ದೇವಾಪೂರ ಶ್ರೀಗಳ ಜನ್ಮ ದಿನ: ಸಸಿ ನಾಟಿ
Team Udayavani, Dec 14, 2021, 2:35 PM IST
ಸುರಪುರ: ದೇವಾಪೂರ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರ ಜನ್ಮದಿನದ ನಿಮಿತ್ತ ರಂಗಂಪೇಟ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ವತಿಯಿಂದ ಸಸಿ ನೆಡಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ದೇವಾಪೂರ ಶ್ರೀಗಳು ಸಮಾಜಮುಖೀ ಚಿಂತನೆಯ ಪ್ರಗತಿಶೀಲ ಸ್ವಾಮಿಗಳು. ಕಳೆದ ಎರಡು ದಶಕಗಳಿಂದ ದೇವಾಪೂರ ಜಡಿ ಶಾಂತಲಿಂಗೇಶ್ವರ ಹಿರೇಮಠದ ಪೂಜ್ಯ ಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಕಾರ್ಯಾನಿರ್ವಹಿಸುತ್ತಿದ್ದು, ಶರಣ ಪರಂಪರೆ, ವೈಚಾರಿಕ ಮನೋಭಾವನೆ ಜೊತೆಗೆ ಮೂಲ ಸಂಸ್ಕೃತಿ, ಸಂಸ್ಕಾರಗಳನ್ನು ಯುವ ಜನರಿಗೆ ಪರಿಚಯಿಸುತ್ತಾ ಈ ಭಾಗದಲ್ಲಿ ಬಹುದೊಡ್ಡದಾದ ಯುವ ಪಡೆಯನ್ನು ಕಟ್ಟಿ ಮಾರ್ಗದರ್ಶನ ಮಾಡುತ್ತಾ ಕಾರ್ಯಾನಿರ್ವಹಿಸುತ್ತಿದ್ದಾರೆ ಎಂದರು.
ಮಹಾಸಭೆಯ ಯುವ ಘಟಕ ರಾಜ್ಯ ಉಪಾಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿದರು. ಪದಾಧಿಕಾರಿಗಳಾದ ಸಿದ್ದನಗೌಡ ಪಾಟೀಲ್, ಸಂಗಣ್ಣ ಯಕ್ಕೆಳ್ಳಿ, ಜಗದೀಶ ಪಾಟೀಲ್, ಮಲ್ಲಿಕಾರ್ಜುನ ರೆಡ್ಡಿ, ರವಿಗೌಡ ಹೆಮನೂರು, ಶಿವರಾಜ ಕಲೀಕೆರಿ, ಅಂಬ್ರೇಶ ಕುಂಬಾರ, ಮಂಜುನಾಥ ಹಿರೇಮಠ, ಸೂಗು ಸಜ್ಜನ್, ಲಿಂಗರಾಜ ಶಾಬಾದಿ, ಸುಪ್ರೀತ್ ಜಾಕಾ, ಶೇಖು ಭುಮಶೆಟ್ಟಿ, ಶರಬಣ್ಣ ಸತ್ಯಂಪೇಟ, ದೇವರಾಜ ನಂದಗಿರಿ ಇದ್ದರು.