25 ಕೆಜಿ ತೂಕದ ಗೆಣಸು ಬೆಳೆದ ವ್ಯಂಗ್ಯಚಿತ್ರಕಾರ!
Team Udayavani, May 20, 2020, 1:46 PM IST
ಶಿವಮೊಗ್ಗ: ತಾಲೂಕಿನ ಗಾಜನೂರಿನಲ್ಲಿ ಕೃಷಿಕ ಕಮ್ ವ್ಯಂಗ್ಯಚಿತ್ರಕಾರರೊಬ್ಬರು ತಮ್ಮ ಮನೆಯ ಹಿತ್ತಲಲ್ಲಿ ಬರೋಬ್ಬರಿ 25 ಕಿಲೊ ಗ್ರಾಮ್ ತೂಕದ ಬೃಹತ್ ಗಾತ್ರದ ಗೆಣಸೊಂದನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಲ್ಸಖಂಡ ರಾಮಚಂದ್ರ ಭಟ್ ಅವರ ಮಗ ನಾಗೇಂದ್ರ ಯಲ್ಲಾಪುರ ಅವರೇ ಈ ಗೆಣಸು ಬಳೆದು ಅಚ್ಚರಿ ಮೂಡಿಸಿ ಮಹನೀಯರು. ಅವರ ತಂದೆಯವರ ಕಾಲದಲ್ಲಿ ಬೆಳೆಯುತ್ತ ಬಂದಿದ್ದ ಗೆಣಸನ್ನು ಪ್ರತಿವರ್ಷ ಬೆಳೆಸುವ ಕಾಯಕವನ್ನು ಮುಂದುವರೆಸಿದ್ದಾರೆ.
ಇದರ ಮೂಲ ಕೇರಳ, ಮಿತ್ರರೊಬ್ಬರು ತಂದೆ ಯವರಿಗೆ ಕೊಟ್ಟಿದ್ದರು. ನೇಗಿಲು ಗೆಣಸೆಂದು ಕರೆಯುವುದು ವಾಡಿಕೆ. ಕಾರಣ ರೈತರ ನೇಗಿಲಿನಾಕಾರದಲ್ಲಿ ಬೆಳೆಯುವುದರಿಂದ ನೇಗಿಲು ಗೆಣಸೆಂದು ಅನ್ವಥಕ ನಾಮವಾಯಿತು ಎಂದು ಅವರು ವಿವರಿಸುತ್ತಾರೆ. ಬರೋಬ್ಬರಿ ಒಂದೇ ಬುಡದಲ್ಲಿ ಏನಿಲ್ಲವೆಂದರೂ 15 ರಿಂದ 35 ಕೆ.ಜಿ ಗ್ಯಾರಂಟಿ. 6 ತಿಂಗಳ ಬೆಳೆ. 6 ಇಂಚಿನಷ್ಟು ಗಾತ್ರದ ತುಂಡು ನೆಟ್ಟರಾಯ್ತು, ಬೇಲಿಯ ಬದಿಯಲ್ಲಿ, ಮರದ ಬುಡದಲ್ಲಿ, ಎಲ್ಲಾದರೂ ಗುಂಡಿ ಇರುವಲ್ಲಿ ನೆಟ್ಟರಾಯ್ತು. ತನ್ನಿಂದ ತಾನೇ ಬೆಳೆದು ಮರದ ಸುತ್ತಲೂ ಆವರಿಸಿ ತಳ್ಳುತ್ತದೆ. ಬುಡದಲ್ಲಿ ಗಡ್ಡೆಗಳು ಬಳ್ಳಿಯಲ್ಲಿಯೂ ಸಣ್ಣ ಸಣ್ಣ ಮರಿಗೆಣಸುಗಳು, ಅಬ್ಟಾ ನೋಡಲು ಸುಂದರ ತಿನ್ನಲು ರುಚಿ ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ