ಆಣೆ ಮಾಡಿದ್ರೆ ಹಣ ಫಿಕ್ಸ್: ರಾಜಕೀಯದ ಹೊಸ ರಣತಂತ್ರ
Team Udayavani, Sep 1, 2021, 3:50 PM IST
ಶಿವಮೊಗ್ಗ: ಮಕ್ಕಳ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ನಿಮ್ಮ ಪಕ್ಷಕ್ಕೆ ವೋಟ್ ಮಾಡುವುದಾಗಿ ತಿಳಿಸಿದರೆ ಪ್ರತಿವೋಟ್ಗೆ 1 ಸಾವಿರ, ಮನೆಗೆ 2 ಸಾವಿರ ಫಿಕ್ಸ್. ಇದು ಭದ್ರಾವತಿ ನಗರಸಭೆ 29ನೇವಾರ್ಡ್ ಉಪ ಚುನಾವಣೆಯಲ್ಲಿ ಕೇಳಿ ಬಂದ ಆರೋಪ.
ಗೆಲ್ಲಲೇಬೇಕೆಂಬ ಹಟ ತೊಟ್ಟಿರುವ ವಿವಿಧ ಪಕ್ಷಗಳ ಮುಖಂಡರು ದುಡ್ಡಿನ ಹೊಳೆಯನ್ನೇ ಹರಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಮುಖಂಡರು ಮಾತ್ರ ಹಣ ಕೊಡುತ್ತಿರುವುದು ಅಷ್ಟೇ ಅಲ್ಲದೇ ಆಣೆ ಮಾಡಿಸಿಕೊಂಡು ಮತ ಭದ್ರ ಮಾಡಿಕೊಳ್ಳುತ್ತಿದ್ದಾರೆ.
ಹಣ ಪಡೆದು ಬೇರೆ ಪಕ್ಷಕ್ಕೆ ಮತ ಹಾಕಬಹುದು. ಅದಕ್ಕಾಗಿ ಆಣೆ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಅಲ್ಲಲ್ಲಿ ಕೇಳಿ ಬರುತ್ತಿದೆ. ಕೆಲವರು ಈ ನಡೆಗೆ ಛೀಮಾರಿ ಹಾಕಿರುವ ಪ್ರಸಂಗ ಕೂಡ ನಡೆದಿದೆ. ಕೆಲವರು ಹಣ ಪಡೆದು ಆಣೆ ಮಾಡಿದ್ದಾರೆ.
ಇದನ್ನೂ ಓದಿ:ರಾಸಾಯನಿಕ ಗೊಬ್ಬರದಲ್ಲಿ ಕಲ್ಲು!
ಕೆಲ ಮುಖಂಡರು ಎಲೆ ಅಡಿಕೆ, ಅರಿಶಿನ ಕುಂಕುಮ, ರವಿಕೆಬಟ್ಟೆ ನೀಡಿ ಹಣ ಕೊಟ್ಟು ಆಣೆ ಸಹ ಮಾಡಿಸಿಕೊಂಡಿರುವುದಾಗಿ ಸುದ್ದಿಗಳು ಕೇಳಿಬರುತ್ತಿವೆ. ಏನೇ ಆದರೂ ವಾರ್ಡ್ ಚುನಾವಣೆ ಈ ಮಟ್ಟಕ್ಕೆ ಹೈವೋಲ್ಟೇಜ್ ಕಣವಾಗಿರುವುದು ಕುತೂಹಲ ಮಾಡಿಸಿದೆ.
ಆಣೆ ಒಂದೆಡೆಯಾದರೆ ಕುಡುಕರ ಹಾವಳಿ ವಿಪರೀತವಾಗಿದೆ. ಎಣ್ಣೆಗಾಗಿಯೇ ಗಂಟೆ ಗಂಟೆಗೆ ಪಕ್ಷ ಬದಲಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಮದ್ಯ ಪಡೆದು ಜೈಕಾರ ಹಾಕಿ, ಬೇರೆ ಕಡೆಯೋ ಹೋಗಿ ಮದ್ಯ ಪಡೆದು ಜೈಕಾರ ಹಾಕುತ್ತಿದ್ದಾರೆ.ಇದು ಸ್ಪರ್ಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮದ್ಯಕ್ಕಾಗಿ ಗಂಟೆಗೊಂದು ವೇಷ ನೋಡಿ ಹಲವರು ದಂಗಾಗಿ ಹೋಗಿದ್ದಾರೆ. ಕೆಲವರು ಸ್ವಲ್ಪ ಮದ್ಯ ಸೇವಿಸಿ ಮತ್ತೊಂದು ಪಾಕೆಟ್ ಪಡೆದು ಜೇಬಿಗೆ ಇಳಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹಲವು ಪ್ರಯೋಗ ನಡೆಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಅವಧಿ ಒಂದು ವಾರಕ್ಕೆ ಸೀಮಿತ ಮಾಡುವುದು ಒಳ್ಳೆಯದು ಎಂಬುದು ಹಲವರ ಒತ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ