15 ದಿನ ದಲಿತರು ಬ್ರಾಹ್ಮಣರಾಗಿ ಪೂಜೆ ಮಾಡುತ್ತಾರೆ!

ಇಂದಿನಿಂದ ಉಜ್ಜಲಿ ಚೌಡೇಶ್ವರಿ ಮಹೋತ್ಸವ 15 ದಿನ ವಿಶೇಷ ಪೂಜೆ; ಸಂಪ್ರದಾಯ ಪಾಲಿಸುತ್ತಿರುವ 15 ಹಳ್ಳಿಗರು

Team Udayavani, Apr 23, 2019, 6:18 PM IST

tumkur-3
15 ದಿನ ದಲಿತರು ಬ್ರಾಹ್ಮಣರಾಗಿ ಪೂಜೆ ಮಾಡುತ್ತಾರೆ!
ವಿಶೇಷ ಪೂಜೆಯಲ್ಲಿ ದಲಿತ ಬ್ರಾಹ್ಮಣರು.

ಕೆ.ಎನ್‌.ಲೋಕೇಶ್‌

ಕುಣಿಗಲ್: ಹಬ್ಬ ಆಚರಣೆ ಮೂಲಕ ಐಕ್ಯತೆ ಮತ್ತು ಸಾಮರಸ್ಯಕ್ಕೆ ಈ ಊರು ರಾಜ್ಯಕ್ಕೆ ಮಾದರಿ. ಈ ಊರಿನ ಹಬ್ಬವೇ ವಿಶಿಷ್ಟ. ಅದೆಷ್ಟೋ ದೇವಸ್ಥಾನ ಗಳಲ್ಲಿ ಹರಿಜನರಿಗೆ ಪ್ರವೇಶವೇ ಇಲ್ಲದಿರುವ ಇಂದಿನ ಸಂದರ್ಭಗಳಲ್ಲೂ ಹರಿಜನರು ಜನಿವಾರ ಧರಿಸಿ ಪೂಜೆ ಮಾಡುವ ಮೂಲಕ ಹಬ್ಬದ ಕೇಂದ್ರ ಬಿಂದುವಾಗುತ್ತಾರೆ ಎಂದರೆ ನಂಬಲೇ ಬೇಕು.

ಇಂತಹ ವಿನೂತನ ಆಚರಣೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ನಡೆಯುತ್ತದೆ. ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನ ಹಬ್ಬ ಸುತ್ತಮುತ್ತಲ 15 ಹಳ್ಳಿಗಳಲ್ಲಿ ಪ್ರತಿ ವರ್ಷ ನಡೆಯತ್ತದೆ.

ವಿಶಿಷ್ಠ ಜಾತ್ರೆ:ಅಗ್ನಿಕೊಂಡ ಹಾಯುವ ಹೆಬ್ಟಾರೆ ಗುಡ್ಡರು ಎಂದು ಕರೆಸಿಕೊಳ್ಳುವ 6 ಮಂದಿ ಹರಿಜನರು ಜನಿವಾರ ತೊಟ್ಟು ಪೂಜೆಯಲ್ಲಿ ತೊಡಗುತ್ತಾರೆ. ಹಬ್ಬ ಮುಗಿಯವರೆಗೂ ಊರಿನಲ್ಲಿ ಸಂಬಾರಿಗೆ ಒಗ್ಗರಣೆ ಹಾಕುವಂತಿಲ್ಲ. ಕಂಟು ಮಾಡುವಂತಿಲ್ಲ. ಹಬ್ಬಕ್ಕೆ ಕಂಬ ನೆಟ್ಟ ದಿನದಿಂದ ಊರಿನಲ್ಲಿ ಯಾರೂ ಕಂಟು ಹಾಕುವಂತಿಲ್ಲ. ಮೆಣಸಿನಕಾಯಿ ಸುಡುವಂತಿಲ್ಲ. ಇದು ಊರಿನ ಕಟ್ಟುನಿಟ್ಟಿನ ಸಂಪ್ರದಾಯ. ಸುತ್ತ-ಮುತ್ತಲ ಹತ್ತಾರು ಗ್ರಾಮಗಳು ಸೇರಿ ಆಚರಿಸುವ ಈ ಚಾಡೇಶ್ವರಿ ಜಾತ್ರೆಗೆ 850 ಹೆಚ್ಚು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ.

ಕಠಿಣ ನಿಯಮ:ಜನಿವಾರ ಧರಿಸಿದವರು ಮನೆಗೆ ಹೋಗು ವಂತಿಲ್ಲ. ದೇವಸ್ಥಾನದ ಕೋಣೆಯೊಂ ದರಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಯಾವುದೇ ಕಾರಣಕ್ಕೂ ‘ಮೈಲಿಗೆ’ ಆಗುವಂತಿಲ್ಲ. ಹಬ್ಬದಲ್ಲಿ ಪೂಜೆ, ಪುನಸ್ಕಾರ ಎಲ್ಲವೂ ಇವರದ್ದೇ.

ಆಚರಣೆ: ಪ್ರತಿ ವರ್ಷ 15 ದಿನ ಚೌಡೇಶ್ವರಿ ಹಬ್ಬ ನಡೆಯುತ್ತದೆ. ಹಬ್ಬಕ್ಕೆಂದೇ ಮುಂಚಿತವಾಗಿ ಕಂಭ ಹಾಕಲಾಗುತ್ತದೆ. ಕಂಭ ಹಾಕಿದ ದಿನದಿಂದಲೇ ಹೆಬ್ಟಾರೆ ಅಮ್ಮನ ಕರಗ ಹೊರುವ ಸಲುವಾಗಿ ‘ಹೆಬ್ಟಾರೆ ಗುಡ್ಡರು’ ಎಂದು ಕರೆಸಿಕೊಳ್ಳುವ ಆರು ಮಂದಿ ಹರಿಜನರು ಬಿಳಿ ಕಚ್ಚೆ ಧರಿಸಿ ಚೌಡಮ್ಮನ ಪೂಜಾರಿಯಿಂದ ಹೋಮ ಮಾಡಿದ ತೀರ್ಥ ಸ್ವೀಕರಿಸಿ ಜನಿವಾರ ಧರಿಸುತ್ತಾರೆ. ಆ ದಿನದಿಂದಲೇ ಅವರು ಬ್ರಾಹ್ಮಣರಾಗುತ್ತಾರೆ.

ಜಾತ್ರೆ ಶುರು:ಏ.22 ರಿಂದ 26 ವರೆಗೆ ನಡೆಯುವ ವಿಜೃಂಭಣೆ ಜಾತ್ರೆ ಕಳೆಗಟ್ಟುವುದು ಈ ಬ್ರಾಹ್ಮಣರಿಂದ. ಏ.23 ರಂದು ಅಗ್ನಿಕೊಂಡ ನಡೆಯಲಿದೆ.

ಕಾರಣವಿದು: ಈ ಹಿಂದೆ, ಅದೇ ಗ್ರಾಮದ ಹರಿಜನ ಯುವಕನೊಬ್ಬ ತಾನು ಬ್ರಾಹ್ಮಣ ಜಾತಿಯವನು ಎಂದು ಹೇಳಿ ಬ್ರಾಹ್ಮಣ ಕನ್ಯೆಯನ್ನು ಮದುವೆ ಯಾಗಿದ್ದನಂತೆ. ಆ ದಂಪತಿಗಳಿಗೆ ಐವರು ಗಂಡು ಮಕ್ಕಳು ಇದ್ದರೆಂದೂ, ನಂತರ ಗಂಡನ ಜಾತಿ ತಿಳಿದು ಆಕೆ ಅಗ್ನಿಪ್ರವೇಶ ಮಾಡಿದಳಂತೆ ಎಂಬ ಪ್ರತೀತಿ ಇದೆ. ಇದರಿಂದ ಆಕೆಯನ್ನು ಸಂತೈಸಲಿಕ್ಕಾಗಿ ಐವರು ಮಕ್ಕಳು,ತಂದೆ ಸೇರಿ 6ಮಂದಿ ಪ್ರತೀ ವರ್ಷ ಹಬ್ಬದ ವೇಳೆ 15 ದಿನಗಳ ಮಟ್ಟಿಗೆ ಬ್ರಾಹ್ಮಣರಾ ಗುತ್ತಾರೆ. ಪೂಜೆ ಸಲ್ಲಿಸುತ್ತಾರೆ ಎಂಬ ಪ್ರತೀತಿ ಇದೆ.

ಹರಿಕೆ ಹೊತ್ತ ಮಹಿಳೆಯರು ಬಾಯಿಬೀಗ ಚುಚ್ಚಿಸಿಕೊಂಡು ದೇವಿಗೆ ಭಕ್ತಿ ಮೆರೆಯುತ್ತಾರೆ. ಚೌಡೇಶ್ವರಿ ದೇವಿ ಕಂಭ ಹಾಕುವ ದಿನ ಬೆಳ್ಳಿ ಕಂಕಣ ತೊಡುವ ಪೂಜಾರಿ ಹಬ್ಬ ಮುಗಿಯುವವರೆಗೂ ಮನೆಯಲ್ಲಿ ಊಟ ಮಾಡುವಂತಿಲ್ಲ. ಆತನೇ ಅಡುಗೆ ತಯಾರಿಸಿಕೊಳ್ಳಬೇಕು. ಅಗ್ನಿಕೊಂಡದ ದಿನ ಉಜ್ಜನಿ ಗ್ರಾಮದಲ್ಲಿ ಜನಸಾಗರವೇ ನೆರೆಯು ತ್ತದೆ. ಏ.24 ರಂದು ಚೌಡೇಶ್ವರಿ ತೇರು, 25 ಮುತ್ತಿನ ಪಲ್ಲಕ್ಕಿ, 26 ಪುಷ್ಪಾಲಂಕಾರ ಉತ್ಸವ ನಡೆಯಲಿದೆ.

ಅಗ್ನಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊಂಡ ಹಾಯುವ ಭಕ್ತಾದಿಗಳಿಗೆ ಷರತ್ತು ವಿಧಿಸಿದೆ. ಹೆಸರು ನೋಂದಣಿ ಮಾಡಿಸಿಕೊಳ್ಳುವುದು, ಮಕ್ಕಳು-ಮಹಿಳೆಯರು ಕೊಂಡ ಹಾಯುವುದನ್ನು ಈ ಬಾರಿ ನಿಷೇಧಿಸಿದೆ

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.