ತವರಿಗೆ ಬರುವ ತವಕದಲ್ಲಿ ಮಸಣ ಸೇರಿದ 7 ಜನ: ತೆಲಂಗಾಣದಿಂದ ರಾಯಚೂರಿಗೆ ಬರುವಾಗ ದುರ್ಘಟನೆ
Team Udayavani, Mar 28, 2020, 12:21 PM IST
ರಾಯಚೂರು: ಕೋವಿಡ್-19 ಹಾವಳಿಯಿಂದ ತಪ್ಪಿಸಿಕೊಳ್ಳಲು ತೆಲಂಗಾಣದ ಸೂರ್ಯಪೇಟದಿಂದ ತಮ್ಮೂರಿಗೆ ಬರುತ್ತಿದ್ದ ಏಳು ಜನ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ತಡರಾತ್ರಿ ತೆಲಂಗಾಣದ ಶಂಷಾಬಾದ್ ಬಳಿ ನಡೆದಿದೆ.
ಕೂಲಿಕಾರ್ಮಿಕರಿದ್ದ ಬುಲೆರೋ ಮ್ಯಾಕ್ಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ರಾಯಚೂರು ಮೂಲದ ಇಬ್ಬರು ಚಿಕ್ಕಮಕ್ಕಳು, ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ಏಳು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಇವರೆಲ್ಲರೂ ಕೋವಿಡ್-19 ಭೀತಿ ಹಿನ್ನೆಲೆ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಕೂಲಿಕೆಲಸಕ್ಕಾಗಿ ಸೂರ್ಯಪೇಟಕ್ಕೆ ಗುಳೆ ಹೋಗಿದ್ದ ಇವರು ತೆಲಂಗಾಣದ ರಾಯಚೂರಿಗೆ ಬರುವಾಗ ಅಪಘಾತ ಸಂಭವಿಸಿದೆ.
ಟ್ರಕ್ ನಲ್ಲಿ ಒಟ್ಟು 30 ಜನ ಕಾರ್ಮಿಕರಿದ್ದರು. ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಲ್ಲಿ ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆ ಮೂಲದವರಿದ್ದಾರೆ.
ಗಾಯಾಳುಗಳನ್ನು ಶಂಷಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಷಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ