ಮಾಜಿ ಸಚಿವ ಜಮೀರ್ ವಿರುದ್ಧ ಜೆಡಿಎಸ್ ಕಾರ್ಯಕರ್ತ ಆಕ್ರೋಶ
Team Udayavani, Jun 15, 2021, 5:23 PM IST
ಮಾಗಡಿ: ಮಾಜಿ ಸಚಿವ ಜಮೀರ್ಅಹಮದ್ ಖಾನ್ ಅವರು ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಸದಸ್ಯರು, ಜಮೀರ್ ಭಾವ ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಮುಂಭಾಗ ಯುವ ಘಟಕದ ಸದಸ್ಯರುಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧಇಲ್ಲಸಲ್ಲದ ಹೇಳಿಕೆಯನ್ನು ಮಾಜಿಸಚಿವ ಜಮೀರ್ ನೀಡುವ ಮೂಲಕಅವಮಾನ ಮಾಡಿದ್ದಾರೆ. ನಮ್ಮಪಕ್ಷದಲ್ಲೇ ಬೆಳೆದ ಜಮೀರ್ ಕೂಡಲೇಕ್ಷಮೆ ಯಾಚಿಸಬೇಕು ಎಂದುಆಗ್ರಹಿಸಿದರು.
ಪೊಲೀಸರ ವಿರೋಧ: ಲಾಕ್ಡೌನಸಮಯದಲ್ಲಿ ರಸ್ತೆಯಲ್ಲಿ ಪ್ರತಿಭಟನೆಗೆಅವಕಾಶವಿಲ್ಲ ಯಾವುದೇ ಕಾರಣಕ್ಕೂಪ್ರತಿಭಟನೆ ಮಾಡಲು ಬಿಡಲ್ಲ. ಬೇಕಿದ್ದರೆಜೆಡಿಎಸ್ ಕಚೇರಿ ಎದುರುಮಾಡಿಕೊಳ್ಳಿ. ರಸ್ತೆಯಲ್ಲಿ ಮಾಡಲುಬಿಡಲ್ಲ ಎಂದು ಮಾಗಡಿ ಪಿಎಸ್ಐಶ್ರೀಕಾಂತ್ ಹೇಳಿದರು.ಪ್ರತಿಭಟನೆಕಾರರು 5 ನಿಮಿಷ ಅವಕಾಶ ಕೊಡಿ ಎಂದು ಕೇಳಿದರು,
ಪೊಲೀಸರು ಒಪ್ಪದೆ ಕಳುಹಿಸಿದರು.ಯುವ ಜನತದಳದ ಕಾರ್ಯಧ್ಯಕ್ಷನರಸಿಂಹಮೂರ್ತಿ, ಪುರಸಭಾಉಪಾಧ್ಯಕ್ಷ ರಹಮತ್, ಜೆಡಿಎಸ್ಯುವ ಘಟಕದ ಅಧ್ಯಕ್ಷ ವಿಜಯ್ಕುಮಾರ್, ಉಪಾಧ್ಯಕ್ಷ ಧನುಷ್ ಗೌಡ,ಕಸಬಾ ಹೋಬಳಿ ಅಧ್ಯಕ್ಷ ವಿನೋದ್,ತಿರುಮಲೆ ಅರುಣ್, ಕರ್ಲಮಂಗಲರಮೇಶ್, ನರಸಿಂಹಮೂರ್ತಿ,ನಾಗರಾಜು, ಗಿರೀಶ್, ಶರತ್ಹಾಜರಿದ್ದರು.