ಡೋಂಡಂಬಳಿ ಗ್ರಾಮದ ಹೊಲದಲ್ಲಿ ಯಂತ್ರ-ಮಂತ್ರ ಕಲ್ಲು ಪತ್ತೆ


Team Udayavani, Feb 19, 2020, 12:18 PM IST

19-February-07

ದೇವದುರ್ಗ: ದೊಂಡಂಬಳಿ ಗ್ರಾಮದ ಹೊಲವೊಂದರಲ್ಲಿ ಯಂತ್ರ-ಮಂತ್ರ ಕಲ್ಲು ಪತ್ತೆಯಾಗಿದೆ. ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ| ಚನ್ನಬಸಪ್ಪ ಮಲ್ಕಂದಿನ್ನಿ ಬಿಳಿ ಕಣ ಶಿಲೆ ಪತ್ತೆ ಹಚ್ಚಿದ್ದಾರೆ. ಇಂತಹ ಯಂತ್ರ ಮಂತ್ರಶಾಸ್ತ್ರ ಚತುರ್ವೇದಗಳಲ್ಲೊಂದಾದ ಅಥರ್ವಣ ವೇದದಲ್ಲಿ ನಿರೂಪಿತವಾಗಿದೆ. ಅದರಲ್ಲಿ ಪರಮೇಶ್ವರ ಪಾರ್ವತಿ ದೇವಿಗೆ ನಿರೂಪಿಸಿದ. ಇದನ್ನು ಅಗ್ನಿ ದೇವರು ತಿಳಿದುಕೊಂಡು ನಂತರ ಮಹಾಮುನಿಗಳಾದ ವಶಿಷ್ಟ ಮಹರ್ಷಿಗಳು ಅರಿತುಕೊಂಡು ಬಳಕೆಗೆ ತಂದರು ಎಂಬ ನಂಬಿಕೆಯಿದೆ ಎಂದು ಡಾ| ಮಲ್ಕಂದಿನ್ನಿ ಮಾಹಿತಿ ನೀಡಿದ್ದಾರೆ.

ಅಥರ್ವಣವೇದ ಸಾಮಾನ್ಯರ ನಂಬಿಕೆ ಪ್ರತಿಬಿಂಬಿಸುವ ಯಂತ್ರ ಮಂತ್ರ ಮೋಡಿ ಮಾಡುವ ವಿದ್ಯೆ ಒಳಗೊಂಡಿದೆ. ರೋಗಾದಿಗಳು ದುಷ್ಟಬೂತಗಳನ್ನು ಮಂತ್ರ-ತಂತ್ರಗಳಿಂದ ಕಡಿಮೆ ಮಾಡಬಹುದು ಎಂದು ಹೇಳಿದೆ. ದೊಂಡಂಬಳಿ ಗ್ರಾಮದಲ್ಲಿ ಪತ್ತೆಯಾದ ಯಂತ್ರ ಚಿಕ್ಕ ಮಕ್ಕಳಿಗೆ ಬರುವ ಬಾಲಗ್ರಹ ಎಂದು ತಿಳಿದು ಬರುತ್ತದೆ.

ಮಕ್ಕಳು ಹಠಮಾಡುವುದು, ಮೌನವಾಗಿರುವುದು, ಕೈಕಾಲುಗಳು ನಿಸ್ತೇಜವಾಗುವ ಲಕ್ಷಣಗಳುಂಟಾದರೆ ಶಾಸ್ತ್ರಜ್ಞರು ಬಾಲಗ್ರಹ ಎಂದು ತಿಳಿದು ತಾಮ್ರದ ತಗಡಿನಲ್ಲಿ ಮಂತ್ರ ಬರೆದು ಅಭಿಮಂತ್ರಿಸಿ ತಾಯತಗಳಲ್ಲಿ ತುಂಬಿ ಕೊರಳು, ರಟ್ಟೆಗಳು ಮತ್ತು ನಡುವಿನಲ್ಲಿ ಕಟ್ಟುತ್ತಿದ್ದರು. ಇದರಿಂದ ಮಗು ಆರಾಮವಾಗುತ್ತಿತ್ತು. ಒಟ್ಟಾರೆ ಅವರವರ ನಂಬಿಕೆಯಲ್ಲಿ ಇದು ಕೆಲಸ ಮಾಡುತ್ತಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಜನರು ಇಂತಹ ಯಂತ್ರ-ಮಂತ್ರಗಳಿಗೆ ಮೊರೆ ಹೋಗುವುದು ಕಡಿಮೆಯಾಗಿದೆ.

ದೊಂಡಂಬಳಿ ಗ್ರಾಮದಲ್ಲಿ ಪತ್ತೆಯಾದ ಅಂಕೆಗಳಿರುವ ಚಪ್ಪಡಿಕಲ್ಲು ಕ್ರಿಶ 19-20ನೇ ಶತಮಾನದ್ದು ಇರಬಹುದು. ಇದರಲ್ಲಿರುವ ಎಡಗಡೆಯಿಂದ ಬಲಭಾಗಕ್ಕೆ ನಾಲ್ಕು ಸಾಲಿನಲ್ಲಿ ಸಂಖ್ಯೆ ಕೂಡಿಸಿದರೆ ಒಟ್ಟು 24 ಬರುತ್ತದೆ. ಹಾಗೆಯೇ ಮೇಲಾºಗದಿಂದ ಕೆಳಭಾಗಕ್ಕೆ ನಾಲ್ಕು ಸಾಲಿನ ಅಂಕಿ ಕೂಡಿಸಿದರೆ ಒಟ್ಟು 24 ಬರುತ್ತದೆ. ಇದು ಬಹಶಃ ಹಿಂದೆ ಜಂಗಮರು ಜಮೀನು ಆಗಿರಬೇಕು. ಹಾಗೆಯೇ ಜಂಗಮರ ಹೊಳೆ ದಂಡೆಯಲ್ಲಿರುವ ಜಮೀನು ಇದ್ದ ಕಾರಣ ಇಲ್ಲಿಗೆ ಸ್ನಾನಕ್ಕೆ ಅನೇಕ ಸ್ಥಳಗಳಿಂದ ಬಂದ ಜನರು ಪರ್ವ, ಅಮಾವಾಸ್ಯೆಗಳ ಕಾಲದಲ್ಲಿ ಹೊಳೆ(ಕೃಷ್ಣಾನದಿ)ಯಲ್ಲಿ ಸ್ನಾನಮಾಡಿ ಯಂತ್ರ ಕಲ್ಲು ನೋಡುವುದರಿಂದ ಮತ್ತು ಪೂಜೆ ಮಾಡುವುದರಿಂದ ಜನರಿಗೆ ಪುಣ್ಯ ಪ್ರಾಪ್ತಿಯಾಗಲಿ ಎಂಬ ಉದ್ದೇಶದಿಂದ ಹಾಕಿಸಿರಬಹುದು ಅಥವಾ ಈ ಕಲ್ಲು ಯಾರೋ ಜಂಗಮರ ಮನೆಯಲ್ಲಿದ್ದು, ಅದು ನಂತರದ ದಿನಗಳಲ್ಲಿ ಜಮೀನಿಗೆ ಏಕೆ ಬಂತು ಎಂದು ಹೇಳುವುದು ನಿಗೂಢವಾಗಿದೆ. ಯಂತ್ರ ಮಂತ್ರ ಕಲ್ಲಿನ ಕೆಳಗೆ ಅಥವಾ ಸಮೀಪದಲ್ಲಿ ನಿಧಿ ಹುದುಗಿಸಿಟ್ಟಿರುತ್ತಾರೆ ಎಂಬ ತಪ್ಪು ಕಲ್ಪನೆಯು ಸಹ ಇಲ್ಲಿನ ಜನರಲ್ಲಿ ಬೇರೂರಿದೆ. ವಿವಿಧ ತರಹದ ಇಲ್ಲ ಸಲ್ಲದ ಅನುಮಾನ ಮೂಡಿಸಿಕೊಂಡಿದ್ದಾರೆ. ಆದ್ದರಿಂದ ಪ್ರಜ್ಞಾವಂತ ಇಲ್ಲಿನ ನಾಗರಿಕರು ಇಂತಹ ತಪ್ಪು ಕಲ್ಪನೆಗಳಿಗೆ ಕಿವಿಗೊಡಬರದು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.