ತರಕಾರಿ ಸಗಟು ಮಾರಾಟಕ್ಕೆ ಸ್ಥಳ ಪರಿಶೀಲನೆ
Team Udayavani, Apr 23, 2020, 4:57 PM IST
ಲಿಂಗಸುಗೂರು: ಎಪಿಎಂಸಿಯಲ್ಲಿ ತರಕಾರಿ ಸಗಟು ಮಾರಾಟಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಲಿಂಗಸುಗೂರು: ವಿವಿಧ ತರಕಾರಿಗಳ ಸಗಟು(ಹೋಲಸೇಲ್) ಮಾರಾಟಕ್ಕೆ ಪಟ್ಟಣದ ಎಪಿಎಂಸಿಯಲ್ಲಿ ವ್ಯವಸ್ಥೆ ಮಾಡಲು ಬುಧವಾರ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಸ್ಥಳ ಪರಿಶೀಲಿಸಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ತರಕಾರಿಗಳ ಸಗಟು ಮತ್ತು ಚಿಲ್ಲರೆ ಮಾರಾಟಕ್ಕಾಗಿ ಸದ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎರಡು ವ್ಯಾಪಾರಗಳು ಒಂದೇ ಕಡೆ ನಡೆಯುತ್ತಿರುವುದರಿಂದ ಜನ ಸಂದಣಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ತರಕಾರಿ ಸಗಟು ಮಾರಾಟಕ್ಕಾಗಿ ನಾಳೆಯಿಂದ ಎಪಿಎಂಸಿ ಹೊಸ ಪ್ಲಾಟ್ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಗಟು ವ್ಯಾಪಾರ ಮಾಡುವವರು ಬೆಳಗಿನ ಜಾವ 2:30ಗೆ ವಹಿವಾಟು ಮಾಡುವುದನ್ನು ಬಿಟ್ಟು ಬೆಳಗ್ಗೆ 5:00ಕ್ಕೆ ವಹಿವಾಟು ನಡಸಬೇಕು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಗಟು ವ್ಯಾಪಾರಸ್ಥ ಅಬ್ದುಲ್ ರೌಫ್ರಿಗೆ ಸೂಚಿಸಿದರು. ಡಿವೈಎಸ್ಪಿ ಎಸ್.ಎಸ್. ಹುಲ್ಲೂರು, ತಹಶೀಲ್ದಾರ್ ಚಾಮರಾಜ ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಮುಖ್ಯಾಧಿಕಾರಿ ಕೆ. ಮುತ್ತಪ್ಪ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ