ರೇಷ್ಮೆಗೆ ಬೆಂಬಲ ಬೆಲೆ ಘೋಷಿಸಲು ಪಟ್ಟು
Team Udayavani, Jul 9, 2020, 6:45 AM IST
ಕನಕಪುರ: ಕೋವಿಡ್ 19 ಆರ್ಭಟದಿಂದ ರೇಷ್ಮೆ ಬೆಲೆ ಕುಸಿದಿದ್ದು ಕಂಗಾಲಾಗಿರುವ ಬೆಳೆಗಾರರಿಗೆ ಕೂಡಲೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಕಬ್ಟಾಳೆಗೌಡ ಸರ್ಕಾರವನ್ನು ಒತ್ತಾಯಿಸಿದರು. ನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಖಂಡಿಸಿ ಪ್ರತಿಭಟನೆ ನಡೆಸಿ ಮಾರುಕಟ್ಟೆ ಉಪನಿರ್ದೇಶಕ ಬಿ.ವಿ. ವೆಂಕಟರಾಮು ಅವರ ಮೂಲಕ ಸರ್ಕಾ ರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ರೇಷ್ಮೆ ಬೆಳೆ ನಂಬಿಕೊಂಡು ಅನೇಕ ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ ಕೋವಿಡ್ 19ದಿಂದ ಇತ್ತೀಚೆಗೆ ಬೆಲೆ ಪಾತಾಳ ಸೇರಿದೆ. ಮಾರಾಟಕ್ಕಿಂತ ಉತ್ಪಾದನಾ ವೆಚ್ಚವೇ ಅಧಿಕವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹೊರರಾಜ್ಯಗಳಲ್ಲಿ ಕೋವಿಡ್ 19ದಿಂದ ನೇಕಾರಿಕೆ ಸ್ಥಗಿತಗೊಂಡಿದ್ದು ರಫ್ತಾಗುತ್ತಿದ್ದ 20ಟನ್ ರೇಷ್ಮೆ ನೂಲು ಬಳಕೆಯಾಗುತ್ತಿಲ್ಲ.
ನೂಲು ಬಿಚ್ಚಾಣಿಕೆದಾರರ ಬಳಿ ಹಣ ವಿಲ್ಲದೆ ಒಂದು ಕೆ.ಜಿ.ಗೂಡನ್ನು 100.200 ರೂ. ಗಳಿಗೆ ಮಾರಾಟ ಮಾಡುವ ಅನಿವಾರ್ಯ ಎದುರಾಗಿದೆ. ಹೀಗಾಗಿ ಸರ್ಕಾರ ರೈತರ ಹಿತ ಕಾಯಲು ಕೃಷಿ ತಜ್ಞ ಸ್ವಾಮಿನಾಥನ್ ವರದಿ ಪ್ರಕಾರ ರೇಷ್ಮೆ ಪ್ರತಿ ಕೆ.ಜಿ.ಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಚೀನಾ ರೇಷ್ಮೆ ಆಮದನ್ನು ನಿರ್ಬಂಧಿಸಬೇಕು. ಹೈನೋದ್ಯಮಕ್ಕೆ ಪ್ರೋತ್ಸಾಹ ಧನ ನೀಡಬೇಕು.
ರಾಜ್ಯದ ಪ್ರತಿ ಆಯವ್ಯಯದಲ್ಲಿ 500 ಕೋಟಿ ರೂಗಳ ಅನುದಾನ ನೀಡಬೇಕು. ರೇಷ್ಮೆ ತೋಟಗಳ ನಿರ್ವಹಣೆಗೆ ನರೇಗಾದಲ್ಲಿ ಪ್ರತಿ ಎಕರೆಗೆ 50.ಸಾವಿರ ಕೂಲಿ ಮತ್ತು ಇತರೆ ವೆಚ್ಚ ಸಿಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಜೈರಾಮೇಗೌಡ, ರೀಲರ್ ಅಸೋಷಿಯೇಷನ್ ನಿರ್ದೇಶಕ ಬಸವರಾಜು, ರೇಷ್ಮೆ ಬೆಳೆಗಾರರಾದ ರಾಮ ಕೃಷ್ಣ, ಶಿವಣ್ಣ, ವೆಂಕಟೇಶ್, ಪುಟ್ಟಸ್ವಾಮೇ ಗೌಡ, ರಾಜಣ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?