20 ತಿಂಗಳಿಗೊಮ್ಮೆ ಸಂಪುಟ ಪುನಾರಚಿಸಲಿ: ಶಿವನಗೌಡ
Team Udayavani, Jan 14, 2021, 3:06 PM IST
ರಾಯಚೂರು: ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ ಅಧಿ ಕಾರ ಅನುಭವಿಸಿದವರನ್ನು ಬಿಟ್ಟು ಹೊಸಬರಿಗೂ ಅವಕಾಶ ನೀಡಲಿ. ಪ್ರತಿ 20 ತಿಂಗಳಿಗೊಮ್ಮೆ ಸಂಪುಟ ಪುನಾರಚಿಸಲಿ ಎಂದು ಸಚಿವ ಸ್ಥಾನಾಕಾಂಕ್ಷಿ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ತಿಂಗಳ ಬಳಿಕ ಉಪ ಮುಖ್ಯಮಂತ್ರಿ, ಸಚಿವರಾದವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಪ್ರದೇಶವಾರು, ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ಸಿಗಬೇಕು. ನನಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಮಸ್ಕಿಯ ಪ್ರತಾಪಗೌಡರು ವಲಸೆ ಬಂದವರು. ಅವರಿಗೆ ಸಚಿವ ಸ್ಥಾನ ನೀಡಬೇಕು. ಜತೆಗೆ ಹಿರಿತನವನ್ನು ಪರಿಗಣಿಸಬೇಕು. ನಾನು ಕೂಡ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಮ್ಮನ್ನು ಪರಿಗಣಿಸಲಿ. ಈಗಿರುವ ಉಸ್ತುವಾರಿ ಸಚಿವರು ಅತಿಥಿಗಳಾಗಿದ್ದಾರೆ. ಸ್ಥಳೀಯರಿಗೆ ಉಸ್ತುವಾರಿ ನೀಡಲಿ ಎನ್ನುವುದು ಜನರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ವರಿಷ್ಠರು ಎಲ್ಲ ಸರಿಪಡಿಸುವ ಭರವಸೆ ಇದೆ ಎಂದರು.
ಇದನ್ನೂ ಓದಿ:ಮಾಸೂರಿನ ವರಕವಿ ಸರ್ವಜ್ಞ ಪ್ರಾಧಿಕಾರಕ್ಕಾಗಿ ಹೋರಾಟ: ಬಿ.ಡಿ. ಹಿರೇಮಠ