ಹಳ್ಳಿಗಳಿಗೆ ಫ್ಲೋರೈಡ್ಯುಕ್ತ ನೀರೇ ಗತಿ
ನೀರು ಶುದ್ಧೀಕರಣ ಘಟಕಗಳ ದುರಸ್ತಿಗೆ ನಿರ್ಲಕ್ಷ್ಯ ಮೊಣಕಾಲು ಬೇನೆ, ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಉಲ್ಭಣ
Team Udayavani, Mar 21, 2020, 1:03 PM IST
ಮಾನ್ವಿ: ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವುದರಿಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಅನೇಕ ಹಳ್ಳಿಗಳಲ್ಲಿರುವ ಶುದ್ಧೀಕರಣ ಘಟಕಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ದುರಸ್ತಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸದಿರುವುದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ತಾಲೂಕಿನಲ್ಲಿ 135 ಶುದ್ಧೀಕರಣ ಘಟಕಗಳಿವೆ. ಇದರಲ್ಲಿ 93 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 38 ಘಟಕಗಳು ದುರಸ್ತಿಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕೆಆರ್ ಡಿಎಲ್ನಿಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ 13 ಶುದ್ಧೀಕರಣ ಘಟಕಗಳನ್ನು ಹಸ್ತಾಂತರಿಸಿಕೊಳ್ಳಲಾಗಿದೆ. ಇಲಾಖೆಯಿಂದ ನಿರ್ಹಹಣೆಗಾಗಿ ಐದು ಜನ ಶಾಖಾ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ.
ದುರಸ್ತಿ: 135ರಲ್ಲಿ 38 ಮಾತ್ರ ಕಟ್ಟಿವೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ, ಸತ್ಯಸಂಗತಿ ಎಂದರೆ ಯಾವುದೇ ಶುದ್ಧೀಕರಣ ಘಟಕಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹದಿನೈದು ದಿನ ಕಾರ್ಯನಿರ್ವಹಿಸಿದರೆ ತಿಂಗಳು ದುರಸ್ತಿಯಾಗುತ್ತವೆ. ಕರಡಿಗುಡ್ಡ ಮತ್ತು ಕಪಗಲ್ ಗ್ರಾಮದಲ್ಲಿ ಶುದ್ಧೀಕರಣ ಘಟಕಗಳು ಪ್ರಾರಂಭಿಸಿದ ಮೊದಲ ದಿನವೇ ದುರಸ್ತಿಗೆ ಒಳಪಟ್ಟಿದ್ದು,
ಲ್ಕೈದು ವರ್ಷ ಕಳೆದರೂ ರಿಪೇರಿ ಮಾಡಿಲ್ಲ. ಜಾನೇಕಲ್ನಲ್ಲಿನ ಘಟಕ ಪದೆ ಪದೆ ಕೈಕೊಡುತ್ತಲೇ ಇವೆ.
ಕಳಪೆ: ವಿವಿಧ ಏಜೆನ್ಸಿಗಳಿಗೆ ನೀಡಿದ ಶುದ್ಧೀಕರಣ ಘಟಕಗಳು ತುಂಬಾ ಕಳಪೆ ಗುಣಮಟ್ಟ ಮತ್ತು ಕಡಿಮೆ ಸಾಮರ್ಥ್ಯದ ಮಷಿನ್ ಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿವೆ.
ಶುದ್ಧೀಕರಣ ಯಂತ್ರದಲ್ಲಿ 26 ಬಿಡಿಭಾಗದ ಸಲಕರಣೆಗಳಿರುತ್ತವೆ. ಇವು ಕಳಪೆಯಾಗಿದ್ದು, ನೀರನ್ನು ಸರಿಯಾಗಿ ಶುದ್ಧೀಕರಿಸುವುದಿಲ್ಲ. ಪದೆ ಪದೆ ಯಂತ್ರಗಳು ದುರಸ್ತಿಗೆ ಬರುತ್ತಿವೆ. ಇನ್ನು ಕೆಲವಡೆ ನೀರಿನ ಕೊರತೆ, ನಿರ್ವಹಣೆ ಕೊರತೆಯಿಂದ ಯಂತ್ರಗಳು ಕೆಟ್ಟಿವೆ. ಅಲ್ಲದೆ ಏಜೆನ್ಸಿಗಳು ಕೂಡಲೇ ದುರಸ್ತಿಗೂ ಮುಂದಾಗುವುದಿಲ್ಲ. ಪಟ್ಟಣದಲ್ಲಿ ಅನೇಕ ವಾರ್ಡ್ಗಳಲ್ಲಿ ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸಿದ್ದರೂ, ಕಳಪೆ ಯಂತ್ರ ಮತ್ತು ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ.
ಫ್ಲೋರೈಡ್ ಸಮಸ್ಯೆ: ಇನ್ನೂ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಫ್ಲೋರೈಡ್, ಅರ್ಸೆನಿಕ್ ಅಂಶವಿರುವ ನೀರಿನ್ನೇ ಬಳಸುತ್ತಿದ್ದಾರೆ. ಕೆಲವಡೆ ಕೆರೆ, ಬಾವಿ ಮತ್ತು ಕಾಲುವೆ ನೀರನ್ನು ಶುದ್ಧೀಕರಿಸದೆ ಸೇವನೆ ಮಾಡುತ್ತಿರುವುದರಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಾನೇಕಲ್ ಗ್ರಾಮದಲ್ಲಿ ಫ್ಲೋರೈಡ್ಯುಕ್ತ ನೀರಿನ ಸೇವನೆಯಿಂದ ಮೊಣಕಾಲು ನೋವು, ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುತ್ತಿವೆ. ಪೋತ್ನಾಲ್, ಕೊಕ್ಲೃಕಲ್, ಚಾಗಬಾವಿ, ಬೊಮ್ಮನಾಳ, ಸಂಗಾಪುರ ಕಪಗಲ್, ಚೀಕಲಪರ್ವಿ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ಶುದ್ಧ ನೀರಿಗೆ ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಾರಿ ಕೊರೊನಾ ವೈರಸ್ ಭೀತಿಯಲ್ಲಿರುವುದರಿಂದ ಸ್ಥಿತಿ ಇನ್ನೂ ಗಂಭೀರ ಎನ್ನವಂತಿದೆ.
ಖಾಸಗಿ ಶುದ್ಧೀಕರಣ ಘಟಕಗಳಿಂದ ಅಧಿಕ ಹಣ ನೀಡಿ ನೀರು ಖರೀದಿ ಮಾಡಿ ಕುಡಿಯಬೇಕಾಗುತ್ತದೆ. ಇನ್ನಾದರೂ ಅಧಿಕಾರಿಗಳು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿಬಂದಿವೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ತಾಲೂಕಿನಾದ್ಯಂತ 135 ಆರ್ಒ ಪ್ಲಾಂಟ್ಗಳಿದ್ದು, ಕೇವಲ 38 ದುರಸ್ತಿಯಾಗಿವೆ. ಈಗಾಗಲೇ ಇವುಗಳ ರಿಪೇರಿಗೆ ಸಂಬಂಧಿಸಿದ ಏಜೆನ್ಸಿಗೆ ಸೂಚಿಸಿದ್ದೇನೆ. ಜಂಗಮರಹಳ್ಳಿಯಲ್ಲಿ ಶುದ್ಧೀಕರಣ ದುರಸ್ತಿ ಮಾಡಿಸಲಾಗಿದೆ. ಶಾಖಾಪುರದಲ್ಲಿ ಕೆರೆಗೆ ನೀರು ತುಂಬಿಸಲಾಗಿದೆ. ಹೀಗೆ ಒಂದೊಂದಾಗಿ ದುರಸ್ತಿ ಮಾಡಿಸಲಾಗುತ್ತಿದ್ದು, ಸಮಯಾವಕಾಶ ಬೇಕಿದೆ.
ಶಶಿಕಾಂತ್ ವಂದಾಳಿ,
ಗ್ರಾಮೀಣ ನೀರು ಸರಬರಾಜು ಇಲಾಖೆ,
ಮಾನ್ವಿ
ಕಳೆದ 15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷಿಸಲಾಗಿತ್ತು. ಆದರೆ ಕಳೆದ ವರ್ಷದಿಂದ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಕಳೆದ ತಿಂಗಳು ಐದು ಬೋರ್ವೆಲ್ ಕೊರೆಯಿಸಿ, ಟ್ಯಾಂಕ್ ನಿರ್ಮಾಣ ಮಾಡಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದೆಯೂ ನೀರಿನ ಸಮಸ್ಯೆ ಇರುವ ವಾರ್ಡ್ಗಳಲ್ಲಿ ಬೋರ್ ವೆಲ್ ಕೊರೆಸಲಾಗುವುದು. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ರಾಜಾಮಹೇಂದ್ರ ನಾಯಕ,
ಪುರಸಭೆ ಸದಸ್ಯರು.
ರವಿ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ