ಕೆಎಫ್ಡಿ ಬಾಧಿತ ಪ್ರದೇಶಕ್ಕೆ ಸ್ವದೇಶಿ ಕೀಟ ನಿವಾರಕ
Team Udayavani, Mar 3, 2022, 5:14 PM IST
ಶಿವಮೊಗ್ಗ: ಕೆಎಫ್ಡಿ ಬಾಧಿ ತ ಗ್ರಾಮದಜನರಿಗೆ ನೀಡುತ್ತಿದ್ದ ಡಿಎಂಪಿ ಆಯಿಲ್(ಕೀಟ ನಿವಾರಕ) ಕಮಟು ವಾಸನೆ, ಅಂಟು,ಶಕ್ತಿ ಕಡಿಮೆ ಕಾರಣಕ್ಕೆ ಜನರ ಬಳಕೆಯಿಂದದೂರವಿತ್ತು. ಇದಕ್ಕೆ ಪರಿಹಾರವಾಗಿಸರ್ಕಾರ ಈಗ ಸ್ವದೇಶಿ ಮಂತ್ರ ಜಪಿಸಿದೆ.ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಸೈನಿಕರುಬಳಸುತ್ತಿರುವ ಡಿಇಪಿಎ ಮಲೆನಾಡಿನಜನರಿಗೆ ಹತ್ತಿರವಾಗುವುದರಲ್ಲಿಅನುಮಾನವಿಲ್ಲ.
60 ವರ್ಷಗಳಿಂದ ಮಲೆನಾಡುಸೇರಿ 11 ಜಿಲ್ಲೆಗಳ 3 ಲಕ್ಷ ಜನರಿಗೆಬಾ ಧಿಸುತ್ತಿರುವ ಕೆಎಫ್ಡಿ (ಕ್ಯಾಸನೂರುಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಸರ್ಕಾರಅನೇಕ ಉಪಕ್ರಮಗಳನ್ನು ಕೈಗೊಂಡಿದೆ.ಈ ಕಾಯಿಲೆ ಹರಡಲು ಮಂಗನ ಪಾತ್ರಇಲ್ಲದಿದ್ದರೂ ಮಂಗನ ಕಾಯಿಲೆ ಎಂದುಕುಖ್ಯಾತಿಯಾಗಿತ್ತು. ನಿಜವಾಗಿಯೂವೈರಸ್ಗಳು ಮನುಷ್ಯನಿಗೆ ಹರಡುತ್ತಿದ್ದದ್ದುಉಣುಗುಗಳಿಂದ.
ವೈರಸ್ ಬಾ ಧಿತಉಣುಗುಗಳು ಮನುಷ್ಯನಿಗೆ ಅಥವಾಮಂಗನಿಗೆ ಕಚ್ಚಿದರೆ ಕೆಎಫ್ಡಿ ಸೋಂಕುಲಕ್ಷಣಗಳು ಕಾಣಿಸಿಕೊಳ್ಳುತಿತ್ತು.ಕಾಡಂಚಿನ ಜನರು ನಿತ್ಯ ಕಾಡಿಗೆದನಕರು, ಸೌದೆಗೆ ಇತರೆ ಚಟುವಟಿಕೆಗಳಿಗೆಹೋಗಿ ಬರುತ್ತಿದ್ದರಿಂದ ಉಣುಗುಗಳುದನಕರು, ಬಟ್ಟೆ ಮೇಲೆ ಬರುವ ಸಾಧ್ಯತೆಇತ್ತು. ಉಣುಗುಗಳು ಮನುಷ್ಯನಿಗೆಕಚ್ಚುವುದನ್ನು ನಿಯಂತ್ರಿಸಲುಮನುಷ್ಯನಿಗೆ ಹಾನಿಕಾರಕವಲ್ಲದ ಕೀಟನಿವಾರಕಗಳನ್ನು ಬಳಸಲುಆರಂಭಿಸಲಾಯಿತು. ದಶಕದ ಹಿಂದೆಮೊದಲು ಮೈಲೋಲ್ ಸೊಳ್ಳೆ ನಿವಾರಕಆಯಿಲ್ ವಿತರಣೆ ಮಾಡಲಾಯಿತು.
ಇದು ಹೆಚ್ಚು ಉಪಯೋಗಕಾರಿ ಅಲ್ಲದಕಾರಣ ಡಿಎಂಪಿ ಬಳಕೆಗೆ ಬಂತು.ಡಿಎಂಪಿ ಕೂಡ ವಾಸನೆ, ಹೆಚ್ಚು ಸಮಯಹೋರಾಡದ ಕಾರಣ ನಿರ್ಲಕ್ಷಿಸಲಾಯಿತು.ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಎರಡು ಬಾಟಲ್ ಡಿಎಂಪಿಆಯಿಲ್ ಕೊಟ್ಟರೂ ಬಳಸುತ್ತಿರಲಿಲ್ಲ.ಇದಕ್ಕೆ ಪರಿಹಾರವಾಗಿ ಸ್ವದೇಶಿಮಂತ್ರದ ಅಡಿ ದೇಶದ ಪ್ರತಿಷ್ಠಿತ ಸಂಸ್ಥೆಡಿಆರ್ಡಿಒ ಅಭಿವೃದ್ಧಿಪಡಿಸಿರುವ ಡಿಇಪಿಎಬಳಸಲು ಸಿದ್ಧತೆ ನಡೆಸಲಾಗಿದೆ.ಈಗಾಗಲೇ ಟೆಂಡರ್ ಪ್ರಕ್ರಿಯೆಮುಗಿದಿದ್ದು ಈಗಿರುವ ಡಿಎಂಪಿ ಆಯಿಲ್ಸ್ಟಾಕ್ ಖಾಲಿಯಾದ ನಂತರ ಬಳಕೆಗೆಸಿಗಲಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ