ಜನಜೀವನ ಸಂಪೂರ್ಣ ಬಂದ್
Team Udayavani, Mar 23, 2020, 3:00 AM IST
ತಿ.ನರಸೀಪುರ: ಪಟ್ಟಣದಲ್ಲಿ ಜನತಾ ಕರ್ಫ್ಯೂಗೆ ಜನಬೆಂಬಲ ಉತ್ತಮವಾಗಿ ವ್ಯಕ್ತವಾಯಿತು. ವ್ಯಾಪಾರ, ವಾಹನಗಳ ಸಂಚಾರ ಹಾಗೂ ಜನಜೀವನ ಸಂಪೂರ್ಣವಾಗಿ ಬಂದ್ ಆಗಿತ್ತು. ಪಟ್ಟಣದ ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಯಂಪ್ರೇರಣೆಯಿಂದ ಜನತಾ ಕರ್ಫ್ಯೂಗೆ ಮುಂದಾಗಿದ್ದರು.
ಬೆರಳೆಣಿಕೆ ಬೈಕ್, ಕೆಲವೇ ಜನರ ಓಡಾಟವಿತ್ತು. ಕಾಲೇಜು ರಸ್ತೆ ಸೇರಿ ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ, ಚಿಕ್ಕ ಅಂಗಡಿ ಬೀದಿ ಹಾಗೂ ಇನ್ನಿತರ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಬಸ್, ಕಾರು ಸೇರಿದಂತೆ ಯಾವುದೇ ವಾಹನ ರಸ್ತೆಗೆ ಇಳಿದಿರಲಿಲ್ಲ.
ಮೈಸೂರು, ಶ್ರೀಮಲೆ ಮಹದೇಶ್ವರ ಬೆಟ್ಟ ಹಾಗೂ ಚಾಮರಾಜನಗರ ಸೇರಿದಂತೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 212ರ ಕಪಿಲಾನದಿ ನೂತನ ಸೇತುವೆಯೂ ವಾಹನಗಳ ಸಂಚಾರವಿಲ್ಲದೆ ಖಾಲಿಯಾಗಿ ಕಾಣುತ್ತಿತ್ತು. ಹೋಬಳಿ ಕೇಂದ್ರಗಳಾದ ಸೋಸಲೆ, ಬನ್ನೂರು ಹಾಗೂ ಮೂಗೂರು ಗ್ರಾಮಗಳಲ್ಲೂ ಕರ್ಫ್ಯೂಗೆ ಜನಬೆಂಬಲ ವ್ಯಕ್ತವಾಗಿದೆ. ಗಗೇಶ್ವರಿಯಲ್ಲೂ ವ್ಯಾಪಾರ ಬಂದ್ ಆಗಿತ್ತು.
“ತ್ರಿವೇಣಿ ಸಂಗಮ’ದಲ್ಲಿ ಯುಗಾದಿ ಪುಣ್ಯಸ್ನಾನ ಇಲ್ಲ: ದಕ್ಷಿಣ ಕಾಶಿಯಾದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮಾ.24, 25ರ ಯುಗಾದಿ ಹಬ್ಬದ ಪುಣ್ಯಸ್ನಾನ ಮತ್ತು ದೇವರ ಧಾರ್ಮಿಕ ಪೂಜೆ ಜಿಲ್ಲಾಧಿಕಾರಿಗಳ ಆದೇಶದಂತೆ ರದ್ದುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ. ಈ ಸಂಬಂಧ ಈಗಾಗಲೇ ತ್ರಿವೇಣಿ ಸಂಗಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಚ್ಚರಿಕೆ ಸೂಚನ ಫಲಕಗಳ ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ