ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ: ವೆಂಕಟಪ್ಪ
ತಾಲೂಕು ಸಮ್ಮೇಳನಗಳನ್ನು ಮಾಡಿ, ಈ ಭಾಗದ ಸಾಧಕರನ್ನು, ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡಲಾಗಿದೆ.
Team Udayavani, Feb 23, 2021, 12:58 PM IST
ಮಾನ್ವಿ: ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ನಡೆದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಸ್ತೆ, ನೀರಾವರಿ, ಶೈಕ್ಷಣಿಕ, ಗ್ರಾಮೀಣ, ಪಟ್ಟಣ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಆಡಳಿತ ಮಾಡಲಾಗುತ್ತಿದ್ದು, ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದು, ತಮ್ಮ ಎರಡೂವರೆ ವರ್ಷದ ಅಧಿಕಾರದಲ್ಲಿ ಎರಡು ತಾಲೂಕು ಸಮ್ಮೇಳನಗಳನ್ನು ಮಾಡಿ, ಈ ಭಾಗದ ಸಾಧಕರನ್ನು, ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಘೋಷಣೆ ಮಾಡಿದರು. ನಂತರ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸರ್ವಾಧ್ಯಕ್ಷ ಡಾ| ಜಯಪ್ರಕಾಶ ರಡ್ಡಿ, ಸಮ್ಮೇಳನದ ಉದ್ಘಾಟಕರಾದ ಡಾ| ಶೀಲಾದಾಸ್, ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್, ನಿಕಟಪೂರ್ವ
ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭುಪಾಟೀಲ್, ಪುರಸಭೆ ಸದಸ್ಯ ರಾಜಾಮಹೇಂದ್ರ ನಾಯಕ, ಕಸಾಪ ಅಧ್ಯಕ್ಷ ಮಹ್ಮದ್ ಮುಜೀಬ್, ಗೌರವ ಕಾರ್ಯದರ್ಶಿ
ಬಸವರಾಜ ಭೋಗಾವತಿ, ಪಿ.ಪರಮೇಶ, ಮೂಕಪ್ಪ ಕಟ್ಟಿಮನಿ, ಎ.ಬಿ. ಉಪ್ಪಂಠ, ಡಾ| ರೋಹಿಣಿ ಮಾನ್ವೀಕರ್, ಡಿ.ಬಸನಗೌಡ, ಶಿಕ್ಷಕರಾದ ಸಂಗಮೇಶ
ಮುಧೋಳ, ಮಹಾದೇವಪ್ಪ, ಶ್ರೀಶೈಲಗೌಡ, ಡಿ.ಸಿ. ಪಾಟೀಲ್, ನಾಗರಾಜ ಕೊಳ್ಳಿ ಇದ್ದರು.