ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಪುಟ್ಟರಂಗ ಶೆಟ್ಟಿ
Team Udayavani, Sep 17, 2018, 6:30 AM IST
ರಾಯಚೂರು: ಕಾಂಗ್ರೆಸ್ನಿಂದ ಮತಯಾಚಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆ ಇಲ್ಲ. ಬಿಜೆಪಿಯಿಂದ ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದು ಸಚಿವ ಪುಟ್ಟರಂಗ ಶೆಟ್ಟಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಬಿಜೆಪಿ ಸೇರುವಂತೆ ಯೋಗೀಶ್ವರ್, ರಾಮಚಂದ್ರ ಎನ್ನುವವರು ಆಮಿಷವೊಡ್ಡಿದ್ದರು. ಸಚಿವ ಸ್ಥಾನ, ಹಣ ನೀಡುವುದಾಗಿ ತಿಳಿಸಿದ್ದರು. ಆದರೆ, ನಾನು ತಿರಸ್ಕರಿಸಿದ್ದೆ. ರಮೇಶ
ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಸರ್ಕಾರ ಕೆಡವಲು ಮುಂದಾದರೆ ನಾವೇ ಬಿಜೆಪಿಯವರನ್ನು ಸೆಳೆಯುತ್ತೇವೆ ಎಂದರು.