ನೌಕರರ ಸಂಘದ ಚುನಾವಣೆ ಶಾಂತಿಯುತ
ತಾಲೂಕು ಕೇಂದ್ರಗಳಲ್ಲೂ ಮತದಾನ • ಫಲಿತಾಂಶ ಪ್ರಕಟ •ಜಿಲ್ಲಾ ಶಾಖೆಯ 63 ಸ್ಥಾನಗಳಿಗೆ ಎಲೆಕ್ಷನ್
Team Udayavani, Jun 14, 2019, 10:41 AM IST
ತುಮಕೂರು ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಸಮೀಪ ವಿರುವ ಹಳೇ ಎಂಪ್ರಸ್ ಶಾಲೆಯಲ್ಲಿ ಸರಕಾರಿ ನೌಕರರ ಸಂಘದ ಚುನಾವಣೆ ಯಲ್ಲಿ ಮಹಿಳಾ ನೌಕರರು ಮತದಾನ ಮಾಡಲು ಸಾಲುಗಟ್ಟಿ ನಿಂತಿರುವುದು.
ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಒಟ್ಟು 63 ಸ್ಥಾನಕ್ಕೆ ಗುರುವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವೆರಗೂ ಚುನಾವಣೆ ಶಾಂತಿಯುತವಾಗಿ ನಡೆದು ಫಲಿತಾಂಶ ಹೊರಬಿದ್ದಿದೆ.
ನಗರದ ಗುಂಚಿವೃತ್ತದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ಆಯಾ ತಾಲೂಕು ಕೇಂದ್ರಗಳಲ್ಲೂ ಚುನಾವಣೆ ಶಾಂತಿ ಯುತವಾಗಿ ನಡೆಯಿತು.
ಪ್ರಾಥಮಿಕ ಶಿಕ್ಷಕರ ವಿಭಾಗಕ್ಕೆ ಸಂಬಂಧಿಸಿದ 4 ಸ್ಥಾನಕ್ಕೆ 12, ಯುವಜನ ಸೇವೆ ಮತ್ತು ಸಾರ್ವ ಜನಿಕ ಗ್ರಂಥಾಲಯ ಇಲಾಖೆಯ 1 ಸ್ಥಾನಕ್ಕೆ 2 ಮಂದಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 3 ಸ್ಥಾನಕ್ಕೆ 5, ಪ್ರೌಢ ಶಾಲಾ ಶಿಕ್ಷಕರ ವಿಭಾಗಕ್ಕೆ ಸಂಬಂಧಿಸಿದ 2 ಸ್ಥಾನಕ್ಕೆ 6, ವಾಣಿಜ್ಯ ಮತ್ತು ತೆರಿಗೆ ಇಲಾಖೆಯ 2 ಸ್ಥಾನಕ್ಕೆ 5 ಮಂದಿ, ಕಂದಾಯ ಇಲಾಖೆಯ 3 ಸ್ಥಾನಕ್ಕೆ 4 ಮಂದಿ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಎಂಜಿನಿ ಯರಿಂಗ್ ಇಲಾಖೆಯ 2 ಸ್ಥಾನಕ್ಕೆ 3 ಮಂದಿ ಸ್ಪರ್ಧಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ 1 ಸ್ಥಾನಕ್ಕೆ 2, ಸರಕಾರಿ ಕಿರಿಯ ಕಾಲೇಜು ವಿಭಾಗಕ್ಕೆ ನಿಗದಿ ಯಾದ 1 ಸ್ಥಾನಕ್ಕೆ 2 ಮಂದಿ, ಅಬಕಾರಿ ಇಲಾಖೆ 1 ಸ್ಥಾನಕ್ಕೆ 2 ಮಂದಿ, ಭೂಮಾಪನಾ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆಯ ವಿಭಾಗಕ್ಕೆ ನಿಗದಿಯಾದ 1 ಸ್ಥಾನಕ್ಕೆ 4 ಮಂದಿ, ರೇಷ್ಮೆ ಇಲಾಖೆ ವಿಭಾಗಕ್ಕೆ ನಿಗದಿಯಾದ 1 ಸ್ಥಾನಕ್ಕೆ 2 ಮಂದಿ, ನ್ಯಾಯಾಂಗ ಇಲಾಖೆಗೆ ನಿಗದಿಯಾದ 2 ಸ್ಥಾನಕ್ಕೆ 5 ಮಂದಿ, ಡಿಡಿಪಿಐ, ಬಿಇಒ ಕಚೇರಿ, ಡಯಟ್, ಎಸ್ಎಸ್ಎ ಹಾಗೂ ಆರ್.ಎಂ.ಎಸ್.ಎ ಯೋಜನೆಯಡಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಗೆ ನಿಗದಿಯಾದ 1 ಸ್ಥಾನಕ್ಕೆ 3 ಮಂದಿ ಕಣದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು