ಜಡಿಶಾಂತಲಿಂಗೇಶ್ವರ ಮಠದ ವತಿಯಿಂದ ವೃದ್ಧೆಗೆ ಸೂರು
Team Udayavani, Apr 27, 2020, 1:51 PM IST
ಸುರಪುರ: ಪಾಳದಕೇರಿ ವೃದ್ದೆಗೆ ದೇವಾಪುರ ಮಠದ ವತಿಯಿಂದ ಸೂರು ನಿರ್ಮಿಸಿ ಹಸ್ತಾಂತರಿಸಲಾಯಿತು
ಸುರಪುರ: ನಗರದ ಪಾಳದಕೇರಿ ನಿವಾಸಿ ದಲಿತ ವೃದ್ದೆ ದುರ್ಗಮ್ಮಳಿಗೆ ದೇವಾಪುರದ ಜಡಿಶಾಂತಲಿಂಗೇಶ್ವರ ಮಠದ ವತಿಯಿಂದ ಸೂರು ನಿರ್ಮಿಸಿ ಹಸ್ತಾಂತರಿಸುವ ಮೂಲಕ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ವೃದ್ದೆ ದುರ್ಗಮ್ಮಳ ಮನೆಗೆ ಮೇಲ್ಛಾವಣೆ ಇಲ್ಲದೆ ಮಳೆ, ಗಾಳಿ, ಬಿಸಿಲಿನಲ್ಲಿಯೇ ಆಕೆ ಜೀವನ ಸಾಗಿಸುತ್ತಿದ್ದಳು. ಲಾಕ್ಡೌನ್ನಿಂದಾಗಿ ದವಸ ಧಾನ್ಯಗಳ ಕಿಟ್ ಹಂಚಲು ಹೋಗಿದ್ದ ರಾಜುಗೌಡ ಸೇವಾ ಸಮಿತಿ ಪದಾಧಿಕಾರಿಗಳು ಗಮನಿಸಿ ಶ್ರೀಗಳ ಗಮನಕ್ಕೆ ತಂದಿದ್ದರು. ಶ್ರೀಗಳು ತಕ್ಷಣ ಸ್ಪಂದಿಸಿ ಸ್ವಂತ ಖರ್ಚಿನಲ್ಲಿ ಸೂರು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ದುರ್ಗಮ್ಮಳ ಮನೆಗೆ ಮನೆ ಮೇಲ್ಛಾವಣೆ, ಪ್ಲಾಸ್ಟರ್, ವಿದ್ಯುತ್ ಸಂಪರ್ಕ, ಸುಣ್ಣ ಬಣ್ಣ ಮಾಡಿಸಿಕೊಟ್ಟರು. ಬಸವ ಜಯಂತಿ ಶುಭ ದಿನವಾದ ರವಿವಾರ ಪ್ರಮುಖರ ಸಮ್ಮುಖದಲ್ಲಿ ಗೃಹ ಪ್ರವೇಶ ಪೂಜೆ ಮಾಡಿಸಿ ಅಜ್ಜಿಗೆ ಸರ್ಮಿಪಿಸಿದರು.
ಸಿಪಿಐ ಸಾಹೇಬಗೌಡ ಪಾಟೀಲ, ಕೆಂಭಾವಿ ಪಿಎಸ್ಐ ಸುದರ್ಶನರೆಡ್ಡಿ, ಗುವಿವಿ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ, ಬಸವೇಶ್ವರ ಸಹಕಾರ ಸಂಘದ ನಿರ್ದೇಶಕ ಜಗದೀಶ ಪಾಟೀಲ ಸೂಗೂರು, ಮುಖಂಡರಾದ ಲಕ್ಷ್ಮೀಕಾಂತ ಬಿರಾದಾರ ದೇವರಗೋನಾಲ, ಮಲ್ಲು ಬಾದ್ಯಾಪುರ, ಪರಶುರಾಮ ನಾಟೇಕರ್, ಪವನ, ಪ್ರವೀಣ, ಚೇತನ ವಿಭೂತೆ. ಸಂತೋಷ ಸೇರಿ ರಾಜುಗೌಡ ಸೇವಾ ಸಮಿತಿ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ