ಶಿವಮೊಗ್ಗ: ಪತ್ನಿ ಸೀಮಂತಕ್ಕೆ ಆಹ್ವಾನಿಸಿದ್ದಕ್ಕೆ ಮನೆ ಬಿಟ್ಟು ನಾಪತ್ತೆಯಾದ ಪತಿ!
Team Udayavani, Aug 5, 2022, 6:58 AM IST
ಶಿವಮೊಗ್ಗ: ಪತಿಯನ್ನು ನನ್ನ ಸೀಮಂತ ಕಾರ್ಯಕ್ಕೆ ಬನ್ನಿ ಎಂದು ಕರೆದದ್ದು ಪತ್ನಿ, ಆದರೆ ಅದನ್ನು ತಿರಸ್ಕರಿಸಿದ ಪತಿ ಮನೆಯನ್ನು ಬಿಟ್ಟು ನಾಪತ್ತೆಯಾದ ಘಟನೆ ಆರ್ಎಂಎಲ್ ನಗರದಲ್ಲಿ ಸಂಭವಿಸಿದೆ.
ಆರ್ಎಂಎಲ್ ನಗರದ ಯುವಕ ಗಾರ್ಡನ್ ಏರಿಯಾದ ಯುವತಿಯನ್ನು ಮದುವೆಯಾಗಿದ್ದು, ಪತ್ನಿ ಹೆರಿಗೆಗೆ ತವರು ಮನೆಗೆ ತೆರಳಿದ್ದರು. ಸಂಪ್ರದಾಯದಂತೆ ತವರು ಮನೆಯಲ್ಲಿ ಗರ್ಭಿಣಿಗೆ ಸೀಮಂತ ಶಾಸ್ತ್ರ ನಿಗದಿಯಾಗಿತ್ತು. ಪತ್ನಿಯೇ ಪತಿಗೆ ಕರೆ ಮಾಡಿ ಸೀಮಂತ ಶಾಸ್ತ್ರಕ್ಕೆ ಬನ್ನಿ ಎಂದು ಕರೆದಿದ್ದಳು. ಆದರೆ ಪತ್ನಿಯ ಅಹ್ವಾನವನ್ನು ತಿರಸ್ಕರಿಸಿದ್ದ ಯುವಕ ಅನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯನ್ನೇ ಬಿಟ್ಟು ಹೋಗಿದ್ದಾನೆ.
*****************************************************************************
ಕ್ಷುಲ್ಲಕ ಕಾರಣ: ತಮ್ಮನ ಮೇಲೆ ಗುಂಡೇಟು :
ಶಿವಮೊಗ್ಗ: ಭದ್ರಾವತಿ ತಾಲೂಕಿನ ಸಿದ್ಧರಮಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ನಾಡಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ್ದು, ತೊಡೆಗೆ ಗುಂಡು ತಗಲಿದೆ.
ಸಿದ್ದರಮಟ್ಟಿಯ ಬ್ಲಾಕ್ ಗ್ರಾಮದ ಮುರುಗೇಶ್ (35) ಗಾಯಗೊಂಡವರು. ಆತನ ಅಣ್ಣ ಮುನಿಸ್ವಾಮಿ ಗುಂಡು ಹಾರಿಸಿದವ.
ಜಮೀನಿಗೆ ಹೋಗುವ ಮಾರ್ಗದಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ ಎಂದು ಆರೋಪಿಸಿ ಮುನಿಸ್ವಾಮಿ, ಸಹೋದರ ಮುರುಗೇಶ್ ಅವರ ಪತ್ನಿ ಮತ್ತು ಸಂಬಂಧಿ ಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಸಿಟ್ಟಿಗೆದ್ದ ಮುನಿಸ್ವಾಮಿ ಮನೆಯಲ್ಲಿದ್ದ ನಾಡಬಂದೂಕು ತಂದು ತಮ್ಮನಿಗೇ ಗುಂಡು ಹಾರಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ