ರೈತರ ಸಂಕಷ್ಟಕ್ಕೆ ಬಡಕಲು ನಾಯಕತ್ವ ಕಾರಣ


Team Udayavani, Dec 4, 2018, 1:01 PM IST

ray-1.jpg

ರಾಯಚೂರು: ಜಿಲ್ಲೆಯ ನೀರಾವರಿ ವಿಚಾರದಲ್ಲಿ ಇಂಥ ವಿಷಮ ಸ್ಥಿತಿ ನಿರ್ಮಾಣವಾಗಲು ನಮ್ಮಲ್ಲಿರುವ ಬಡಕಲು ನಾಯಕತ್ವಗಳೇ ಕಾರಣ ಎಂದು ರೈತಪರ ಹೋರಾಟಗಾರ ಹನುಮನಗೌಡ ಬೆಳಗುರ್ಕಿ ಟೀಕಿಸಿದರು.

ರಾಯಚೂರು ತಾಲೂಕು ಕೃಷ್ಣ ಬಲದಂಡೆ ಕಾಲುವೆ ರೈತರ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

ಎನ್‌ಆರ್‌ಬಿಸಿ ಕಾಲುವೆಯನ್ನು ಗಣೇಕಲ್‌ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. ಈ ಯೋಜನೆ ಜಾರಿಯಿಂದ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಕಾನೂನು ತೊಡಕುಗಳ ಬಗ್ಗೆ ಅರಿಯುವುದು ಅಗತ್ಯ. ಇದು ಕೇವಲ ನಾಲ್ಕು ಟಿಎಂಸಿ ಅಡಿ ನೀರಿನ ವಿಚಾರವಲ್ಲ. ಭವಿಷ್ಯದಲ್ಲಿ ಎದುರಾಗುವ ಆತಂಕದ ವಿಚಾರ ಎಂದು ಎಚ್ಚರಿಸಿದರು.

ತುಂಗಭದ್ರಾ ಎಡದಂಡೆ ನಾಲೆ (ಟಿಎಲ್‌ಬಿಸಿ), ನಾರಾಯಣಪುರ ಬಲದಂಡೆ ನಾಲೆ (ಎನ್‌ಆರ್‌ಬಿಸಿ) ವ್ಯಾಪ್ತಿಗೆ ಒಟ್ಟು ಏಳು ಲಕ್ಷ ಎಕರೆ ನೀರಾವರಿ ಪ್ರದೇಶವಿದೆ. ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ವಿಸ್ತರಿಸುವಂಥ ದೂರದೃಷ್ಟಿ ನಾಯಕರಲ್ಲಿಲ್ಲ. ಜಿಂದಾಲ್‌ಗೆ ಕೃಷ್ಣ ನದಿಯಿಂದ ನೀರು ಪೂರೈಸಲು ತೋರುವ ಇಚ್ಛಾಶಕ್ತಿ ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ಕಾಣದಾಗಿದೆ ಎಂದು ದೂರಿದರು.

ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದಿಂದ 200 ಟಿಎಂಸಿ ಅಡಿ, ಆಲಮಟ್ಟಿಯಿಂದ 300 ಟಿಎಂಸಿ ಅಡಿ ನೀರು ವೃಥಾ ನದಿಗೆ ಹರಿದು ಹೋಗಿದೆ. ಆದರೆ, ಜಿಲ್ಲೆಗೆ ನೀರಾವರಿಗಾಗಿ 212 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೆ, ಅದರಲ್ಲಿ ಕೇವಲ 150 ಟಿಎಂಸಿ ಅಡಿ ಪ್ರಮಾಣದಲ್ಲಿ ಮಾತ್ರ ನೀರು ಲಭ್ಯವಾಗುತ್ತಿದೆ. ನೀರು ನಿರ್ವಹಣೆಯಲ್ಲಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ. ನೀರಿನ ಲಭ್ಯತೆ ಆಧರಿಸಿ ಸಮರ್ಪಕವಾಗಿ ಹಂಚಿಕೆ ಮತ್ತು ಬಳಕೆ ಮಾಡುವಲ್ಲಿ ಕಾಣುತ್ತಿರುವ ವೈಫಲ್ಯವೇ ಇಂದು ಕೊನೆ ಭಾಗದ ರೈತರು ಕಣ್ಣೀರಿಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.

ಕೇವಲ ನೀರಾವರಿ ವಿಚಾರವಾಗಿಯೇ ವಿಧಾನಸೌಧದಲ್ಲಿ ಒಂದು ವಾರ ಚರ್ಚೆ ನಡೆಯಬೇಕು. ಅಂದಾಗ ರಾಜ್ಯದ ನೀರಿನ ಸಮಸ್ಯೆಗಳಿಗೆ ಏನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರ ಜಮೀನಿನಲ್ಲಿ ಚಿಕ್ಕ ಕೆರೆ ನಿರ್ಮಿಸಲಿ, ಅದಕ್ಕಾಗಿ ಸರ್ಕಾರ ಶೇ.50ರಷ್ಟು ಸಬ್ಸಿಡಿ ಕೊಡಲಿ. ಆಗ ಯಾವ ರೈತರೂ ಈ ರೀತಿ ನೀರಿಗಾಗಿ ಬೀದಿಗೆ ಇಳಿಯುವ ಸನ್ನಿವೇಶ ನಿರ್ಮಾಣವಾಗುವುದಿಲ್ಲ ಎಂದು ಸಲಹೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಕೃಷ್ಣ ಕಣಿವೆ ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ, ನೀರಿಗಾಗಿ ಮೂರನೇ ಯುದ್ಧ ನಡೆಯಲಿದೆ ಎಂಬ ಮಾತು ಹಂತಹಂತವಾಗಿ ನಿಜವಾಗುತ್ತಿದೆ. ಆದರೆ, ಇಂದು ನೀವು ಕೈಗೊಂಡ ಹೋರಾಟ ಯಾವುದೇ ಕಾರಣಕ್ಕೂ ರಾಜಕೀಯ ಸ್ವರೂಪ ಪಡೆಯಬಾರದು. ಒಂದು ವೇಳೆ ಹಾಗಾದಲ್ಲಿ ಆ ಹೋರಾಟದ ಮೌಲ್ಯವೇ ಕಳೆದು ಹೋಗುತ್ತದೆ ಎಂದು ಎಚ್ಚರಿಸಿದರು.

ನೀರಿನ ಸಮರ್ಪಕ ಬಳಕೆ ಮಾಡಿದರೆ ಯಾವ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ, ನಮ್ಮ ಪಾಲಿನ ನೀರನ್ನು ನೆರೆ ರಾಜ್ಯಗಳಿಗೆ ಹರಿಸಿ ನಾವು ಬರ ಎದುರಿಸುತ್ತಿದ್ದೇವೆ. ಇಂದು ನೀರಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡುತ್ತಿದೆ. ರೈತನಿಗೆ ಯಾವ ಯೋಜನೆ, ಸಾಲ ಮನ್ನಾ, ಸಬ್ಸಿಡಿಗಳು ಬೇಕಿಲ್ಲ. ನೀರು ಕೊಟ್ಟರೆ ಸಾಕು. ಸರ್ಕಾರ ಮೊದಲು ಆ ಕೆಲಸ ಮಾಡಲಿ. ನಿಮ್ಮ ಹೋರಾಟ ಅಚಲವಾಗಿರಲಿ ಎಂದು ಹೇಳಿದರು.

ರೈತರು ಕೂಡ ಅಧಿಕ ಇಳುವರಿ ಆಸೆಗೆ ಅಗತ್ಯವಿಲ್ಲದಿದ್ದರೂ ಅಧಿಕ ನೀರು ಹಾಯಿಸಿ, ರಸಗೊಬ್ಬರ ಬಳಸಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭಾಗದಲ್ಲಿ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯಬಹುದು. ಆ ದಿಸೆಯಲ್ಲಿ ಕೃಷಿ ಮಾಡುವಂತೆ ಕರೆ ನೀಡಿದರು. ಕೊನೆಗೆ ಹೋರಾಟದ ರೂಪರೇಷೆಗಳ ಕುರಿತು ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮಿತಿ ಮುಖಂಡ ಶಿವಬಸಪ್ಪ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಗೋಪಾಲರೆಡ್ಡಿ, ಶರಬನಗೌಡ, ಷಣ್ಮುಖಪ್ಪ, ಸಿದ್ಧನಗೌಡ ಮುರಾನ್‌ಪುರ ಸೇರಿ ಇತರರಿದ್ದರು. ಚನ್ನಬಸವಣ್ಣ ನಿರೂಪಿಸಿದರು.

ಕೇವಲ 30 ಕಿ.ಮೀ. ಅಂತರದಲ್ಲಿ ಎರಡು ಜೀವನದಿಗಳು ಹರಿಯುತ್ತಿವೆ. ಆದರೆ, ನಮ್ಮ ನಾಯಕರಿಗೆ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ. 50 ವರ್ಷಗಳ ಹಿಂದೆ ಜಲಾಶಯ ನಿರ್ಮಿಸಿದರೂ ಇನ್ನೂ ಕೊನೆ ಭಾಗದಲ್ಲಿ ಕಾಲುವೆ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. ನಗರಕ್ಕೆ ಕುಡಿಯುವ ನೀರು ಬೇಕು ಎಂಬ ಕಾರಣಕ್ಕೆ 150 ಹಳ್ಳಿಗಳ ರೈತರ ಬದುಕು ಬಲಿ ಕೊಡುವುದು ಸರಿಯಲ್ಲ. 
 ಷಣ್ಮುಖಪ್ಪ ವೆಂಕಟಾಪುರ, ಹೋರಾಟ ಸಮಿತಿ ಸದಸ್ಯ

ಈ ಹೋರಾಟಕ್ಕೆ ಸುದೀರ್ಘ‌ ಇತಿಹಾಸವಿದೆ. ಹಿಂದೆ 157 ಕಿ.ಮೀ.ವರೆಗೆ ಕಾಲುವೆ ವಿಸ್ತರಿಸಲು ಹೋರಾಡಿದ್ದೆವು. ಇಂದು ಲಿಂಕ್‌ ಕಾಲುವೆ ಬೇಡ ಎಂದು ಹೋರಾಡಬೇಕಿದೆ. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಕೊನೆ ಭಾಗದ ರೈತರು ಸ್ವ ಇಚ್ಛೆಯಿಂದ ಹೋರಾಟಕ್ಕೆ ಧುಮುಕಬೇಕು. ಅಂದಾಗ ಫಲ ಸಿಗಲು ಸಾಧ್ಯ.
 ಶಿವಬಸಪ್ಪ ಮಾಲಿಪಾಟೀಲ, ಹೋರಾಟ ಸಮಿತಿ ಮುಖಂಡ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.