ಜನತಾ ಕರ್ಫ್ಯೂ: ಶಿವಮೊಗ್ಗದಲ್ಲಿ ವ್ಯಾಪಕ ಬೆಂಬಲ, ಪ್ರಯಾಣಿಕರ ಪರದಾಟ
Team Udayavani, Mar 22, 2020, 7:07 AM IST
ಶಿವಮೊಗ್ಗ: ಕೋವಿಡ್19 ಭೀತಿಯಿಂದ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಎಲ್ಲಾ ಹೋಟೆಲ್, ಬಾರ್ ಗಳು ಬಂದ್ ಆಗಿವೆ. ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದೆ.
ಬೀದಿ ಬದಿ ವ್ಯಾಪರಸ್ಥರಿಂದಲೂ ಜನತಾ ಕರ್ಫ್ಯೂ ಗೆ ಬೆಂಬಲ ವ್ಯಕ್ತಪಡಿಸಿದ್ದು, ಕೆಲವೆಡೆ ದಿನಬಳಕೆಗೆ ಅಗತ್ಯ ವಸ್ತು ಖರೀದಿಸಿ, ಜನರು ಮನೆಗೆ ವಾಪಾಸ್ ಆಗುತ್ತಿರುವ ಕಂಡುಬರುತ್ತಿದೆ.
ಆದರೆ ತುರ್ತು ಅವಶ್ಯಕತೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
ಜನತಾ ಕರ್ಫ್ಯೂ ಎಫೆಕ್ಟ್ ಗೆ ಪ್ರಯಾಣಿಕರ ಪರದಾಟ.
ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರು ಬಸ್ ಇಲ್ಲದೇ ಪರದಾಟ ನಡೆಸುತ್ತಿರುವ ದೃಶ್ಯವೂ ಕೆಲವೆಡೆ ಕಂಡುಬರುತ್ತಿದೆ. ಆ ಮೂಲಕ ಜನತಾ ಕರ್ಫ್ಯೂ ಮಾಹಿತಿ ಇದ್ದರೂ ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ವ್ಯಕ್ತಿಗಳು ಆಟೋ, ಲಾರಿ, ಟೆಂಪೊ ಹತ್ತಿ ಮನೆಗೆ ಪ್ರಯಾಣಿಸುತ್ತಿದ್ದಾರೆ. ದೂರದ ಊರುಗಳಿಗೆ ತೆರಳಲು ಕೂಡ ಜನರು ಕಷ್ಟ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.