ಮತ್ತೆ 11 ಮಂದಿಗೆ ಕೋವಿಡ್ ದೃಢ
Team Udayavani, Jul 3, 2020, 9:25 AM IST
ರಾಯಚೂರು: ಕಳೆದ ಮೂರು-ನಾಲ್ಕು ದಿನಗಳಿಂದ ಏರುಗತಿಯಲ್ಲೇ ಸಾಗಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗುರುವಾರವೂ ಮುಂದುವರಿದಿದೆ. ಮತ್ತೆ 11 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದ ನಗರದ ದೇವಿನಗರದ 43 ವರ್ಷದ ಮಹಿಳೆ, 23 ವರ್ಷದ ಮಹಿಳೆ, ಬೋಳಮಾನದೊಡ್ಡಿಯ 56 ವರ್ಷದ ಮಹಿಳೆ, ಆಂಧ್ರದಿಂದ ಹಿಂದಿರುಗಿದ ಗಂಜ್ ಏರಿಯಾದ 52 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ 21 ವರ್ಷದ ಮಹಿಳೆಗೆ ಸಂಪರ್ಕದಿಂದ ತಗುಲಿದೆ. ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ 65 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಕಲ್ಲೂರು ಗ್ರಾಮದ 23 ವರ್ಷದ ಮಹಿಳೆ ಮಹಾರಾಷ್ಟ್ರ ನಂಟಿನಿಂದ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಬಂದ ಸಿಂಧನೂರು ನಗರದ 28 ವರ್ಷದ ಮಹಿಳೆಗೆ, 40 ವರ್ಷದ ಪುರುಷ, ತೆಲಂಗಾಣದಿಂದ ಬಂದ 30 ವರ್ಷದ ಪುರುಷನಿಗೆ ಸೋಂಕು ಇರುವುದು ದೃಢಪಟ್ಟಿದೆ.
ಈವರೆಗೆ ದಾಖಲಾದ ಸೋಂಕಿತರಲ್ಲಿ 404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ದೇವದುರ್ಗ ತಾಲೂಕಿನಿಂದ 83, ಲಿಂಗಸುಗೂರು ತಾಲೂಕಿನಿಂದ 58, ಮಾನ್ವಿ ತಾಲೂಕಿನಿಂದ 63, ಸಿಂಧನೂರು ತಾಲೂಕಿನಿಂದ 94 ಮತ್ತು ರಾಯಚೂರು ತಾಲೂಕಿನಿಂದ 144 ಸೇರಿದಂತೆ ಒಟ್ಟು 442 ಜನರ ಗಂಟಲಿನ ದ್ರವ ಮಾದರಿಯನ್ನು ಗುರುವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಿದ್ದ ವರದಿಗಳಲ್ಲಿ 152 ನೆಗೆಟಿವ್ ಆಗಿವೆ. ಇನ್ನೂ 1,547 ಸ್ಯಾಂಪಲ್ಗಳ ಫಲಿತಾಂಶ ಬರಬೇಕಿದೆ. ಫೀವರ್ ಕ್ಲಿನಿಕ್ಗಳಲ್ಲಿ ಗುರುವಾರ 495 ಜನರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ