ಹರಾಜಿನಲ್ಲಿ ಭಾಗವಹಿಸದೇ ಇರಲು ರೇಷ್ಮೆ ರೀಲರ್ ಗಳ ನಿರ್ಧಾರ: ರೈತರ ಪರದಾಟ
Team Udayavani, May 16, 2020, 9:38 AM IST
ರಾಮನಗರ: ಜಿಲ್ಲೆಯಲ್ಲಿ ಶನಿವಾರ ರೇಷ್ಮೆ ಗೂಡು ಹರಾಜಿನಲ್ಲಿ ಭಾಗವಹಿಸದಿರಲು ರೀಲರ್ ಗಳು ನಿರ್ಧರಿಸಿರುವುದರಿಂದ ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ರೇಷ್ಮ ಗೂಡು ಮಾರುಕಟ್ಟೆಗಳಲ್ಲಿ ಶನಿವಾರ ಹರಾಜು ನಡೆಯುವುದಿಲ್ಲ.
ಲಾಕ್ ಡೌನ್ ನಿಂದಾಗಿ ರೇಷ್ಮೆ ನೂಲು ಮಾರಾಟ ಮಾಡಲಾಗದ ಕಾರಣ ತಮಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ರೇಷ್ಮೆ ಗೂಡು ಖರೀದಿ ಸಾಧ್ಯವಾಗುತ್ತಿಲ್ಲ ಎಂದು ರೀಲರ್ ಗಳು ಸರ್ಕಾರದ ಗಮನ ಸೆಳೆದಿದ್ದರು. ಕೆ.ಎಸ್.ಎಂ.ಬಿ ಮೂಲಕ ಸರ್ಕಾರ ನೂಲು ಖರೀದಿಸುವಂತೆ, ಅಂತರರಾಜ್ಯ ಮಾರಾಟಕ್ಕೆ ಅಗತ್ಯ ನೆರವು ನೀಡುವಂತೆಯು ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಶನಿವಾರ ರಾಜ್ಯಾದ್ಯಂತ ರೇಷ್ಮ ಗೂಡು ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ರೀಲರ್ ಸಂಘ ದ ಅಧ್ಯಕ್ಷ ಮುಹೀಬ್ ತಿಳಿಸಿದ್ದಾರೆ.
ರೇಷ್ಮ ಗೂಡು ಮಾರುಕಟ್ಟೆಗೆ ಗೂಡು ತೆಗೆದು ಕೊಂಡು ಹೋಗಬೇಡಿ ಎಂದು ಪೊಲೀಸರು ರೈತರಿಗೆ ತಾಖಿತು ಮಾಡುತ್ತಿರುವ ಪ್ರಸಂಗಗಳು ವರದಿಯಾಗಿದೆ. ಗೂಡು ಹರಾಜಾಗದೆ, ಮಾರುಕಟ್ಟೆಗಳಲ್ಲಿ ಗೊಂದಲಗಳಿಗೆ ಅವಕಾಶವಾಗಬಾರದು ಎಂಬ ಮುನ್ಬೆಚ್ಚರಿಕೆ ಕ್ರಮ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೂಡನ್ನು ಮಾರುಕಟ್ಟೆಗೆ ತರುವುದು ಬೇಡ ಎಂದು ರೈತರಿಗೆ ಮನವಿ ಮಾಡಲಾಗಿತ್ತು ಎಂದು ರೈತ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ