ಬಂಡೆ ಉರುಳಿ ಇಬ್ಬರು ಬಾಲಕರ ದುರ್ಮರಣ: ಓರ್ವ ಬಾಲಕನ ಕಾಲು ಮುರಿತ
Team Udayavani, Jul 24, 2020, 6:24 PM IST
ರಾಯಚೂರು: ಜಿಲ್ಲೆಯ ದೇವದುರ್ಗದ ಗೌರಮ್ಮ ಪೇಟೆ ಕಾಲೋನಿಯಲ್ಲಿ ಮಳೆ ಬಂದ ಪರಿಣಾಮ ಪಕ್ಕದ ಬೆಟ್ಟದಿಂದ ಬಂಡೆ ಉರುಳಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ನಡೆದಿದೆ.
ವಿರೇಶ (13), ರಮೇಶ (10) ಬಂಡೆ ಉರುಳಿ ಬಿದ್ದು ಮೃತಪಟ್ಟ ದುರ್ದೈವಿಗಳು.
ಘಟನೆಯಲ್ಲಿ ಮತ್ತೊಬ್ಬ ಬಾಲಕ ಮೌನೇಶನಿಗೆ ಕಾಲು ಮುರಿದಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾದ್ಯಂತ ಮಧ್ಯಾಹ್ನದಿಂದ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ.