ಕೊಚ್ಚೆ ಕಂಡು ಜನರ ಹೆಗಲೇರಿದ ಸಿಇಒ!
Team Udayavani, Mar 25, 2017, 3:45 AM IST
ರಾಯಚೂರು: ಕುಡಿವ ನೀರಿನ ಸಮಸ್ಯೆ ವಾಸ್ತವ ಅರಿಯಲು ಗ್ರಾಮಕ್ಕೆ ತೆರಳಿದ್ದ ಜಿಪಂ ಸಿಇಒ ಎಂ. ಕೂರ್ಮಾರಾವ್ ಕೊಚ್ಚೆಯಲ್ಲಿ ಇಳಿಯದ ಕಾರಣ ಗ್ರಾಮಸ್ಥರೇ ಹೆಗಲ ಮೇಲೆ ಹೊತ್ತು ಸಾಗಿರುವ ಘಟನೆ ಇದೀಗ ಟೀಕೆಗೆ ಗುರಿಯಾಗಿದೆ.
ಕುಡಿವ ನೀರಿನ ಸಮಸ್ಯೆ ವಿಚಾರವಾಗಿ ಜಿಪಂ ಸದಸ್ಯರು ಕೆಲ ದಿನಗಳ ಹಿಂದೆ ನಡೆದ ಸಾಮಾನ್ಯ ಸಭೆ ಬಹಿಷ್ಕರಿಸಿದ್ದರು. ಈ ವೇಳೆ ಖುದ್ದು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದ್ದರು. ಅದರಂತೆ ಭೇಟಿ ನೀಡಿ ತಾಲೂಕಿನ ಆತೂRರು ಗ್ರಾಮದ ಶುದ್ಧ ಕುಡಿವ ನೀರಿನ ಘಟಕಕ್ಕೆ ತೆರಳುವ ಹಾದಿಯಲ್ಲಿ ಕೊಚ್ಚೆ ಇದ್ದ ಕಾರಣ ಸಿಇಒ ಅಲ್ಲಿಂದಲೇ ವೀಕ್ಷಣೆ ಮಾಡಲು ಮುಂದಾದರು. ಆ ಕಡೆ ತೆರಳಿದ್ದ ಜಿಪಂ ಸದಸ್ಯ ಕೇಶವ ರೆಡ್ಡಿ, ಸಿಇಒ ಅವರೂ ಬರಬೇಕೆಂದು ತಾಕೀತು ಮಾಡಿದರು. ಇದಕ್ಕೆ ಸಿಇಒ ಹಿಂದೇಟು ಹಾಕಿದ್ದರಿಂದ ಈ ವೇಳೆ ಗ್ರಾಮಸ್ಥರು “ನಾವು ಕರೆ ತರುತ್ತೇವೆ’ ಎಂದು ಹೆಗಲ ಮೇಲೆ ಹೊತ್ತುಕೊಂಡರು. ಆದರೆ, ಸಿಇಒ ಮಾತ್ರ ಇದ್ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸದೆ ಉತ್ಸವ ಮೂರ್ತಿಯಂತೆ ಕುಳಿತು ಸಾಗಿದರು. ಅಚ್ಚರಿ ಎಂದರೆ ಅಲ್ಲಿಂದ ಹಿಂದಿರುವಾಗಲೂ ಇದೇ ಸನ್ನಿವೇಶ ಮರುಕಳಿಸಿತು. ಆಗಲೂ ಸಿಇಒ ಬಾಯಿಬಿಡದೆ ಜನರ ಹೆಗಲೇರಿದ್ದಾರೆ.
ಸಿಇಒ ಸ್ಪಷ್ಟನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಇಒ ಎಂ.ಕೂರ್ಮಾರಾವ್, ಜನ ಅಭಿಮಾನದಿಂದ ಹೊತ್ತುಕೊಂಡು ಹೋಗಿದ್ದಾರೆ. ನಾನು ಮತ್ತು ನನ್ನ ಗನ್ಮ್ಯಾನ್ ಬೇಡ ಎಂದಿದ್ದೇವೆ. ಯಾರಿಗೂ ಬಲವಂತ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದನದಲ್ಲೂ ಖಂಡನೆ: ಸಿಇಒ ವಿರುದ್ಧ ಸೂಕ್ತ ಕ್ರಮ
ವಿಧಾನಸಭೆ: ರೈತರ ಹೆಗಲ ಮೇಲೆ ಕುಳಿತು ನಾಲೆ ದಾಟಿದ ರಾಯಚೂರು ಜಿಲ್ಲಾ ಪಂಚಾಯತಿ ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯಲ್ಲಿ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾಲಿಗೆ ಬೂಟು ಹಾಕಿಕೊಂಡು ರೈತರ ಹೆಗಲ ಮೇಲೆ ಕುಳಿತು ಹೋಗಿರುವುದು ಗುಲಾಮಗಿರಿಯ ಪದ್ಧತಿಯಾಗಿದ್ದು, ಅಧಿಕಾರಿಯ ನಡವಳಿಕೆಯಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸ್ಪೀಕರ್ ಕೆ.ಬಿ. ಕೋಳಿವಾಡ ಕೂಡ ಈ ಪ್ರಕರಣವನ್ನು ಖಂಡಿಸಿ, ಇದೊಂದು ಅಮಾನವೀಯ ಘಟನೆ, ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡು ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅವರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅಧಿಕಾರಿ ಬಗ್ಗೆ ವರದಿ ಪಡೆದು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್