ಎಲ್ಕೆಜಿಗೆ ಲಾಟರಿ ಎತ್ತಿ ಮಕ್ಕಳ ಆಯ್ಕೆ
ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಶಾಲೆಗೆ ಪೋಷಕರ ದಂಡು • ಆಯ್ಕೆಯಾಗದವರಿಗೆ ನಿರಾಸೆ, ಆಕ್ರೋಶ
Team Udayavani, Jun 7, 2019, 8:25 AM IST
ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಲ್ಕೆಜಿಯ 30 ಸೀಟುಗಳಿಗೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಯಿತು.
ಹುಳಿಯಾರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಎಲ್ಕೆಜಿಗೆ ಲಾಟರಿ ಎತ್ತುವ ಮೂಲಕ ಮಕ್ಕಳ ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಖುಷಿ ಪಟ್ಟರೆ, ಆಯ್ಕೆಯಾಗದವರು ನಿರಾಸೆಯಿಂದ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತ ಹಿಂದಿರು ಗುವಂತಾಯಿತು.ಹುಳಿಯಾರಿನಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸರ್ಕಾರಿ ಎಲ್ಕೆಜಿಗೆ ಮಕ್ಕಳನ್ನು ಸೇರಿಸಲು ಪೋಷಕರು ನೂಕು ನುಗ್ಗಲಿ ನಲ್ಲಿ ಅರ್ಜಿ ಪಡೆದು, ಸಲ್ಲಿಸಿದ್ದರು. 30 ಸೇಟಿಗೆ ಬರೋಬ್ಬರಿ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ನಿರೀಕ್ಷೆಗಿಂತ ಹೆಚ್ಚು ಅರ್ಜಿಗಳು ಬಂದಿದ್ದರಿಂದ ಸರ್ಕಾರ ನಿಯಮದಂತೆ ಪೋಷಕರಿಂದಲೇ ಲಾಟರಿ ಮೂಲಕ ಮಕ್ಕಳ ಆಯ್ಕೆ ಮಾಡಲಾಯಿತು.
ಮತ್ತೂಂದು ವಿಭಾಗ ತೆರೆಯಿರಿ: ಆಯ್ಕೆಯಾಗದ ಪೋಷಕರು ಮತ್ತೂಂದು ವಿಭಾಗ ತೆರೆದು ನಮ್ಮ ಮಕ್ಕಳಿಗೂ ಪ್ರವೇಶ ಕೊಡಿ ಎಂದು ಪ್ರಾಚಾರ್ಯ ಪ್ರಸನ್ನ ಕುಮಾರ್ ಅವರನ್ನು ಒತ್ತಾಯಿಸಿದರು. ಸರ್ಕಾರಿ ಆದೇಶದಂತೆ 30 ಮಂದಿಗೆ ಮಾತ್ರ ದಾಖ ಲಾತಿಗೆ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಅಭಿಪ್ರಾಯ ದಂತೆ ಎಲ್ಲ ಮಕ್ಕಳ ದಾಖಲಾತಿಗೆ ಅವಕಾಶ ಮಾಡಿ ಕೊಡುವಂತೆ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಅವರು ಪೋಷಕರನ್ನು ಸಮಾಧಾನಪಡಿಸಿದರು. ಈ ಸಂದರ್ಭ 1ನೇ ತರಗತಿಗೂ ಲಾಟರಿ ಮೂಲಕ ಆಯ್ಕೆ ಮಾಡುವಂತೆ ಪೋಷಕರು ಒತ್ತಾಯಿಸಿದರು. ಇಲಾಖೆ ಮೌಖೀಕ ಆದೇಶದಂತೆ 60 ಮಂದಿ ದಾಖಲಾತಿ ನಂತರ ಸ್ಥಗಿತ ಗೊಳಿಸಲಾಗಿದೆ. ಈಗ 30 ಮಂದಿಗೆ ಮಾತ್ರ ಪುಸ್ತಕ, ಬಟ್ಟೆ, ಊಟ ಮತ್ತಿತರ ಇಲಾಖೆ ಸೌಲಭ್ಯ ಸಿಗಲಿದ್ದು, ಉಳಿದವರಿಗೆ ಪೋಷಕರೆ ವೆಚ್ಚ ಭರಿಸಬೇಕು. ಹಾಗಾಗಿ 1ನೇ ತರಗತಿಯ ಬಗ್ಗೆ ಇನ್ನೂ ಸ್ಪಷ್ಟ ಆದೇಶ ಬಂದಿಲ್ಲ. ಬಂದ ನಂತರ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಒಟ್ಟಾರೆ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರ ದಂಡು ಶಾಲೆಯ ಮುಂದೆ ಜಮಾಯಿಸಿದ್ದು ಅಚ್ಚರಿ ಮೂಡಿಸುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…