ಜೈನ ಸಮುದಾಯ ಭವನ ಉದ್ಘಾಟನೆ
Team Udayavani, Nov 10, 2019, 1:36 PM IST
ಶಿವಮೊಗ್ಗ: ದಾನವು ಆದಾಯ ಮತ್ತು ಮೋಕ್ಷಕ್ಕೆ ಮೂಲವಾಗಿದ್ದು ಎರಡೂ ಕೈಯಿಂದ ಸಂಪಾದಿಸಿದರೆ ನಾಲ್ಕು ಕೈಯಿಂದ ದಾನ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಸವಳಂಗ ರಸ್ತೆಯ ಮಹಾವೀರ ನಗರದಲ್ಲಿ ಭಗವಾನ್ ಶ್ರೀ 1008 ಆದಿನಾಥ ಸ್ವಾಮಿ ದಿಗಂಬರ ಜೈನ ಮಂದಿರದ ಬಳಿ ನೂತನವಾಗಿ ನಿರ್ಮಿಸಿದ ಹೋಂಬುಜ ಶ್ರೀ ಪದ್ಮಾವತಿ ಜೈನ ಸಮುದಾಯ ಭವನ ಹಾಗೂ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಸಮಾಜ ಸಣ್ಣದಾದರೂ ಹೃದಯ ವೈಶಾಲ್ಯತೆ ಇರುವ ಸಮಾಜವಾಗಿದೆ. ಬಡತನ, ಸಿರಿತನ ಎಂಬುದು ರೂಪ ಮತ್ತು ಪ್ರದರ್ಶನದಲ್ಲಿಲ್ಲ. ಪ್ರತಿಯೊಬ್ಬರ ಭಾವನೆಗಳನ್ನು ದೇವರು ಗೌರವಿಸುತ್ತಾನೆ. ಮನುಷ್ಯರ ಆಂತರಿಕ ದರ್ಶನ ಮತ್ತು ಜ್ಞಾನ ಶುದ್ಧವಾಗಿರಬೇಕು. ಭೋಗ ಮತ್ತು ತ್ಯಾಗಕ್ಕೆ ಮಾನವ ಜೀವನ ಹೆಸರುವಾಸಿಯಾಗಿದೆ. ಸುಖದ ಕಲ್ಪನೆ ಎಂಬುದು ಮುಂದೆ ಕಷ್ಟಬರುವುದರ ಸೂಚನೆಯಾಗಿದ್ದು ಎಚ್ಚರಿಕೆಯಿಂದಿರಬೇಕು. ಸಮಾಜದ ಉತ್ತಮ ಸಾಮಾಜಿಕ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜೈನ ಸಮಾಜ ವೈಚಾರಿಕ ಚಿಂತನೆಯುಳ್ಳಸಮಾಜವಾಗಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ತ್ಯಾಗ ಮತ್ತು ದಾನ- ಧರ್ಮಗಳಿಗೆ ಹೆಸರುವಾಸಿಯಾದ ಸಮಾಜವಾಗಿದೆ. ಸಣ್ಣ ಸಮಾಜ ಎಂದು ಹಿಂಜರಿಕೆ ಮಾಡದೆ ಉತ್ತಮ ಕಾರ್ಯಗಳನ್ನು ಮುಂದುವರಿಸಿ ಜೈನ ಸಮಾಜದ ವಿದ್ಯಾರ್ಥಿಗಳಿಗೆ 2 ಹಾಸ್ಟೆಲ್ಗಳ ಕಟ್ಟಡ ನಿರ್ಮಾಣಕ್ಕೆ ಸಹಕಾರ ಹಾಗೂ ಅನುದಾನದ ಭರವಸೆ ನೀಡಿದರು. ದಿಗಂಬರ ಜೈನಸಂಘದ ಅಧ್ಯಕ್ಷ ಎ.ಪಿ. ಪದ್ಮರಾಜು ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್