ಸದೃಢ ಸಮಾಜಕ್ಕೆ ಮಹಿಳೆ ಕೊಡುಗೆ ಅಪಾರ
Team Udayavani, Mar 13, 2021, 12:13 PM IST
ಚನ್ನಪಟ್ಟಣ: ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾ ಜದ ಕೈಗನ್ನಡಿಯಾಗಬೇಕು ಎಂದು ಕೋಡಂಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಜಿ.ಎಂ.ಮಮತಾ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾದಿನಾಚರಣೆ, ಕೌಟುಂಬಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮ ನಾಡು ನಾರಿಯರನ್ನುಪೂಜಿಸುವಂತಹ ನಾಡು. ಆದರೆ, ಇತ್ತೀಚಿನದಿನಗಳಲ್ಲಿ ಪರಸ್ಥಿತಿ ಬದಲಾಗಿರುವುದು ವಿಷಾದನೀಯ. ಪುರುಷ ಪ್ರಧಾನ ಸಮಾಜಕ್ಕೆ ಮಹಿಳೆಯರ ಬಗ್ಗೆ ಇರುವ ಮನೋಬಾವ ಬದಲಾಗಬೇಕು. ಪುರುಷರು ಮಹಿಳೆಯರನ್ನುಪ್ರೋತ್ಸಾಹಿಸಿ ಸಹಕಾರ ನೀಡಿದಲ್ಲಿ ಮಹಿಳೆಯರುಸಾಧನೆಯ ಶಿಖರವೇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾ.ವಿ.ಪ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಭಾರತೀಯ ಮಹಿಳೆ ಇಡೀವಿಶ್ವದಲ್ಲಿಯೇ ಪೂಜನೀಯಳು. ದೇಶ ರಕ್ಷಿಸುವಲ್ಲಿ ವೀರಾಘ್ರಣಿಯಾಗಿ, ಜನಹಿತ ತೋರುವಲ್ಲಿ ಸಮಾಜಸುಧಾರಕಳಾಗಿ, ಮನೆಯ ಹಿತಕೋರುವ ನಾರಿಯಾಗಿ, ಜಗದ ಬೆಳಕಾದ ಹೆಣ್ಣು ಅರ್ಥಪೂರ್ಣ ಬದುಕು ಸಾಗಿಸಿದ್ದಾಳೆ. ಅನ್ಯದೇಶೀಯರದಾಳಿಯಿಂದ ಅಜಾnತ ಬದುಕು ನಡೆಸಿದ ಹೆಣ್ಣು ಸ್ವಾತಂತ್ರ್ಯ ನಂತರ ರಾಷ್ಟ್ರದ ಪ್ರಧಾನಿಯಾಗಿ, ವೈದ್ಯಳಾಗಿ, ಗುರುಮಾತೆಯಾಗಿ, ದೇಶಕಾಯುವ ಸೈನಿಕಳಾಗಿ ರಾಜಕೀಯರಂಗದಲ್ಲಿ ನಾಯಕಿಯಾಗಿ ವಿಜೃಂಭಿಸುತ್ತಿದ್ದಾಳೆ ಎಂದರು.
ಸಾಧಕಿ, ವಿಶೇಷ ಅಗತ್ಯವುಳ್ಳ ಮಹಿಳೆ ಬಿ. ಚಂದ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಶೈಲಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಭಾಗ್ಯ ಚಂದ್ರೇಗೌಡ, ಸಮಾಜ ಸೇವಕಿ ಸೌಭಾಗ್ಯ,ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿ ನಿಲಯದನಿರ್ದೇಶಕಿ ಮಾಲಿನಿ, ರಾಜ್ಯ ಲೆಕ್ಕಪತ್ರ ಇಲಾಖೆನಿವೃತ್ತ ಉಪ ನಿರೀಕ್ಷಕ ಬೈರನಾಯಕನಹಳ್ಳಿ ರಾಮಚಂದ್ರು, ಭಾವಿಪ ಕೋಶಾಧ್ಯಕ್ಷ ಕೆ.ತಿಪ್ರೇಗೌಡ, ಕಾರ್ಯದರ್ಶಿ ಬಿ.ಎನ್.ಕಾಡಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ