಗಳುಕಡಿಮೆ ಸಮಯದಲ್ಲಿ ಹಾಗೂ ಹತ್ತಿರದಲ್ಲಿಯೇ ದೊರೆಯುತ್ತವೆ ಎಂದರು.

ಸುಸಜ್ಜಿತ ಕಟ್ಟಡ: 35 ವರ್ಷಗಳಿಂದ ತಾಲೂಕಿನ ನಾಡಕಚೇರಿಗಳು ಖಾಸಗಿಕಟ್ಟಡದಲ್ಲಿ ಬಾಡಿಗೆ ನೀಡಿ ಕಚೇರಿ ಕೆಲಸಗಳನ್ನುನಡೆಸುತ್ತಿದ್ದು, ಇದನ್ನು ಮನಗಂಡು ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಎಲ್ಲಾ ನಾಡ ಕಚೇರಿಗಳಿಗೂ ಸುಸಜ್ಜಿತ, ಸುಂದರ ಕಟ್ಟಡಗಳನ್ನು ಕಟ್ಟಿಸಿ ಕೊಡುವ ಮೂಲಕ ಸಾರ್ವಜನಿಕರಿಗೆ ಇನ್ನು ಉತ್ತಮ ರೀತಿಯಲ್ಲಿ ಕಂದಾಯ ಇಲಾಖೆಯು ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸ್ವಂತ ಕಟ್ಟಡ: ತಹಶೀಲ್ದಾರ್‌ ಚಂದ್ರಮೌಳಿ ಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುತ್ತಿದ್ದ ಸರ್ಕಾರಿ ಕೆಲಸಗಳು ಹೋಬಳಿ ಕೇಂದ್ರಗಳಲ್ಲಿ ನಡೆಯುವಂತಾಗಿದ್ದು, ಹಲವಾರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಕೆಲಸಕಾರ್ಯಗಳು ನಡೆಯುತ್ತಿದ್ದವು. ಎಲ್ಲಾ ಹೋಬಳಿ ಕೇಂದ್ರದ ನಾಡಕಚೇರಿಗಳು ಸ್ವಂತ ಕಟ್ಟಡಗಳನ್ನು ಹೊಂದಲು ಶಾಸಕರ ಇಚ್ಛಾಶಕ್ತಿಯೇ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದರು.

ಮುಖಂಡ ಆರ್‌.ಎಲ್ ಮಣಿ ಮಾತನಾಡಿ, ರಾವಂದೂರು ಹೋಬಳಿ ಕೇಂದ್ರವು ಸರ್ವತೋಮುಖ ಅಭಿವೃದ್ಧಿಗೆ ಶಾಸಕರಿಗೆ ಬೆಂಬಲ ನೀಡಬೇಕು ಎಂದರು.

ಕಾರ್ಯಕ್ರಮದ ನಿಮಿತ್ತ ಕಂದಾಯ ಇಲಾಖೆಯ ವತಿಯಿಂದ 450ಕ್ಕೂ ಹೆಚ್ಚುವಿಧವೆ, ಅಂಗವಿಕಲ, ವೃದ್ಧಾಪ್ಯ ವೇತನಗಳ ಮಂಜೂರಾತಿ ಪತ್ರವನ್ನು ಫ‌ಲಾನುಭವಿಗಳಿಗೆ ನೀಡಲಾಯಿತು. ಇದೇ ದಿನ ರಾವಂದೂರು ಪಬ್ಲಿಕ್‌ ಶಾಲೆಯ 2 ಕೊಠಡಿ ಕಾಮಗಾರಿ ಹಾಗೂ ಎನ್‌.ಶೆಟ್ಟಹಳ್ಳಿ ಶಾಲೆಯ ನೂತನಶಾಲಾ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಆರ್‌. ಎಸ್‌.ವಿಜಯುRಮಾರ್‌, ಉಪಾಧ್ಯಕ್ಷೆನೇತ್ರಾವತಿ, ತಾಲೂಕು ಜೆಡಿಎಸ್‌ ಅಧ್ಯಕ್ಷಅಣ್ಣಯ್ಯಶೆಟ್ಟಿ, ಇಒ ಕೃಷ್ಣಕುಮಾರ್‌,ಉಪತಹಶೀಲ್ದಾರ್‌ ಕೆ.ಶುಭಾ, ಕ್ಷೇತ್ರ

ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ತಾಪಂಮಾಜಿ ಉಪಾಧ್ಯಕ್ಷ ರಘುನಾಥ್‌, ಗ್ರಾಪಂಸದಸ್ಯರಾದ ಡಿ.ಜೆ ಕುಮಾರ್‌, ಭಾರತಿ, ಶಿವಕುಮಾರಿ, ಪ್ರಭು, ನಂದೀಶ್‌, ಮಲ್ಲೇಶ್‌, ಮಹದೇವ, ಮುಖಂಡರಾದ ಎಚ್‌.ಡಿ.ವಿಜಯ್, ಕುಮಾರ್‌, ಶಿವದೇವಪ್ಪ, ಆರ್‌.ವಿ.ನಂದೀಶ್‌, ಶಿವಣ್ಣ, ರಾಮಚಂದ್ರ, ಕೆ.ಆರ್‌.ಮಹದೇವ್‌, ಪ್ರಾಂಶುಪಾಲ ಕೆ.ಎಂ. ಶಿವಶಂಕರ್‌, ಉಪಪ್ರಾಂಶುಪಾಲ ಸುರೇಶ್‌, ಪಿಡಿಒ ಮಲ್ಲೇಶ್‌, ಆರ್‌ಐ ಶ್ರೀಧರ್‌, ಎಇಇ ಜಯಂತು, ಮಂಜುನಾಥ್‌, ಎಂಜಿನಿಯರ್‌ಗಳಾದ ರಕ್ಷಿತ್‌, ದಿನೇಶ್‌ ಮತ್ತಿತರರಿದ್ದರು.

ಸಮಸ್ಯೆ ಪರಿಹಾರಕ್ಕೆ ನನ್ನನ್ನೇ ಸಂಪರ್ಕಿಸಿ: ಶಾಸಕ :

ನಾನು ವಿಧಾನಸೌಧಕ್ಕೆ ನಮ್ಮ ತಾಲೂಕಿನ ಅಭಿವೃದ್ಧಿ ಕೆಲಸ ಕೇಳಲು ತಾಲೂಕಿನ ಒಬ್ಬ ಸೇವಕನಾಗಿ ಹೋಗಿ ಅನುದಾನ ತಂದು ತಾಲೂಕಿನ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ತಾಲೂಕಿನ ಯಾವುದೇ ಕೆಲಸ ಕಾರ್ಯಗಳಾಗಬೇಕಾದರೂ ದಲ್ಲಾಳಿಗಳ ಮುಖಾಂತರ ಹೋಗಿ ಹಣ ನೀಡದೇ, ನೇರವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಅಥವಾ ನನ್ನ ಹತ್ತಿರ ಬಂದು ಬಗೆಹರಿಸಿಕೊಳ್ಳಿ ಎಂದು ಶಾಸಕ ಕೆ.ಮಹದೇವ್‌ ಮನವಿ ಮಾಡಿದರು. ನಾನು ರಾಜಕೀಯ ನಡೆಸುವುದಕ್ಕಿಂತ ಮೊದಲು ನನ್ನ ಅಕ್ಕಪಕ್ಕದ ಬೀದಿಯವರಿಗೆ ವಿಧವಾವೇತನ, ವೃದ್ಧಾಪ್ಯವೇತನ ಮಾಡಿಸುವ ಮೂಲಕ ಸಾರ್ವಜನಿಕ ಕೆಲಸ ಮಾಡಿಸಿದ್ದರಿಂದ ನನ್ನನ್ನು ಮೊದಲ ಬಾರಿಗೆ ಜನರು ಪಟ್ಟಣ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಮಾಡಿದ್ದರು. ನನ್ನ ಜನಪರ ಕಾಳಜಿಯನ್ನು ಮನಗಂಡು ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.