ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಾಯಹಸ್ತ


Team Udayavani, Aug 13, 2019, 3:00 AM IST

pravaha

ಮೈಸೂರು: ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ವತಿಯಿಂದ ಪುರಭವನದಲ್ಲಿ ತೆರೆದಿರುವ ತುರ್ತು ಅವಶ್ಯಕ ಸಾಮಗ್ರಿಗಳ ಸಂಗ್ರಹ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.

ಗುರುವಾರದಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೊಂಡಿದ್ದು, ಶನಿವಾರ ಸಂಜೆ 2 ಲಾರಿಗಳಷ್ಟು ತುರ್ತು ಸಾಮಗ್ರಿಗಳನ್ನು ಮಡಿಕೇರಿ ಹಾಗೂ ವಿರಾಜಪೇಟೆ ಕಡೆಗೆ ಕಳುಹಿಸಿಕೊಡಲಾಯಿತು. ವಿರಾಜಪೇಟೆ ಭಾಗದಲ್ಲಿ ಮೊಬೈಲ್‌ ಟಾಯ್ಲೆಟ್‌ಗಳು ಅಗತ್ಯವಾಗಿದ್ದ ಕಾರಣ ಒಂದು ಲಾರಿಯಲ್ಲಿ ತೆಗೆದುಕೊಂಡು ಕಳುಹಿಸಲಾಗಿದೆ.

ಸಹಾಯ ಮಾಡುವವರ ಸಂಖ್ಯೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಕ್ಕಿ, ನೀರಿನ ಬಾಟಲ್‌ಗ‌ಳು, ಬಿಸ್ಕತ್‌, ಚಾಪೆ, ಬೆಡ್‌ಶೀಟ್‌ ಹೀಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಿದರು. ಇದರಿಂದಾಗಿ ಸಂಜೆ ವೇಳೆಗೆ ಸಣ್ಣ ವಾಹನಗಳ ಮೂಲಕ ತಿ.ನರಸೀಪುರ, ಹುಣಸೂರು, ಎಚ್‌.ಡಿ.ಕೋಟೆ ಸೇರಿದಂತೆ ಅಗತ್ಯವಿರುವ ತಾಲೂಕುಗಳಿಗೆ ತುರ್ತು ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಲಾರಿಯಲ್ಲಿ ಮಡಿಕೇರಿ ಭಾಗಕ್ಕೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್‌ ತಿಳಿಸಿದರು.

ಹೆಚ್ಚಿನ ಮಟ್ಟದಲ್ಲಿ ಸಹಾಯ ಮಾಡಿ: ಸಂತ್ರಸ್ತರಿಗೆ ಟೆಟ್ರಾ ಪ್ಯಾಕ್‌ನಲ್ಲಿರುವ ಹಾಲು, ಬ್ರೆಡ್‌, ಬಿಸ್ಕತ್‌, ಊಟಕ್ಕೆ ಬೇಕಾಗುವ ಸಾಮಗ್ರಿಗಳು, ಹಾಸಿಗೆ, ಚಾಪೆ, ಹೊದಿಕೆ, ಒಳ ಉಡುಪುಗಳು, ಸ್ಯಾನಿಟರಿ ಪ್ಯಾಡ್‌, ಟಪೋಲಿನ್‌, ಟವೆಲ್‌, ಸೀರೆ, ಪ್ಯಾಂಟ್‌, ಶರ್ಟ್‌, ಮಕ್ಕಳ ಉಡುಪು, ಬೆಚ್ಚಗಿನ ಉಡುಪು, ಅಡುಗೆ ಸಾಮಗ್ರಿಗಳು, ಗ್ಯಾಸ್‌ ಸ್ಟೌ, ಪ್ಲಾಸ್ಟಿಕ್‌ ಬಕೆಟ್‌ ಹಾಗೂ ಮಗ್‌, ರೈನ್‌ ಕೋಟ್‌, ಬಟ್ಟೆಗಳು, ಗ್ಲೌವ್ಸ್‌, ಮಾಸ್ಕ್, ಪ್ಲಾಸ್ಟಿಕ್‌ ಮ್ಯಾಟ್ಸ್‌, ಛತ್ರಿಗಳು, ಬೆಡ್‌ಶೀಟ್‌ ಅಂಡ್‌ ಪಿಲೋ, ಲೆಗ್ಗಿನ್ಸ್‌ ಆ್ಯಂಡ್‌ ನೈಟಿ, ಸ್ವೆಟರ್ (ಮಕ್ಕಳು , ವೃದ್ಧರಿಗೆ), ಟಾರ್ಚ್‌ ಲೈಟ್ಸ್‌, ಪೆನಾಯಿಲ್‌ ಕ್ಲೀನಿಂಗ್‌ ಲಿಕ್ವಿಡ್ಸ್‌, ಬ್ಲೀಚಿಂಗ್‌ ಪೌಂಡರ್‌, ಸೋಪು, ಶ್ಯಾಂಪು, ಟೂತ್‌ಪೇಸ್ಟ್‌ ಅಂಡ್‌ ಬ್ರಸ್‌, ಮೇಣದ ಬತ್ತಿಗಳು, ಬೆಂಕಿಪೊಟ್ಟಣ ಇತ್ಯಾದಿ ಅಗತ್ಯ ವಸ್ತುಗಳು ಅಗತ್ಯವಾಗಿದ್ದು, ಜನರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಹಾಯ ಮಾಡಿದವರಗೆ ರಶೀದಿ: ಸಂತ್ರಸ್ತರ ನೆರವಿಗೆ ಆಗಮಿಸುವ ನಾಗರಿಕರಿಗೆ ವಸ್ತುಗಳನ್ನು ಪಡೆದಿರುವುದಾಗಿ ಪಾಲಿಕೆ ವತಿಯಿಂದ ರಶೀದಿಯನ್ನು ನೀಡುವ, ಪ್ರತಿಯೊಂದು ವಸ್ತುಗಳು ಹಾಗೂ ಸಹಾಯ ಮಾಡಿದ ವ್ಯಕ್ತಿಗಳ ಹೆಸರು, ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.