ರೈಲ್ವೇ ಹಳಿ ವಿದ್ಯುದೀಕರಣಕ್ಕೆ ಹಸಿರು ನಿಶಾನೆ

ಕರಾವಳಿ ರೈಲ್ವೇ ವಲಯದಲ್ಲಿ ಹೊಸ ನಿರೀಕ್ಷೆ | 2 ಹಂತದಲ್ಲಿ ಕಾಮಗಾರಿ ಸಾಧ್ಯತೆ

Team Udayavani, Apr 26, 2019, 4:13 PM IST

ramanar-2-tdy..

● ದಿನೇಶ್‌ ಇರಾ

ಮಂಗಳೂರು: ರಾಜಧಾನಿಯಿಂದ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಬೆಂಗಳೂರು-ಮಂಗಳೂರು ರೈಲ್ವೇ ಹಳಿಯ ಪೈಕಿ ಮೈಸೂರು, ಹಾಸನ, ಮಂಗಳೂರು ಮಾರ್ಗ ವಿದ್ಯುದೀಕರಣ ಯೋಜನೆಗೆ ಮಂಜೂರಾತಿ ದೊರಕಿದ್ದು, ಎರಡು ಹಂತಗಳಲ್ಲಿ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ.

ರೈಲ್ವೇ ಇಲಾಖೆಯ ಅಧೀನದಲ್ಲಿರುವ ಅಲಹಾಬಾದ್‌ನ ಸೆಂಟ್ರಲ್ ಆರ್ಗನೈಸೇಶನ್‌ ಫಾರ್‌ ರೈಲ್ವೇ ಎಲೆಕ್ಟ್ರಿಫಿಕೇಶನ್‌ ವಿಭಾಗ ಈ ಯೋಜನೆ ನಿರ್ವಹಿಸುತ್ತಿದೆ. ಬೆಂಗಳೂರಿನಿಂದ ಮೈಸೂರುವರೆಗೆ ರೈಲ್ವೇ ಹಳಿ ಈಗಾಗಲೇ ವಿದ್ಯುದೀಕರಣಗೊಂಡಿದೆ. ಅಲ್ಲಿಂದ ಮಂಗಳೂರುವರೆಗಿನ ಸುಮಾರು 310 ಕಿ.ಮೀ. ಉದ್ದದ ಹಳಿ ವಿದ್ಯುದೀಕರಣಕ್ಕೆ ಬಾಕಿಯಿದೆ. ಈ ಪೈಕಿ ಮಂಗಳೂರು-ಹಾಸನ ಮಾರ್ಗದ ವಿದ್ಯುದೀಕರಣ ಯೋಜನೆಗೆ ಮೊದಲ ಮಂಜೂರಾತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ನಿರೀಕ್ಷೆ: ಸುರತ್ಕಲ್ ಸಮೀಪದ ತೋಕೂರುವಿನಿಂದ ಮಹಾರಾಷ್ಟ್ರದ ರೋಹಾವರೆಗಿನ ಒಟ್ಟು 741 ಕಿ.ಮೀ. ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಪಾಲಕ್ಕಾಡ್‌ ದಕ್ಷಿಣ ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ನಡುವಣ 328 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಮಂಗಳೂರು ಜಂಕ್ಷನ್‌ (ಕಂಕನಾಡಿ)ವರೆಗೆ ಪೂರ್ಣಗೊಂಡಿದ್ದು, ತೋಕೂರುವರೆಗೆ ಮುಂದುವರಿಯಲಿದೆ. ಹೀಗೆ ಕರಾವಳಿಯ ಎರಡು ರೈಲ್ವೇ ಸಂಪರ್ಕ ಹಳಿಯು ವಿದ್ಯುದೀಕರಣ ಕಾಣುತ್ತಿರುವಾಗಲೇ, ಇದೀಗ ಮೈಸೂರು- ಹಾಸನ-ಮಂಗಳೂರು ರೈಲು ಹಳಿ ವಿದ್ಯುದೀಕರಣಕ್ಕೆ ನೈಋತ್ಯ ರೈಲ್ವೇ ವಿಭಾಗ ಮುಂದಡಿ ಇಟ್ಟಿರುವುದು ರೈಲ್ವೇ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಅರಸೀಕೆರೆ ಮಾರ್ಗ: ರೈಲ್ವೇ ಇಲಾಖೆ ಮೂಲಗಳ ಪ್ರಕಾರ, ಕಳೆದ ಕೇಂದ್ರ ಬಜೆಟ್‌ನಲ್ಲಿ ಮೈಸೂರು -ಹಾಸನ- ಮಂಗಳೂರು ರೈಲ್ವೇ ಹಳಿ ವಿದ್ಯುದೀಕರಣಕ್ಕೆ ಮಂಜೂರಾತಿ ನೀಡಲಾಗಿದ್ದು, ಸುಮಾರು 316 ಕೋ.ರೂ. ಮೀಸಲಿಡಲಾಗಿದೆ. ಇದರಲ್ಲಿ ಮಂಗಳೂರು-ಹಾಸನ ಕಾಮಗಾರಿ ಮೊದಲಿಗೆ ಆರಂಭಿಸಿ, ಆ ಬಳಿಕ ಹಾಸನ-ಮೈಸೂರು ಕಾಮಗಾರಿ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಹಾಸನದಿಂದ ಅರಸೀಕೆರೆ ಮಾರ್ಗ ಕೂಡ ವಿದ್ಯುದೀಕರಣ ಯೋಜನೆಗೆ ಪರಿಗಣಿಸಲಾಗಿದೆ. ಈ ಕುರಿತ ಅಂತಿಮ ತೀರ್ಮಾನ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಪಡೀಲ್ನಿಂದ ಆರಂಭ: ಮಂಗಳೂರು -ಮೈಸೂರು ರೈಲ್ವೇ ಹಳಿ ವಿದ್ಯುದೀಕರಣ ಯೋಜನೆ ಹಿನ್ನೆಲೆಯಲ್ಲಿ ಮಂಗಳೂರಿನ ಪಡೀಲ್ನಿಂದ ಬಂಟ್ವಾಳ, ಕಬಕ ಪುತ್ತೂರು, ಎಡಮಂಗಲ, ಸುಬ್ರಹ್ಮಣ್ಯ ಘಾಟಿ, ಸಕಲೇಶಪುರ-ಹಾಸನ ಮಾರ್ಗದ ರೈಲ್ವೇ ಹಳಿಯು ವಿದ್ಯುದೀಕರಣಕ್ಕೆ ಬದಲಾಗಬೇಕಿದೆ.

ಸುಬ್ರಹ್ಮಣ್ಯ-ಸಕಲೇಶಪುರ ಪರಿಸರ ಸೂಕ್ಷ್ಮ ಪ್ರದೇಶ: ಸುಬ್ರಹ್ಮಣ್ಯ -ಸಕಲೇಶಪುರ ರೈಲ್ವೇ ಮಾರ್ಗ ಪರಿಸರ ಸೂಕ್ಷ್ಮದಿಂದ ನಿರ್ಬಂಧಗಳನ್ನು ಹೊಂದಿದೆ. ತಿರುವುಗಳು ಅಧಿಕ ಇರುವ ಕಾರಣ ಹಾಗೂ ರೈಲ್ವೇ ಸುರಕ್ಷಿತ ಪ್ರಯಾಣದ ನೆಲೆಯಲ್ಲೂ ಇಲ್ಲಿ ಹೆಚ್ಚಿನ ರೈಲು ಓಡಾಟಕ್ಕೆ ಅವಕಾಶವೂ ಇಲ್ಲ. ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಘಾಟಿಯಲ್ಲಿ ಸಂಚರಿಸಲು ರೈಲಿಗೆ ಸುಮಾರು 2.30 ತಾಸು (ಗಂಟೆಗೆ 35 ಮೀ.ವೇಗ) ಅಗತ್ಯವಿದೆ. ಹೀಗಾಗಿ ಇಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳುವುದು ಕೂಡ ಸವಾಲಿನ ಕಾರ್ಯ.

ಜತೆಗೆ ವಿದ್ಯುದೀಕರಣ ಆದ ಬಳಿಕವೂ ಇಲ್ಲಿ ರೈಲು ತನ್ನ ನಿಯಮಿತ ವೇಗದಿಂದ ಅಧಿಕ ವೇಗವಾಗಿ ಬರುವ ಸಾಧ್ಯತೆ ಕಡಿಮೆ. ಆದರೆ, ಡೀಸೆಲ್ ಬಳಕೆಯ ಮೂಲಕ ರೈಲು ಸಂಚರಿಸುವಾಗ ಪರಿಸರ ಮಾಲಿನ್ಯ ಅಧಿಕ ಆಗುವುದಾದರೆ, ವಿದ್ಯುದೀಕರಣ ಆದ ನಂತರ ಇಂತಹ ಪರಿಸರ ಮಾಲಿನ್ಯಕ್ಕೆ ತಡೆ ನೀಡಬಹುದು ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ದಿ ಸಮಿತಿ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ.

ಪರಿಸರ ಸ್ನೇಹಿ/ ವೇಗ ವರ್ಧಕ ರೈಲು ಪ್ರಯಾಣ:

ರೈಲು ಮಾರ್ಗ ವಿದ್ಯುದೀಕರಣದಿಂದ ಇಂಧನ ಉಳಿತಾಯ ಹಾಗೂ ಪರಿಸರಕ್ಕೆ ಹೆಚ್ಚು ಲಾಭವಾಗಲಿದೆ. ಒಂದು ಕಾಲದಲ್ಲಿ ಕಲ್ಲಿದ್ದಲು ಉರಿಸಿ ರೈಲುಗಳನ್ನು ಓಡಿಸಲಾಗುತ್ತಿತ್ತು. ಡೀಸೆಲ್ ಚಾಲಿತ ರೈಲು ಎಂಜಿನ್‌ ಬಂದ ಬಳಿಕ ‘ಉಗಿಬಂಡಿ’ಯ ಕಾಲ ಇತಿಹಾಸದ ಪುಟ ಸೇರಿದೆ. ಈಗ ನಮ್ಮಲ್ಲಿ ಡೀಸೆಲ್ ಚಾಲಿತ ಎಂಜಿನ್‌ಗಳ ಜತೆಗೆ ವಿದ್ಯುತ್‌ ಚಾಲಿತ ರೈಲುಗಳೂ ಇವೆ. ಇದ್ದಲು ಮತ್ತು ಡೀಸೆಲ್ ಹೊಗೆ ಮಾಲಿನ್ಯದಿಂದ ಪರಿಸರದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆದರೆ, ವಿದ್ಯುತ್‌ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಒಮ್ಮೆ ರೈಲ್ವೆ ವಿದ್ಯುದೀಕರಣ ಆದ ಬಳಿಕ ಈಗಿನ ವೆಚ್ಚಕ್ಕಿಂತ ಶೇ.50ರಷ್ಟು ಮಾತ್ರ ಖರ್ಚು ಮಾಡಬಹುದಾಗಿದೆ. ಹೀಗಾಗಿ ಇಂಧನ ಉಳಿತಾಯ ಜೊತೆಗೆ ವೇಗ ವರ್ಧನೆಗೂ ವಿದ್ಯುತ್‌ ಮಾರ್ಗ ಪೂರಕ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.