ಮುಂದುವರಿದ ಹಿಜಾಬ್ ವಿವಾದ
Team Udayavani, Feb 16, 2022, 2:42 PM IST
ಶಿವಮೊಗ್ಗ: ನ್ಯಾಯಾಲಯದ ಮಧ್ಯಂತರ ಆದೇಶದೊಂದಿಗೆಸೂಕ್ತ ಭದ್ರತೆಯ ನಡುವೆಯೇ ಜಿಲ್ಲೆಯಲ್ಲಿ ಪ್ರೌಢಶಾಲೆಗಳುಆರಂಭಗೊಂಡ ಎರಡನೇ ದಿನವಾದ ಮಂಗಳವಾರ ಕೂಡಶಿವಮೊಗ್ಗ ನಗರದಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ.
ನಗರದ ಸೈನ್ಸ್ ಮೈದಾನದ ಬಳಿ ಇರುವ ಕರ್ನಾಟಕಪಬ್ಲಿಕ್ ಸ್ಕೂಲ್ನಲ್ಲಿ ಮಂಗಳವಾರ ಕೂಡ ಇಬ್ಬರುಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಹಾಜರಾಗಲು ಯತ್ನಿಸಿದರು. ಆದರೆ ಹಿಜಾಬ್ ಧರಿಸಿಯೇಪರೀಕ್ಷೆ ಬರೆಯಲು ಕೊಠಡಿಗೆ ಅವಕಾಶ ನೀಡುವುದಿಲ್ಲಎಂದು ಶಾಲಾ ಸಿಬ್ಬಂದಿ ಹೇಳಿದಾಗ, ಇಬ್ಬರೂ ವಿದ್ಯಾರ್ಥಿನಿಯರುಪರೀಕ್ಷೆ ಬರೆಯದೆ ಮನೆಗೆ ವಾಪಸ್ ಆದರು. ಒಂದುಹಂತದಲ್ಲಿ ಹಿಜಾಬ್ ಧರಿಸಿಯೇ ತಾವು ಪರೀಕ್ಷೆ ಬರೆಯಲುಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.
ಅದಕ್ಕೂಅವಕಾಶ ನೀಡದಿದ್ದಾಗ ಪರೀಕ್ಷೆ ಬರೆಯದಿದ್ದರೂ ಪರವಾಗಿಲ್ಲ,ತಮಗೆ ಧರ್ಮವೇ ಮುಖ್ಯವೆಂದು ವಾದಿಸಿದ ಘಟನೆನಡೆಯಿತು.ಪ್ರೌಢಶಾಲೆಗಳು ಆರಂಭವಾದ ಎರಡನೇ ದಿನವಾದಮಂಗಳವಾರ ಕೂಡ ನಗರದ ಸೈನ್ಸ್ ಮೈದಾನದ ಬಳಿ ಇರುವಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಎಸ್ ಎಸ್ ಎಲ್ ಸಿ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿತ್ತು. ಬೆಳಗ್ಗೆ ಅಲ್ಲಿ ಪರೀಕ್ಷೆಆರಂಭವಾಗುತ್ತಿದ್ದಂತೆ ಹಿಜಾಬ್ ಧರಿಸಿ ಬಂದಿದ್ದ ಇಬ್ಬರುವಿದ್ಯಾರ್ಥಿನಿಯರನ್ನು ಶಾಲೆ ಪ್ರವೇಶದ ಸಂದರ್ಭದಲ್ಲಿಶಿಕ್ಷಕರು ತಡೆದರು.
ಹಿಜಾಬ್ ತೆಗೆದು ಪರೀಕ್ಷೆಗೆ ಕೂರಲುತಿಳಿಸಿದಾಗ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದರು. ಪರೀಕ್ಷೆಬರೆಯದಿದ್ದರೂ ಪರವಾಗಿಲ್ಲ, ನಾವು ಹಿಜಾಬ್ ತೆಗೆಯುವುದೇಇಲ್ಲ ಎಂದು ವಿದ್ಯಾರ್ಥಿನಿಯರು-ಶಿಕ್ಷಕರ ನಡುವೆ ವಾದ-ವಿವಾದ ನಡೆಯಿತು. ಇಷ್ಟಾಗಿಯೂ ಶಾಲಾ ಸಿಬ್ಬಂದಿಅವಕಾಶ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದಾಗ,ಅವರಿಬ್ಬರೂ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ