ಮೈದುಂಬಿದ ತುಂಗೆಗೆ ಸಚಿವ ಈಶ್ವರಪ್ಪ ಬಾಗಿನ
Team Udayavani, Jun 24, 2021, 10:08 PM IST
ಶಿವಮೊಗ್ಗ: ಗಾಜನೂರು ತುಂಗಾ ಜಲಾಶಯದಲ್ಲಿ ಬುಧವಾರ ಮೈದುಂಬಿದ ತುಂಗೆಗೆ ಸಚಿವ ಕೆ.ಎಸ್.ಈಶ್ವರಪ್ಪ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಸಂತಸದಿಂದ ಇದ್ದಾರೆ.
ಕಳೆದ ಮಳೆಗೆ ಗಾಜನೂರು ಜಲಾಶಯ ಮೂರು ಬಾರಿ ತುಂಬಿದೆ. ಇದು ಕುಡಿಯುವ ನೀರಿನ ಪೂರೈಕೆಗೆ ಆಧಾರವಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ನದಿಗಳು ತುಂಬುತ್ತಿದ್ದಂತೆಯೇ ಕೊರೊನಾ ಕೂಡ ಇಳಿಕೆಯಾಗುತ್ತಿದೆ. ಇದು ಸಂತೋಷದ ವಿಷಯ ಎಂದರು. ಹಾಗೆಯೇ, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲು ಅನೇಕ ಕ್ರಮ ಕೈಗೊಂಡಿದೆ.
ದಕ್ಷಿಣ ಭಾರತದಲ್ಲಿ ಲಸಿಕೆ ಹಾಕಿಸುವಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ, ಜಿಲ್ಲೆ ಸುಭಿಕ್ಷವಾಗಿದ್ದು, ಎಲ್ಲಾ ರೀತಿಯ ಸಂಕಷ್ಟ ನಿವಾರಣೆಯಾಗಲಿವೆ ಎಂದರು. ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಅವರು ಮಾತನಾಡಿ, ಶಿವಮೊಗ್ಗ ನಗರದ ಜನರಿಗೆ ಕುಡಿಯುವ ನೀರಿನ ಮೂಲವಾಗಿರುವ ತುಂಗೆ ನಗರದ ಜನರಿಗೆ ಯಾವುದೇ ಹಾನಿ ಮಾಡದಂತೆ, ಅಗತ್ಯಕ್ಕೆ ನೀರುಣಿಸಿ, ದಾಹ ತಣಿಸುವಂತೆ ಪ್ರಾರ್ಥಿಸಿ ಬಾಗಿನ ಅರ್ಪಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಯಲಕ್ಷೀ¾ ಈಶ್ವರಪ್ಪ, ಉಪ ಮೇಯರ್ ಶಂಕರ್ ಗನ್ನಿ ಸೇರಿದಂತೆ ಹಲವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು